ಬ್ರೇಕಿಂಗ್ ನ್ಯೂಸ್
27-09-24 03:25 pm Mangalore Correspondent ಕರಾವಳಿ
ಮಂಗಳೂರು, ಸೆ.27: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಕರಣಿಕರು ಕೆಲಸದ ಒತ್ತಡ ಮತ್ತು ಮೊಬೈಲ್ ಏಪ್ ಗಳಿಂದಾಗುವ ಸಮಸ್ಯೆಯಿಂದ ಬೇಸತ್ತು ಮಂಗಳೂರಿನಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಗಳಿಂದ ಬಂದಿರುವ 150ಕ್ಕೂ ಹೆಚ್ಚು ಗ್ರಾಮ ಕರಣಿಕರು ಮಂಗಳೂರಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಕರಣಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಪೂಜಾರಿ, ನಮ್ಮ ಜಿಲ್ಲೆಯಲ್ಲಿ ಒಟ್ಟು 325 ಗ್ರಾಮ ಕರಣಿಕರ ಹುದ್ದೆಗಳಿದ್ದರೂ, 90 ಹುದ್ದೆಗಳು ಖಾಲಿಯಿದ್ದು ಅದರ ಹೊಣೆಭಾರವನ್ನು ಉಳಿದವರ ಮೇಲೆ ಹೊರಿಸಿದ್ದಾರೆ. ಇದಲ್ಲದೆ, 20ಕ್ಕೂ ಹೆಚ್ಚು ಮೊಬೈಲ್ ಏಪ್ ಗಳನ್ನು ಬಳಸಿ ತಂತ್ರಜ್ಞಾನ ಆಧರಿತವಾಗಿ ಕೆಲಸ ಮಾಡಲು ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಶನಿವಾರ, ಭಾನುವಾರವೂ ರಜೆ ಇಲ್ಲದೆ ಕೆಲಸ ಮಾಡುವ ಸ್ಥಿತಿಯಾಗಿದೆ. 238 ಮಂದಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ತಾಲೂಕು ಕಚೇರಿ, ಡೀಸಿ ಕಚೇರಿಯಲ್ಲಿದ್ದಾರೆ. ಈಗ 138 ಸಿಬಂದಿ 422 ಗ್ರಾಮಗಳ ಹೊಣೆ ಭಾರ ಹೊತ್ತು ಕೆಲಸ ಮಾಡಬೇಕಾಗಿದೆ. ಇದರ ಬಗ್ಗೆ ಸರಕಾರದ ಗಮನ ಸೆಳೆಯುವುದಕ್ಕಾಗಿ ಧರಣಿ ಕುಳಿತಿದ್ದೇವೆ ಎಂದರು.
ಧರಣಿಯಲ್ಲಿ 50ಕ್ಕೂ ಹೆಚ್ಚು ಮಹಿಳಾ ಸಿಬಂದಿಯೂ ಕೈಜೋಡಿಸಿದ್ದಾರೆ. 2019ರಿಂದ ಗ್ರಾಮ ಕರಣಿಕರ ಹುದ್ದೆಗೆ ನೇಮಕಾತಿ ಆಗಿಲ್ಲ. ಹೀಗಾಗಿ ನಮ್ಮ ಮೇಲೆ ವಿಪರೀತ ಹೊಣೆ ಭಾರ ಹೊರಿಸಿದ್ದಾರೆ. ಕಂದಾಯ ಇಲಾಖೆಯ ಪ್ರತಿ ಕೆಲಸಕ್ಕೂ ವಿಎಗಳನ್ನು ಹೊಣೆಯಾಗಿಸಿ ಒತ್ತಡ ಹೇರುತ್ತಿದ್ದಾರೆ. ನಾವು ವೈಯಕ್ತಿಕ ಜೀವನವೇ ಇಲ್ಲದೆ ಕೆಲಸ ಮಾಡುವ ಸ್ಥಿತಿಯಾಗಿದೆ ಎಂದು ಉಷಾ ಎಂಬವರು ಅಲವತ್ತುಕೊಂಡರು. ಧರಣಿಯಲ್ಲಿ ಗ್ರಾಮ ಕರಣಿಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಅವಿನಾಶ್ ಬಿಲ್ಲವ, ಪುತ್ತೂರು ವಿಭಾಗ ಮಟ್ಟದ ಉಪಾಧ್ಯಕ್ಷೆ ಅಶ್ವಿನಿ, ಉಮೇಶ್ ಕಾವಡಿ, ಪ್ರಸನ್ನ ಪಕಳ, ತೌಫೀಕ್, ಶಿವರಾಜ್ ಗಾಯಕವಾಡ್, ಪ್ರದೀಪ್ ಶೆಣೈ ಮತ್ತಿತರರು ಇದ್ದರು.
Mobile app issues at office and work load, Mangalore village accountants hold protest in city.
27-09-24 06:19 pm
HK News Desk
DK Shivakumar, CM Siddaramaiah, Ramesh Jarkih...
27-09-24 06:11 pm
Siddaramaiah, FIR, Muda case: ಮುಖ್ಯಮಂತ್ರಿ ಸಿದ...
27-09-24 05:07 pm
Journalist Free bus pass: ಗ್ರಾಮೀಣ ಪತ್ರಕರ್ತರ ದ...
26-09-24 06:11 pm
Sandhya Pavitra Nagaraj, Honeytrap, Bhaskar P...
25-09-24 10:48 pm
25-09-24 05:36 pm
HK News Desk
ಪ್ರಾಣಿಜನ್ಯ ಕೊಬ್ಬಿನ ಬೆನ್ನಲ್ಲೇ ತಿರುಪತಿ ಲಡ್ಡಿನಲ್...
23-09-24 07:01 pm
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
27-09-24 03:51 pm
Mangalore Correspondent
Mangalore, village accountant protest: ಕೆಲಸದ...
27-09-24 03:25 pm
Flaunt Hair Transplant, Death, Mangalore:ಅಮಾಯ...
26-09-24 10:49 pm
VHP Mangalore, Tirupati Laddu: ತಿರುಪತಿ ಲಡ್ಡು...
26-09-24 08:59 pm
Manjunath Bhandary, Mangalore, CM Siddaramaia...
26-09-24 07:36 pm
27-09-24 02:27 pm
Mangalore Correspondent
Bangalore crime, Murder, Mahalakshmi: ಮದುವೆ,...
27-09-24 12:34 pm
Karwar Murder, crime, Twist: ಕಾರವಾರ ಕೊಲೆ ಪ್ರಕ...
26-09-24 11:07 pm
Bangalore Murder case, Suicide, Death Note; ಮ...
26-09-24 02:41 pm
Bangalore Murder, Accused Suicide: ಮಹಾಲಕ್ಷ್ಮಿ...
26-09-24 12:34 pm