ಬ್ರೇಕಿಂಗ್ ನ್ಯೂಸ್
27-09-24 03:25 pm Mangalore Correspondent ಕರಾವಳಿ
ಮಂಗಳೂರು, ಸೆ.27: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಕರಣಿಕರು ಕೆಲಸದ ಒತ್ತಡ ಮತ್ತು ಮೊಬೈಲ್ ಏಪ್ ಗಳಿಂದಾಗುವ ಸಮಸ್ಯೆಯಿಂದ ಬೇಸತ್ತು ಮಂಗಳೂರಿನಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಗಳಿಂದ ಬಂದಿರುವ 150ಕ್ಕೂ ಹೆಚ್ಚು ಗ್ರಾಮ ಕರಣಿಕರು ಮಂಗಳೂರಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಕರಣಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಪೂಜಾರಿ, ನಮ್ಮ ಜಿಲ್ಲೆಯಲ್ಲಿ ಒಟ್ಟು 325 ಗ್ರಾಮ ಕರಣಿಕರ ಹುದ್ದೆಗಳಿದ್ದರೂ, 90 ಹುದ್ದೆಗಳು ಖಾಲಿಯಿದ್ದು ಅದರ ಹೊಣೆಭಾರವನ್ನು ಉಳಿದವರ ಮೇಲೆ ಹೊರಿಸಿದ್ದಾರೆ. ಇದಲ್ಲದೆ, 20ಕ್ಕೂ ಹೆಚ್ಚು ಮೊಬೈಲ್ ಏಪ್ ಗಳನ್ನು ಬಳಸಿ ತಂತ್ರಜ್ಞಾನ ಆಧರಿತವಾಗಿ ಕೆಲಸ ಮಾಡಲು ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಶನಿವಾರ, ಭಾನುವಾರವೂ ರಜೆ ಇಲ್ಲದೆ ಕೆಲಸ ಮಾಡುವ ಸ್ಥಿತಿಯಾಗಿದೆ. 238 ಮಂದಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ತಾಲೂಕು ಕಚೇರಿ, ಡೀಸಿ ಕಚೇರಿಯಲ್ಲಿದ್ದಾರೆ. ಈಗ 138 ಸಿಬಂದಿ 422 ಗ್ರಾಮಗಳ ಹೊಣೆ ಭಾರ ಹೊತ್ತು ಕೆಲಸ ಮಾಡಬೇಕಾಗಿದೆ. ಇದರ ಬಗ್ಗೆ ಸರಕಾರದ ಗಮನ ಸೆಳೆಯುವುದಕ್ಕಾಗಿ ಧರಣಿ ಕುಳಿತಿದ್ದೇವೆ ಎಂದರು.



ಧರಣಿಯಲ್ಲಿ 50ಕ್ಕೂ ಹೆಚ್ಚು ಮಹಿಳಾ ಸಿಬಂದಿಯೂ ಕೈಜೋಡಿಸಿದ್ದಾರೆ. 2019ರಿಂದ ಗ್ರಾಮ ಕರಣಿಕರ ಹುದ್ದೆಗೆ ನೇಮಕಾತಿ ಆಗಿಲ್ಲ. ಹೀಗಾಗಿ ನಮ್ಮ ಮೇಲೆ ವಿಪರೀತ ಹೊಣೆ ಭಾರ ಹೊರಿಸಿದ್ದಾರೆ. ಕಂದಾಯ ಇಲಾಖೆಯ ಪ್ರತಿ ಕೆಲಸಕ್ಕೂ ವಿಎಗಳನ್ನು ಹೊಣೆಯಾಗಿಸಿ ಒತ್ತಡ ಹೇರುತ್ತಿದ್ದಾರೆ. ನಾವು ವೈಯಕ್ತಿಕ ಜೀವನವೇ ಇಲ್ಲದೆ ಕೆಲಸ ಮಾಡುವ ಸ್ಥಿತಿಯಾಗಿದೆ ಎಂದು ಉಷಾ ಎಂಬವರು ಅಲವತ್ತುಕೊಂಡರು. ಧರಣಿಯಲ್ಲಿ ಗ್ರಾಮ ಕರಣಿಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಅವಿನಾಶ್ ಬಿಲ್ಲವ, ಪುತ್ತೂರು ವಿಭಾಗ ಮಟ್ಟದ ಉಪಾಧ್ಯಕ್ಷೆ ಅಶ್ವಿನಿ, ಉಮೇಶ್ ಕಾವಡಿ, ಪ್ರಸನ್ನ ಪಕಳ, ತೌಫೀಕ್, ಶಿವರಾಜ್ ಗಾಯಕವಾಡ್, ಪ್ರದೀಪ್ ಶೆಣೈ ಮತ್ತಿತರರು ಇದ್ದರು.
Mobile app issues at office and work load, Mangalore village accountants hold protest in city.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm