ಬ್ರೇಕಿಂಗ್ ನ್ಯೂಸ್
04-10-24 09:40 pm Udupi Correspondent ಕರಾವಳಿ
ಉಡುಪಿ, ಅ.4: ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಕಲುಷಿತ ನೀರಿನಿಂದಾಗಿ ವಾಂತಿಭೇದಿ ಕಾಣಿಸಿಕೊಂಡ ಪ್ರಕರಣದ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಸಾವಿರಾರು ಜನರಿಗೆ ವಾಂತಿಭೇದಿ ಆಗಿಲ್ಲ. ಪ್ರತಿ ಮನೆಗೆ ಭೇಟಿ ನೀಡಿದ್ದೇವೆ. ಪ್ರತಿ ದಿನ 25-30 ಕೇಸು ಪತ್ತೆಯಾಗಿದೆ. ಒಟ್ಟು 143 ಪ್ರಕರಣ ಪತ್ತೆಯಾಗಿದೆ. ಕಾಲರಾ ಅಲ್ಲ, ಆಮಶಂಕೆ ಇರುವಂತೆ ತೋರುತ್ತಿದೆ ಎಂದು ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ನಾಗರತ್ನ ಹೇಳಿದ್ದಾರೆ,
ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವೆಡೆ ಏಕಕಾಲದಲ್ಲಿ ವಾಂತಿಭೇದಿ ಮಾದರಿಯಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ಕಲುಷಿತ ನೀರು ಕಾರಣ ಎಂದು ಸುದ್ದಿಯಾಗಿತ್ತು. ಕಾಲರಾ ರೋಗ ಕಾಣಿಸಿಕೊಂಡಿರಬಹುದು ಎಂದು ಆರೋಗ್ಯ ಇಲಾಖೆಯವರು ತಪಾಸಣೆಗೆ ಮುಂದಾಗಿದ್ದರು. ವಾಂತಿ- ಭೇದಿ ಬಗ್ಗೆ ಪ್ರಯೋಗಾಲಯ ವರದಿ ಪಡೆಯಲಾಗಿದ್ದು, ಕಾಲರಾ ಇಲ್ಲ. ಅಲ್ಲಿ ಪತ್ತೆಯಾಗಿರುವುದು ಆಮಶಂಕೆ ಪ್ರಕರಣ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಸಾವಿರಾರು ಜನರಿಗೆ ವಾಂತಿ ಭೇದಿ ಆಗಿಲ್ಲ. ಪ್ರತೀ ಮನೆಗೆ ಭೇಟಿ ಬಳಿಕ 143 ಪ್ರಕರಣ ಕಂಡುಬಂದಿದೆ. ಪ್ರತಿ ದಿನ 25ರಿಂದ 30 ಕೇಸು ಪತ್ತೆಯಾಗಿತ್ತು. ಸೆಪ್ಟೆಂಬರ್ 27ರಿಂದ ಹಲವರಲ್ಲಿ ವಾಂತಿಭೇದಿ ಕಂಡುಬಂದಿತ್ತು. ಜಿಲ್ಲೆಯಲ್ಲಿ ಕಾಲರಾ ಭೀತಿ ಇದ್ದುದರಿಂದ ನಾವು ತಕ್ಷಣ ಅಲರ್ಟ್ ಆಗಿದ್ದೆವು. ಕಾಲರ ಇರಬಹುದೆಂದು ಭಾವಿಸಿ, ಸರ್ವೇಕ್ಷಣೆ ಮಾಡಲಾಗಿತ್ತು. ಅದೃಷ್ಟವಶಾತ್ ಯಾರಲ್ಲೂ ಕಾಲರಾ ಪತ್ತೆಯಾಗಿಲ್ಲ.
ಸಾಮಾನ್ಯ ಕಲುಶಿತ ನೀರಿನಿಂದಾಗಿ ವಾಂತಿ ಭೇದಿ ಉಂಟಾಗಿತ್ತು. ಮಲ ಪರೀಕ್ಷೆ ನಡೆಸಿದಾಗ ಇಬ್ಬರಲ್ಲಿ ಆಮಶಂಕೆ ಪತ್ತೆಯಾಗಿದೆ. ಎಲ್ಲಾ ರೋಗಿಗಳು ಗುಣಮುಖರಾಗಿದ್ದಾರೆ. ಸಂತ್ರಸ್ತ ಪ್ರದೇಶದ ನೀರಿನ ಪರೀಕ್ಷೆ ನಡೆಸಿದ್ದೇವೆ. ಕುಡಿಯುವ ನೀರನ್ನು ಕ್ಲೋರಿನೇಷನ್ ಮಾಡಿದ್ದೇವೆ. ಎಲ್ಲಾ ಓವರ್ ಹೆಡ್ ಟ್ಯಾಂಕುಗಳನ್ನು ಸ್ವಚ್ಛಗೊಳಿಸಿದ್ದೇವೆ. ವಿಪರೀತ ಮಳೆ, ನೆರೆಯಿಂದ ನೀರು ಕಲುಷಿತ ಆಗಿರಬಹುದು. ನೀರಿನಲ್ಲಿ ಕ್ಲೋರಿನ್ ಪ್ರಮಾಣ ಹೆಚ್ಚಾಗಿದೆ ಅನ್ನೋದು ಸುಳ್ಳು. ವೈಜ್ಞಾನಿಕವಾಗಿ ಕ್ಲೋರಿನೇಶನ್ ಮಾಡಿದ್ದೇವೆ. ಕುಡಿಯಲು ನೀರು ಯೋಗ್ಯ ಎಂದು ವರದಿ ಬಂದ ಮೇಲೆ ಸರಬರಾಜು ಮಾಡಿದ್ದೇವೆ. ಅಗತ್ಯ ಬಿದ್ದರೆ ಸೂಪರ್ ಕ್ಲೋರಿನೇಷನ್ ಮಾಡುತ್ತೇವೆ ಎಂದಿದ್ದಾರೆ.
ಕ್ಲೋರಿನ್ ನಿಂದ ಈ ರೀತಿಯ ಕಾಯಿಲೆ ಬರುತ್ತೆ ಅನ್ನೋದು ತಪ್ಪು ತಿಳುವಳಿಕೆ. ಒಳರೋಗಿಗಳಾಗಿ ದಾಖಲಾದವರ ಸಂಖ್ಯೆ ನಿಯಂತ್ರಣದಲ್ಲಿದೆ. ಕಾಲರಾ ಇರಬಹುದು ಎಂಬ ಕಾರಣಕ್ಕೆ ಆತಂಕವಾಗಿತ್ತು. ಬೇರೆ ಬೇರೆ ಮೂಲಗಳಿಂದ ಕಾಲಾರಾ ಬಂದರೆ ನಿಯಂತ್ರಣ ಕಷ್ಟವಾಗುತ್ತದೆ. ಇದು ಕಾಲರಾ ಅಲ್ಲ, ಹಾಗಾಗಿ ಸಮಸ್ಯೆ ಇಲ್ಲ ಎಂದು ನಾಗರತ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
More than one thousand residents at Uppunda in Udupi district fell ill after drinking contaminated water from a local overhead water tank, Health Department officials said on Friday.
09-02-26 07:20 pm
Bangalore Correspondent
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
10-02-26 02:15 pm
HK News Desk
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
ಕೆನಡಾದಲ್ಲಿ ಗುಂಡಿಟ್ಟು ಕನ್ನಡಿಗ ಸಾಫ್ಟ್ವೇರ್ ಇಂಜಿ...
09-02-26 10:25 pm
ಜಾಗತಿಕ ಷೇರು ಮಾರುಕಟ್ಟೆಯಲ್ಲಿ 'ಆಂಥ್ರೋಪಿಕ್' AI ಬಿ...
09-02-26 12:27 pm
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
09-02-26 11:20 pm
HK News Desk
Mangalore Accident, Bus: ನಂತೂರಿನಲ್ಲಿ ಅಪಘಾತಕ್ಕ...
09-02-26 08:02 pm
ಕೆಪಿಟಿ ಜಂಕ್ಷನ್ ಬಳಿಯ ಹೆದ್ದಾರಿ ಡಿವೈಡರ್ ಮುಚ್ಚಿದ್...
09-02-26 02:50 pm
ಸೌಜನ್ಯಾ ಕೊಲೆ ಪ್ರಕರಣ ; ದೋಷಪೂರಿತ ತನಿಖೆ ನಡೆಸಿದ ಅ...
08-02-26 11:17 pm
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
10-02-26 04:38 pm
Bangalore Correspondent
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am
ಜಾಲತಾಣದಲ್ಲೇ ಪಡ್ಡೆ ಹುಡುಗರಿಗೆ ಬಲೆ, ಖತರ್ನಾಕ್ ಪ್...
09-02-26 02:04 pm
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm