ಬ್ರೇಕಿಂಗ್ ನ್ಯೂಸ್
13-10-24 08:23 pm Mangalore Correspondent ಕರಾವಳಿ
ಉಳ್ಳಾಲ, ಅ.13: ಉಳ್ಳಾಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ಬೀಚ್ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಡೆಗಣಿಸಿದ್ದು, ಇಲ್ಲಿನ ಜೀವ ರಕ್ಷಕ ಸಿಬ್ಬಂದಿಯ ಆಶ್ರಯಕ್ಕಾಗಿ ವಿಶ್ರಾಂತಿ ಕೊಠಡಿಯನ್ನೂ ಇಲಾಖೆ ನಿರ್ಮಿಸಿಲ್ಲ. ಜೀವದ ಹಂಗು ತೊರೆದು ಸಮುದ್ರ ಪಾಲಾಗುವ ಪ್ರವಾಸಿಗರನ್ನ ರಕ್ಷಿಸುವ ಜೀವ ರಕ್ಷಕರ ಬವಣೆಯನ್ನ ಅರಿತ "ಫ್ರೆಂಡ್ಸ್ ಕೊಲ್ಯ"ದ ಉತ್ಸಾಹಿ ಯುವಕರು ಅಗಲಿದ ಆತ್ಮೀಯ ಸ್ನೇಹಿತನ ಸ್ಮರಣಾರ್ಥ ಸೋಮೇಶ್ವರ ಬೀಚಿನಲ್ಲಿ ಜೀವ ರಕ್ಷಕ ಸಿಬ್ಬಂದಿಗಳಿಗಾಗಿ ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಟ್ಟಿದ್ದು , ಯುವಕರ ಈ ಸಮಾಜಮುಖಿ ಕಾರ್ಯವು ಪ್ರವಾಸೋದ್ಯಮ ಇಲಾಖೆಯನ್ನ ಅಣಕಿಸಿದಂತಿದೆ.
ಪ್ರವಾಸಿಗರ ಪಾಲಿಗೆ ಸೋಮೇಶ್ವರ ಬೀಚ್ ಫೇಮಸ್. ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ಈ ಬೀಚ್ ಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಪ್ರವಾಸಿಗರನ್ನ ಬೀಚ್ ನತ್ತ ಆಕರ್ಷಿಸಬೇಕಾದ ಪ್ರವಾಸೋದ್ಯಮ ಇಲಾಖೆ ಇದುವರೆಗೂ ಜೀವ ರಕ್ಷಕರಿಗೆ ಕನಿಷ್ಠ ಒಂದು ಆಶ್ರಯ ಕೊಠಡಿಯನ್ನೂ ನಿರ್ಮಿಸಿಲ್ಲ. ಘಟ್ಟ ಪ್ರದೇಶದ ಪ್ರವಾಸಿಗರು ಕರಾವಳಿಯ ಸಮುದ್ರದ ಪ್ರಕ್ಷುಬ್ಧತೆಯನ್ನ ತಿಳಿಯದೆ ನೀರಾಟಕ್ಕಿಳಿದು ಪ್ರಾಣಕ್ಕೆ ಕಂಟಕ ತರುತ್ತಾರೆ. ಈ ಸಂದರ್ಭ ಇಲ್ಲಿನ ಜೀವರಕ್ಷಕ ಸಿಬ್ಬಂದಿಗಳೇ ಅಪಾಯಕ್ಕೀಡಾದವರನ್ನು ರಕ್ಷಿಸುತ್ತಾರೆ.
ಕರಾವಳಿ ಕಾವಲು ಪಡೆಯ ಅರೆಕಾಲಿಕ ಜೀವ ರಕ್ಷಕ ಸಿಬ್ಬಂದಿ ಅಶೋಕ್ ಸೋಮೇಶ್ವರ ಅವರು ಸಮುದ್ರ ಪಾಲಾಗುತ್ತಿರುವ ಅದೆಷ್ಟೋ ಜನರನ್ನು ರಕ್ಷಿಸಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸೋಮೇಶ್ವರ ಬೀಚಿನಲ್ಲಿ ಪ್ರವಾಸಿಗರನ್ನ ಕಾಯುವ ಜೀವರಕ್ಷಕ ಸಿಬ್ಬಂದಿಗಳು ಹಳೆಯ ಬೋಟಿನ ಅವಶೇಷವನ್ನೇ ಇಷ್ಟು ದಿವಸ ವಿಶ್ರಾಂತಿ ಕೊಠಡಿಯನ್ನಾಗಿಸಿದ್ದರು. ಇವರ ಕಷ್ಟವನ್ನ ಅರಿತ ಕೊಲ್ಯದ "ಫ್ರೆಂಡ್ಸ್ ಕೊಲ್ಯ" ಸಂಘಟನೆಯ ಯುವಕರು ತಮ್ಮ ಸ್ವಂತ ಹಣ ಮತ್ತು ದಾನಿಗಳ ಸಹಕಾರದಿಂದ 2.5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ವಿಶ್ರಾಂತಿ ಕೊಠಡಿಯೊಂದನ್ನು ನಿರ್ಮಿಸಿ ಕೊಟ್ಟಿದ್ದಾರೆ.
ಎಪ್ರಿಲ್ ತಿಂಗಳಲ್ಲಿ ಸ್ನೇಹಿತನ ಅಕಾಲಿಕ ಸಾವು
ಕಳೆದ ಎಪ್ರಿಲ್ 22 ರ ರಾತ್ರಿ ಕೊಲ್ಯದ ಮಳಯಾಲ ಕೋಡಿ ದೈವಸ್ಥಾನದ ವಲಸರಿ ಜಾತ್ರೆ ನೋಡಿ ಮನೆಯಲ್ಲಿ ಮಲಗಿದ್ದ ನವವಿವಾಹಿತ ಕೊಲ್ಯದ ಕನೀರುತೋಟ ನಿವಾಸಿ ಜಿತೇಶ್(28) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಜಿತೇಶ್ ಫ್ರೆಂಡ್ಸ್ ಕೊಲ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅಗಲಿದ ಸ್ನೇಹಿತನ ಹೆಸರನ್ನು ಸದಾ ಸ್ಮರಿಸುವುದಕ್ಕಾಗಿ ಆತನ ಹೆಸರಲ್ಲಿ ಕೊಠಡಿಯನ್ನು ಗೆಳೆಯರು ನಿರ್ಮಿಸಿದ್ದಾರೆ.
ಜೀವ ರಕ್ಷಕ ಸಿಬ್ಬಂದಿಗಳು ಹಳೆಯ ಬೋಟಿನ ಅವಶೇಷದಲ್ಲಿ ಆಶ್ರಯ ಪಡೆದಿರುವುದನ್ನ ಕಂಡು ಮನಸ್ಸಿಗೆ ತುಂಬ ಬೇಸರವಾಗಿತ್ತು. ನಾವು ಪ್ರತೀ ವರುಷದ ನವರಾತ್ರಿಗೆ ದಾನಿಗಳ ಸಹಕಾರದಿಂದ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಈ ಬಾರಿ ನಮ್ಮನ್ನಗಲಿದ ಸ್ನೇಹಿತ ಜಿತೇಶ್ ಸ್ಮರಣಾರ್ಥ ಜೀವರಕ್ಷಕ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಿದ್ದೇವೆ ಎಂದು ಫ್ರೆಂಡ್ಸ್ ಕೊಲ್ಯದ ಸ್ಥಾಪಕಾಧ್ಯಕ್ಷ ಅಶ್ವಿನ್ ಕೊಲ್ಯ ಹೇಳಿದ್ದಾರೆ.
ಪ್ರವಾಸಿಗರು ಸಮುದ್ರ ಪಾಲಾಗುವ ಸಂದರ್ಭದಲ್ಲಿ ನಮ್ಮ ಬಟ್ಟೆ, ಇನ್ನಿತರ ಸೊತ್ತುಗಳನ್ನ ಇಡಲು ಸುರಕ್ಷಿತ ಪ್ರದೇಶವಿರದೆ ಹಳೆಯ ಬೋಟ್ ಒಂದರ ಅವಶೇಷವನ್ನ ತಂದಿರಿಸಿ ಅದನ್ನೇ ವಿಶ್ರಾಂತಿ ಕೊಠಡಿಯನ್ನಾಗಿಸಿದ್ದೆವು. ಫ್ರೆಂಡ್ಸ್ ಕೊಲ್ಯದ ಯುವಕರು ಸಮುದ್ರ ತೀರಕ್ಕೆ ಬಂದಾಗ ನಮ್ಮ ಸಮಸ್ಯೆಯನ್ನ ಆಲಿಸಿದ್ದರು. ಯುವಕರು ಸುಸಜ್ಜಿತ ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಟ್ಟಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೀವ ರಕ್ಷಕ ಅಶೋಕ್ ಸೋಮೇಶ್ವರ ಹೇಳಿದ್ದಾರೆ.
Youth build Rest room for lifeguards at Someshwar Beach in memory of a departed friend in Mangalore.
19-09-25 10:04 pm
Bangalore Correspondent
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
19-09-25 05:45 pm
HK News Desk
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
19-09-25 10:46 pm
Mangalore Correspondent
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ; ಆರೋಪಿ...
19-09-25 04:58 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm