ಬ್ರೇಕಿಂಗ್ ನ್ಯೂಸ್
16-12-20 04:48 pm Mangalore Correspondent ಕರಾವಳಿ
ಮಂಗಳೂರು, ಡಿ.16: ಕರ್ನಾಟಕದ ದರಿದ್ರ ಬಿಜೆಪಿ ಸರಕಾರ ಪಂಚಾಯತ್ ಚುನಾವಣೆಯನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಆಟವಾಡಿದ ಬಿಜೆಪಿ ಈಗ ಕಾಂಗ್ರೆಸ್ ಬೆಂಬಲಿತರನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ಹೆದರಿಸಿ, ಬೆದರಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿಸಿ, ಕೆಲವು ಕಡೆ ಅವಿರೋಧ ಆಯ್ಕೆ ಆಗಿದೆ. ಹೀಗಾಗಿ ಈ ಬಾರಿ ಪಾರದರ್ಶಕವಾಗಿ ಚುನಾವಣೆ ನಡೆಯುತ್ತದೆ ಎನ್ನುವ ಭರವಸೆ ಇಲ್ಲ. ಪಾರದರ್ಶಕ ಚುನಾವಣೆ ನಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಬಿಜೆಪಿಯ ಈ ರೀತಿಯ ವರ್ತನೆಗೆ ಈ ಬಾರಿ ಮತದಾರರೇ ತಕ್ಕ ಉತ್ತರ ನೀಡಬೇಕಾಗಿದೆ. ಜನವಿರೋಧಿ ಸರಕಾರದ ವಿರುದ್ಧ ಮತದಾರರು ಮತ ಚಲಾವಣೆಯ ಮೂಲಕ ಉತ್ತರ ನೀಡಬೇಕು. ಆದರೆ, ಇದು ಪಾರದರ್ಶಕ ಚುನಾವಣೆ ನಡೆದರಷ್ಟೇ ಸಾಧ್ಯ ಎಂದು ಹೇಳಿದರು.
ಪರಿಷತ್ತಿನಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೇ !
ಇದೇ ವೇಳೆ, ವಿಧಾನ ಪರಿಷತ್ತಿನಲ್ಲಿ ಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ, ಅದಕ್ಕೆ ಬಿಜೆಪಿಯೇ ಕಾರಣ. ಒಂದ್ಕಡೆ ಸಭಾಪತಿಯ ಪೀಠದಲ್ಲಿ ಉಪ ಸಭಾಪತಿಯನ್ನು ಕೂರಿಸಲಾಗಿತ್ತು. ಮತ್ತೊಂದ್ಕಡೆ ಬಿಜೆಪಿಯವರು ಬಾಗಿಲು ಹಾಕಿ ಸಭಾಪತಿಯನ್ನು ತಡೆದಿದ್ದರು. ಹೀಗೆ ತಡೆದಿದ್ದು ಕಾಂಗ್ರೆಸ್ ಸದಸ್ಯರನ್ನು ಪ್ರಚೋದಿಸುವಂತೆ ಮಾಡಿತ್ತು. ಇದರಿಂದ ಕೆರಳಿ, ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯವರು ಬಾಗಿಲು ಹಾಕಿದ್ದು ಸರಿಯಾ ಎಂದು ಪ್ರಶ್ನೆ ಮಾಡಿದ್ರು. ಬಿಜೆಪಿಯವರ ಈ ರೀತಿಯ ಕ್ರಿಯೆಗೆ ಆ ರೀತಿಯ ಪ್ರತಿಕ್ರಿಯೆ ಆಗಿದೆ ಅಷ್ಟೇ. ಈ ಹಿಂದೆಯೂ ಯಡಿಯೂರಪ್ಪ ಸರಕಾರ ಇದ್ದಾಗ, ಇಂಥದ್ದೇ ಘಟನೆ ನಡೆದಿತ್ತು. ಬಾಗಿಲು ಹಾಕಿ ಕಲಾಪ ನಡೆಸಿದ್ದರು. ಯಡಿಯೂರಪ್ಪ ಸರಕಾರ ಇರುವಾಗಲೇ ಯಾಕೆ ಇಂಥ ಘಟನೆಗಳಾಗುತ್ತವೆ ಎಂದು ಪ್ರಶ್ನಿಸಿದರು.
Video:
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
07-02-26 10:53 pm
HK News Desk
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 10:48 pm
HK News Desk
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm
ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಪ...
07-02-26 08:14 pm
Shivamogga Conversion: ಶಿಕ್ಷಕಿಯಾದ ಬಳಿಕ ಪತ್ನಿ...
07-02-26 06:44 pm
Bangalore Cat Kidnap: ಬೆಂಗಳೂರಿನಲ್ಲಿ ಠಾಣೆ ಮೆಟ್...
07-02-26 05:21 pm