ಬ್ರೇಕಿಂಗ್ ನ್ಯೂಸ್
25-02-25 09:34 pm Mangalore Correspondent ಕರಾವಳಿ
ಮಂಗಳೂರು, ಫೆ.25: ಕರ್ನಾಟಕದ ಮೊದಲ ಸಿ – ಬ್ಯಾಂಡ್ ಡೋಪ್ಲಾರ್ ವೆದರ್ ರಾಡಾರ್ (ಡಿಡಬ್ಲ್ಯುಆರ್) ಮಂಗಳೂರಿನ ಶಕ್ತಿನಗರದಲ್ಲಿ ಸ್ಥಾಪನೆಯಾಗುತ್ತಿದ್ದು, ಮಾರ್ಚ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಈಗಾಗಲೇ ರಾಡಾರ್ ಸ್ಥಾಪನೆ ಕಾಮಗಾರಿ 80 ಶೇಕಡಾ ಪೂರ್ತಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ಮುಖ್ಯಸ್ಥ ಎನ್. ಪುವಿಯರಸನ್ ತಿಳಿಸಿದ್ದಾರೆ.
ರಾಡಾರ್ ವ್ಯವಸ್ಥೆ ಜಾರಿಗೆ ಬಂದಲ್ಲಿ ಹವಾಮಾನ ವೈಪರೀತ್ಯ, ಬಿಸಿಲು, ಗಾಳಿಯಲ್ಲಿ ಬದಲಾವಣೆ, ಮೋಡಗಳ ಸಾಂದ್ರತೆ, ಮಳೆ, ಚಂಡಮಾರುತ ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಕರಾರುವಾಕ್ ಮಾಹಿತಿ ಪಡೆಯಬಹುದು. ಮಂಗಳೂರಿನ ಶಕ್ತಿನಗರದಲ್ಲಿ ಎತ್ತರದ ಜಾಗವನ್ನು ಗುರುತಿಸಿ ರಾಡಾರ್ ಸ್ಥಾಪನೆ ಮಾಡಲಾಗಿದ್ದು, ಕೆಲಸ ಪೂರ್ತಿಯಾದ ಕೂಡಲೇ ನಾವು ಟ್ರಯಲ್ ನೋಡುತ್ತೇವೆ. ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಗಿಯಬಹುದೆಂಬ ನಿರೀಕ್ಷೆ ಇದೆ. ಎಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡಬಹುದು ಎಂದು ಪುವಿಯರಸನ್ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.
ಅಂದಹಾಗೆ, ಮಂಗಳೂರಿನ ಡೋಪ್ಲರ್ ರಾಡಾರ್ ರಾಜ್ಯದ ಮೊದಲ ಈ ಮಾದರಿಯ ವ್ಯವಸ್ಥೆಯಾಗಿದ್ದು, ಸದ್ಯದಲ್ಲೇ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಗುವುದು. ಎತ್ತರದ ಜಾಗ ಆಗಬೇಕಿರುವುದರಿಂದ ಅಲ್ಲಿ ಇನ್ನೂ ಸರಿಯಾದ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ಆನಂತರ, ಧಾರವಾಡ ಮತ್ತು ಬಳ್ಳಾರಿ ಅಥವಾ ಕಲಬುರಗಿಯಲ್ಲೂ ರಾಡಾರ್ ಸ್ಥಾಪಿಸುವ ಉದ್ದೇಶ ಇದೆ. ಆಮೂಲಕ ಇಡೀ ಕರ್ನಾಟಕದಲ್ಲಿ ಮಳೆ ವೈಪರೀತ್ಯ ಇನ್ನಿತರ ಹವಾಮಾನ ಸಂಬಂಧಿತ ವಿಚಾರಗಳನ್ನು ಮೊದಲೇ ಅರಿತುಕೊಳ್ಳಲು ಸಾಧ್ಯವಿದೆ. ಒಂದು ಡೋಪ್ಲರ್ ರಾಡಾರ್ ವ್ಯವಸ್ಥೆ 250 ಕಿಮೀ ವ್ಯಾಪ್ತಿ ಹೊಂದಿದ್ದು, ಕರಾವಳಿ ಭಾಗವನ್ನು ಪೂರ್ತಿಯಾಗಿ ಕವರ್ ಮಾಡುತ್ತದೆ. ಪೂರ್ವದಲ್ಲಿ ಘಟ್ಟ ಇರುವುದರಿಂದ ಆ ಭಾಗದ ಸಿಗ್ನಲ್ ಕೊಂಚ ಕಡಿಮೆಯಾಗಬಹುದು ಎಂದವರು ಹೇಳಿದ್ದಾರೆ.
ಕೇರಳದಲ್ಲಿ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ರಾಡಾರ್ ಡೋಪ್ಲರ್ ವ್ಯವಸ್ಥೆ ಇದೆ. ತಮಿಳುನಾಡಿನಲ್ಲಿ ಚೆನ್ನೈ ಮತ್ತು ಕರೈಕಲ್ ನಲ್ಲಿ ಇದೆ. ಕರ್ನಾಟಕದಲ್ಲಿ ಇಂತಹ ವ್ಯವಸ್ಥೆ ಈಗಷ್ಟೇ ಜಾರಿಗೆ ಬರುತ್ತಿದೆ. ಕರಾವಳಿಯಲ್ಲಿ ಆಗಿಂದಾಗ್ಗೆ ಅತಿ ಹೆಚ್ಚು ಮಳೆಯಾಗುವುದು, ಅದರಿಂದ ಹವಾಮಾನ ವೈಪರೀತ್ಯಗಳು ಆಗುತ್ತಿರುವುದರಿಂದ ರಾಡಾರ್ ಜಾರಿಗೆ ಒತ್ತು ನೀಡಲಾಗಿದೆ. ಒಂದು ರಾಡಾರ್ ಸ್ಥಾಪನೆಗೆ 8ರಂದ 10 ಕೋಟಿ ಖರ್ಚು ತಗಲುತ್ತದೆ ಎಂದು ಪುವಿಯರಸನ್ ಮಾಹಿತಿ ನೀಡಿದ್ದಾರೆ.
Karnataka's first C-Band Doppler Weather Radar (DWR), currently under construction in Mangaluru, is expected to be operational by March, according to N. Puviarasan, head of the India Meteorological Department's (IMD) Bengaluru center. The installation of this radar will enhance weather monitoring and forecasting capabilities in the region, providing timely and accurate information that is crucial for disaster management and agricultural practices.
25-02-25 10:30 pm
Bangalore Correspondent
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 10:58 pm
Mangalore Correspondent
C-Band Doppler Weather Radar, Mangalore: ಮಂಗಳ...
25-02-25 09:34 pm
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
25-02-25 08:10 pm
Mangalore Correspondent
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm