ಬ್ರೇಕಿಂಗ್ ನ್ಯೂಸ್
25-02-25 09:34 pm Mangalore Correspondent ಕರಾವಳಿ
ಮಂಗಳೂರು, ಫೆ.25: ಕರ್ನಾಟಕದ ಮೊದಲ ಸಿ – ಬ್ಯಾಂಡ್ ಡೋಪ್ಲಾರ್ ವೆದರ್ ರಾಡಾರ್ (ಡಿಡಬ್ಲ್ಯುಆರ್) ಮಂಗಳೂರಿನ ಶಕ್ತಿನಗರದಲ್ಲಿ ಸ್ಥಾಪನೆಯಾಗುತ್ತಿದ್ದು, ಮಾರ್ಚ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಈಗಾಗಲೇ ರಾಡಾರ್ ಸ್ಥಾಪನೆ ಕಾಮಗಾರಿ 80 ಶೇಕಡಾ ಪೂರ್ತಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ಮುಖ್ಯಸ್ಥ ಎನ್. ಪುವಿಯರಸನ್ ತಿಳಿಸಿದ್ದಾರೆ.
ರಾಡಾರ್ ವ್ಯವಸ್ಥೆ ಜಾರಿಗೆ ಬಂದಲ್ಲಿ ಹವಾಮಾನ ವೈಪರೀತ್ಯ, ಬಿಸಿಲು, ಗಾಳಿಯಲ್ಲಿ ಬದಲಾವಣೆ, ಮೋಡಗಳ ಸಾಂದ್ರತೆ, ಮಳೆ, ಚಂಡಮಾರುತ ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಕರಾರುವಾಕ್ ಮಾಹಿತಿ ಪಡೆಯಬಹುದು. ಮಂಗಳೂರಿನ ಶಕ್ತಿನಗರದಲ್ಲಿ ಎತ್ತರದ ಜಾಗವನ್ನು ಗುರುತಿಸಿ ರಾಡಾರ್ ಸ್ಥಾಪನೆ ಮಾಡಲಾಗಿದ್ದು, ಕೆಲಸ ಪೂರ್ತಿಯಾದ ಕೂಡಲೇ ನಾವು ಟ್ರಯಲ್ ನೋಡುತ್ತೇವೆ. ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಗಿಯಬಹುದೆಂಬ ನಿರೀಕ್ಷೆ ಇದೆ. ಎಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡಬಹುದು ಎಂದು ಪುವಿಯರಸನ್ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.
ಅಂದಹಾಗೆ, ಮಂಗಳೂರಿನ ಡೋಪ್ಲರ್ ರಾಡಾರ್ ರಾಜ್ಯದ ಮೊದಲ ಈ ಮಾದರಿಯ ವ್ಯವಸ್ಥೆಯಾಗಿದ್ದು, ಸದ್ಯದಲ್ಲೇ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಗುವುದು. ಎತ್ತರದ ಜಾಗ ಆಗಬೇಕಿರುವುದರಿಂದ ಅಲ್ಲಿ ಇನ್ನೂ ಸರಿಯಾದ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ಆನಂತರ, ಧಾರವಾಡ ಮತ್ತು ಬಳ್ಳಾರಿ ಅಥವಾ ಕಲಬುರಗಿಯಲ್ಲೂ ರಾಡಾರ್ ಸ್ಥಾಪಿಸುವ ಉದ್ದೇಶ ಇದೆ. ಆಮೂಲಕ ಇಡೀ ಕರ್ನಾಟಕದಲ್ಲಿ ಮಳೆ ವೈಪರೀತ್ಯ ಇನ್ನಿತರ ಹವಾಮಾನ ಸಂಬಂಧಿತ ವಿಚಾರಗಳನ್ನು ಮೊದಲೇ ಅರಿತುಕೊಳ್ಳಲು ಸಾಧ್ಯವಿದೆ. ಒಂದು ಡೋಪ್ಲರ್ ರಾಡಾರ್ ವ್ಯವಸ್ಥೆ 250 ಕಿಮೀ ವ್ಯಾಪ್ತಿ ಹೊಂದಿದ್ದು, ಕರಾವಳಿ ಭಾಗವನ್ನು ಪೂರ್ತಿಯಾಗಿ ಕವರ್ ಮಾಡುತ್ತದೆ. ಪೂರ್ವದಲ್ಲಿ ಘಟ್ಟ ಇರುವುದರಿಂದ ಆ ಭಾಗದ ಸಿಗ್ನಲ್ ಕೊಂಚ ಕಡಿಮೆಯಾಗಬಹುದು ಎಂದವರು ಹೇಳಿದ್ದಾರೆ.
ಕೇರಳದಲ್ಲಿ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ರಾಡಾರ್ ಡೋಪ್ಲರ್ ವ್ಯವಸ್ಥೆ ಇದೆ. ತಮಿಳುನಾಡಿನಲ್ಲಿ ಚೆನ್ನೈ ಮತ್ತು ಕರೈಕಲ್ ನಲ್ಲಿ ಇದೆ. ಕರ್ನಾಟಕದಲ್ಲಿ ಇಂತಹ ವ್ಯವಸ್ಥೆ ಈಗಷ್ಟೇ ಜಾರಿಗೆ ಬರುತ್ತಿದೆ. ಕರಾವಳಿಯಲ್ಲಿ ಆಗಿಂದಾಗ್ಗೆ ಅತಿ ಹೆಚ್ಚು ಮಳೆಯಾಗುವುದು, ಅದರಿಂದ ಹವಾಮಾನ ವೈಪರೀತ್ಯಗಳು ಆಗುತ್ತಿರುವುದರಿಂದ ರಾಡಾರ್ ಜಾರಿಗೆ ಒತ್ತು ನೀಡಲಾಗಿದೆ. ಒಂದು ರಾಡಾರ್ ಸ್ಥಾಪನೆಗೆ 8ರಂದ 10 ಕೋಟಿ ಖರ್ಚು ತಗಲುತ್ತದೆ ಎಂದು ಪುವಿಯರಸನ್ ಮಾಹಿತಿ ನೀಡಿದ್ದಾರೆ.
Karnataka's first C-Band Doppler Weather Radar (DWR), currently under construction in Mangaluru, is expected to be operational by March, according to N. Puviarasan, head of the India Meteorological Department's (IMD) Bengaluru center. The installation of this radar will enhance weather monitoring and forecasting capabilities in the region, providing timely and accurate information that is crucial for disaster management and agricultural practices.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm