ಬ್ರೇಕಿಂಗ್ ನ್ಯೂಸ್
02-03-25 06:10 pm Udupi Correspondent ಕರಾವಳಿ
ಉಡುಪಿ, ಮಾ.2: ಕುಂಭಮೇಳ ನಡೆದ ತ್ರಿವೇಣಿ ಸಂಗಮದಲ್ಲಿ ನೀರಿಗೇನಾದರೂ ಜಾತಿ ಇದೆಯಾ. ಪಾರ್ಟಿ ಇದೆಯಾ.. ಮೂರು ನದಿಗಳು ಸೇರುವಂತಹ ಪವಿತ್ರ ಜಾಗದಲ್ಲಿ ಮುಳುಗು ಹಾಕಿ ಬಂದಿದ್ದೇನೆ. ಅದೇ ದಿನ ರಾತ್ರಿ 12 ಗಂಟೆಗೆ ಮೈಸೂರಿನ ಟಿ ನರಸೀಪುದರಲ್ಲಿ ಕಪಿಲಾದ ನದಿಯಲ್ಲಿ ಕುಂಭಮೇಳದಲ್ಲಿ ಭಾಗಿಯಾಗಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆ ಶಿವಕುಮಾರ್, ಹಿಂದೆ ನಮ್ಮ ಕ್ಷೇತ್ರದಲ್ಲಿ ಏಸು ಶಿಲುಬೆಗೆ ಪ್ರೋತ್ಸಾಹ ಕೊಟ್ಟೆ ಅಂತ ನನ್ನನ್ನು ಈ ಭಾಗದವರು ಏಸು ಕುಮಾರ ಎಂದು ಕರೆದಿದ್ದರು. ಸಂಸದರೊಬ್ಬರು ಮುಸ್ಲಿಮರನ್ನು ಪಂಚರ್ ಹಾಕಲು ಲಾಯಕ್ಕು ಎಂದು ಹೇಳಿದಾಗ, ಅವರನ್ನು ಬ್ರದರ್ಸ್ ಎಂದು ಹೇಳಿದ್ದೆ. ಚಿಕನ್, ಮಟನ್ ಕಡಿಯಲು ಅವರೇ ಬೇಕಲ್ವಾ. ಬೇರೆಯವರು ಕಡಿಯುತ್ತಾರೆಯೇ ಎಂದು ಕೇಳಿದ್ದೆ.
ನಾನು ಶಿವನ ಮಗ, ಶಿವಕುಮಾರ್ ಅಂತ ಹೆಸರಿಟ್ಟಿದ್ದಾರೆ. ಶಿವನ ಆರಾಧನೆಗೆಂದು ಹೋಗಿದ್ದೇನೆ. ಅದರಲ್ಲೇನು ವಿಶೇಷ ಇಲ್ಲ. ಯಾರು ಏನು ಬೇಕಾದರೂ ಲೆಕ್ಕಾಚಾರ ಹಾಕಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಬಿಜೆಪಿಯವರು ಅವರ ಮನೇನಾ ಸರಿ ಮಾಡಿಕೊಳ್ಳಲಿ ಎಂದು ಹೇಳಿದರು.
ಕಾಪು ದೇವಿಯ ಅನುಗ್ರಹದಿಂದ ದೇವಸ್ಥಾನವನ್ನು ವಿಶೇಷವಾಗಿ ಮಾಡಿದ್ದಾರೆ. ಇಲ್ಲಿಗೆ ಬಂದಿದ್ದು ಭಾಗ್ಯ ಅಂದುಕೊಳ್ಳುತ್ತೇನೆ. ಸರ್ಕಾರದ ಹಣವೇ ಇಲ್ಲದೆ ಭಕ್ತರು ಸ್ವಇಚ್ಛೆಯಿಂದ ಇಷ್ಟೊಂದು ಅದ್ಭುತವಾಗಿ ಮಾಡಿದ್ದಾರೆ. ಯಾರೆಲ್ಲ ಈ ಕೆಲಸ ಮಾಡಿದ್ದಾರೋ ಅವರಿಗೆಲ್ಲ ದೇವಿಯ ಅನುಗ್ರಹ ಸಿಗಲಿ. ಬಾಗಲಕೋಟೆಯ ಶಿಲೆಯನ್ನು ಬಳಸಿ ಅದ್ಭುತವಾಗಿ ಮಾಡಿಸಿದ್ದಾರೆ ಎಂದು ಹೇಳಿದರು.
Karnataka Deputy Chief Minister DK Shivakumar on Sunday, March 2 said that his visits to temples often stir controversies. He made these remarks while addressing a gathering at the consecration ceremony of the Kaup Sri Hosa Marigudi temple
02-04-26 03:56 pm
HK News Staffer
ಮಗನ ರೋಗ ಗುಣಪಡಿಸಲು ಸ್ವಂತ ಮಗಳನ್ನೇ ಕೊಂದ ತಾಯಿ! ಮ...
02-04-26 02:46 pm
ಕೈಚೀಲ ಖರೀದಿಯಲ್ಲಿ ಅವ್ಯವಹಾರ; ಐಎಎಸ್ ಅಧಿಕಾರಿ ರೋಹಿ...
01-04-26 10:51 pm
ಅಡಿಕೆಗೆ ನಿಗದಿಪಡಿಸಿದ ತೇವಾಂಶ ಮಿತಿ ಸಡಿಲಿಕೆಗೆ ಕ್ಯ...
01-04-26 08:56 pm
ದುಬಾರಿ ಏಪ್ರಿಲ್; ನೀರು, ವಿದ್ಯುತ್, ಟೋಲ್, ನಗದು ಎಲ...
01-04-26 12:28 pm
01-04-26 11:03 pm
HK News Staffer
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
02-04-26 02:43 pm
HK News Staffer
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm