ಬ್ರೇಕಿಂಗ್ ನ್ಯೂಸ್
30-04-25 08:29 pm Mangalore Correspondent ಕರಾವಳಿ
ಮಂಗಳೂರು, ಎ.30 : ಮಂಗಳೂರಿನ ಹೆಸರಾಂತ ಬಿಲ್ಡರ್ ನಿಧಿ ಲ್ಯಾಂಡ್ ಇನ್ಫ್ರಾ ಸ್ಟ್ರಕ್ಚರ್ ಡೆವಲಪರ್ಸ್ ಇಂಡಿಯಾ ವತಿಯಿಂದ ನಗರದ ಚಿಲಿಂಬಿಯಲ್ಲಿ ಮತ್ತೊಂದು ಲಕ್ಸುರಿ ಅಪಾರ್ಟ್ಮೆಂಟ್ ಸ್ಕೈ ಗಾರ್ಡನ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಸಂಸ್ಥೆಯ ಚೇರ್ಮನ್ ಪ್ರಶಾಂತ್ ಸನಿಲ್ ನೇತೃತ್ವದಲ್ಲಿ ಗಣ್ಯರು ಸೇರಿಕೊಂಡು ಹೊಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್, ಮಾಜಿ ಕಾರ್ಪೊರೇಟರ್ ಭಾಸ್ಕರ ಮೊಯ್ಲಿ, ಬ್ರಹ್ಮಕುಮಾರಿ ಮಂಗಳೂರು ಘಟಕದ ಪ್ರಮುಖರಾದ ಬಿಕೆ ವಿಶ್ವೇಶ್ವರಿ, ದಾಯ್ಜಿವರ್ಲ್ಡ್ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆ, ಕ್ರೆಡೈ ಸಂಸ್ಥೆಯ ಅಧ್ಯಕ್ಷ ವಿನೋದ್ ಪಿಂಟೋ ಮತ್ತು ಇತರರು ಉಪಸ್ಥಿತರಿದ್ದರು. ಇದೇ ವೇಳೆ, ಸ್ಕೈ ಗಾರ್ಡನ್ ಅಪಾರ್ಟ್ಮೆಂಟ್ ವೈಶಿಷ್ಟ್ಯದ ಬಗ್ಗೆ ಬ್ರೋಶರ್ ಅನ್ನು ಬಿಕೆ ಮಹೇಶ್ವರಿ ಬಿಡುಗಡೆಗೊಳಿಸಿದರು.
ಲೇಡಿಹಿಲ್ – ಚಿಲಿಂಬಿ ಪ್ರಮುಖ ರಸ್ತೆಯ ಬದಿಯಲ್ಲೇ ಸ್ಕೈ ಗಾರ್ಡನ್ ಅಪಾರ್ಟ್ಮೆಂಟ್ ಅದ್ದೂರಿಯಾಗಿ ನಿರ್ಮಾಣಗೊಳ್ಳಲಿದ್ದು, ಎಲ್ಲ ಆಧುನಿಕ ಮಾದರಿಯ ವ್ಯವಸ್ಥೆಗಳೊಂದಿಗೆ 33 ಮಹಡಿಯಲ್ಲಿ ತಲೆಯೆತ್ತಲಿದೆ. ಇದರಲ್ಲಿ 3ಬಿಎಚ್ ಕೆ, 4 ಬಿಎಚ್ ಕೆ ಮತ್ತು 5 ಬಿಎಚ್ ಕೆ ಮನೆಗಳು ಹಾಗೂ ಡ್ಯುಪ್ಲೆಕ್ಸ್ ಸಂಕೀರ್ಣಗಳು ಬರಲಿವೆ. ಗ್ರೌಂಡ್ ಫ್ಲೋರ್ ಕೆಳಭಾಗದಲ್ಲಿ ಪಾರ್ಕಿಂಗ್ ಇರಲಿದ್ದು, ಗ್ರೌಂಡ್ ಫ್ಲೋರ್ ಮತ್ತು ಮೊದಲ ಮಹಡಿಯಲ್ಲಿ ಕ್ಲಬ್ ಹೌಸ್ ಬರಲಿದೆ. ಇದರೊಳಗೆ ಝೆನ್ ರೂಮ್, ಯೋಗ, ಏರೋಬಿಕ್ಸ್ ರೂಮ್, ಮಕ್ಕಳ ಸ್ಟಡಿ ರೂಮ್, ಮಕ್ಕಳ ಪ್ಲೇ ರೂಮ್, ಜಿಮ್ನಾಶಿಯಂ, ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್, ಕೇರಂ, ಇನ್ನಿತರ ಒಳಾಂಗಣ ಕ್ರೀಡೆಗಳ ಸಂಕೀರ್ಣಗಳು, ಕಾರ್ಡ್ಸ್ ರೂಮ್, ಸ್ವಿಮ್ಮಿಂಗ್ ಪೂಲ್, ಮಿನಿ ಥಿಯೇಟರ್, ಕಾನ್ಫರೆನ್ಸ್ ಹಾಲ್, ವಾಕಿಂಗ್ ಟ್ರ್ಯಾಕ್, ವಾಟರ್ ಫೌಂಟೇನ್ ಜೊತೆಗೆ ಹಲವು ಮಾದರಿಯ ಲಕ್ಸುರಿ ವ್ಯವಸ್ಥೆಗಳು ಇರಲಿವೆ.
ದೂರದೃಷ್ಟಿ ಮತ್ತು ಆಧುನಿಕ ಮಾದರಿಯ ಅಪಾರ್ಟ್ಮೆಂಟ್ ನಿರ್ಮಾಣದಲ್ಲಿ ಹೆಸರು ಪಡೆದಿರುವ ಪ್ರಶಾಂತ್ ಕೆ. ಸನಿಲ್ ಮಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ಹಲವು ಅಪಾರ್ಟ್ಮೆಂಟ್ ಸೇರಿದಂತೆ ಕಮರ್ಶಿಯಲ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಪ್ರಶಾಂತ್ ಸನಿಲ್ 2012ರಿಂದ ನಿಧಿ ಲ್ಯಾಂಡ್ ಹೆಸರಲ್ಲಿ ಮಂಗಳೂರು ನಗರದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿದ್ದಾರೆ. ಈಗಾಗಲೇ ನಿಧಿ ಲ್ಯಾಂಡ್ 11 ಪ್ರಾಜೆಕ್ಟ್ ಗಳನ್ನು ಕಂಪ್ಲೀಟ್ ಮಾಡಿದ್ದು, ಶಕ್ತಿ ಹೈಟ್ಸ್ ಮತ್ತು ಸ್ಮೃತಿ ಹೈಟ್ಸ್ ಸದ್ಯಕ್ಕೆ ನಿರ್ಮಾಣ ಹಂತದಲ್ಲಿದ್ದರೆ, ವೈಟ್ ರೋಸ್, ಬಿಸಿನೆಸ್ ಬೇ, ಬಿಸಿನೆಸ್ ಪಾರ್ಕ್, ಕ್ಯಾಸಲ್ ಗ್ರೀನ್ ಎನ್ನುವ ಹೆಸರಲ್ಲಿ ಶೀಘ್ರದಲ್ಲಿ ಹೊಸ ಪ್ರಾಜೆಕ್ಟ್ ತಲೆಯೆತ್ತಲಿದೆ.
The foundation stone laying ceremony of ‘Sky Garden’, a super luxury residential apartment, was held at Chilimbi on Wednesday April 30. The project is being developed by the city's most trusted builders and property developers, Nidhi Land Infrastructure Developers India (P) Ltd led by its dynamic chairman Prashanth K Sanil.
01-06-25 10:08 pm
HK News Desk
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
ಎಚ್ಎಂಟಿ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ;...
01-06-25 08:33 pm
Karnataka Traffic Police New Rules: ಸಕಾರಣವಿಲ್...
01-06-25 11:50 am
Siddaramaiah, HD Kumaraswamy: ಸಿದ್ದರಾಮಯ್ಯನವರೇ...
31-05-25 09:41 pm
01-06-25 12:35 pm
HK News Desk
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
01-06-25 12:32 pm
Mangalore Correspondent
Mangalore Congress, Notice: ಪಕ್ಷದ ಸೂಚನೆ ಮೀರಿ...
01-06-25 11:59 am
ಕೋಮು ಪ್ರಚೋದಕ ಭಾಷಣಕ್ಕೆ ಕಠಿಣ ಕ್ರಮಕ್ಕೆ ಮುಸ್ಲಿಂ ನ...
31-05-25 11:14 pm
Mangalore Police Chief Sudheer Kumar Reddy, V...
31-05-25 10:57 pm
Mangalore Rain, Ullal, Flood, Death: ಗುಡ್ಡ ಕು...
31-05-25 07:18 pm
01-06-25 11:02 pm
Mangalore Correspondent
Belagavi Rape, Arrest, Crime: ಬೆಳಗಾವಿಯಲ್ಲಿ ಮತ...
01-06-25 07:56 pm
Bantwal Crime, Mangalore, Stone Petling: ಮುಸ್...
31-05-25 10:47 pm
Mangalore crime, Threat: ಲಿಸ್ಟ್ ರೆಡಿ ಮಾಡಿದ್ದೇ...
29-05-25 11:04 pm
Mangalore Crime, Konaje: ಮೊಂಟೆಪದವು ಕೆರೆಯಲ್ಲಿ...
29-05-25 07:59 pm