ಬ್ರೇಕಿಂಗ್ ನ್ಯೂಸ್
19-05-25 09:41 pm Mangalore Correspondent ಕರಾವಳಿ
ಉಳ್ಳಾಲ, ಮೇ 19 : ತಲೆಯ ಕೂದಲು ನಿರಂತರ ಉದುರುತ್ತಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ. ನನ್ನ ಕಿಡ್ನಿಗಳನ್ನ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಬಾವನಿಗೆ ದಾನ ಮಾಡುವಂತೆ ಡೆತ್ ನೋಟ್ ಬರೆದಿಟ್ಟು ಅವಿವಾಹಿತನೋರ್ವ ಮನೆ ಸಮೀಪದ ಶಾಲೆಯ ಛಾವಣಿಯ ಕಬ್ಬಿಣದ ಸಲಾಕೆಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಾಡುವಿನಲ್ಲಿ ನಡೆದಿದೆ.
ಕುರ್ನಾಡು ಗ್ರಾಮದ ಹೂವಿನಕೊಪ್ಪಲ ನಿವಾಸಿ ದಿವಂಗತ ರಾಮ ಎಂಬವರ ಪುತ್ರ ಸುಧೀರ್ (32) ಆತ್ಮಹತ್ಯೆಗೈದ ಯುವಕ. ವೃತ್ತಿಯಲ್ಲಿ ಪೈಂಟರ್ ಆಗಿರುವ ಸುಧೀರ್ ಇಂದು ಬೆಳಗ್ಗೆ ಬಸ್ಸು ತಂಗುದಾಣದಲ್ಲಿ ಕುಳಿತಿರುವುದನ್ನ ಸ್ಥಳೀಯರು ಕಂಡಿದ್ದರು. ಸುಧೀರ್ ಮೊಬೈಲ್ ಹಾಗೂ ಪರ್ಸನ್ನ ಮನೆಯಲ್ಲೇ ಬಿಟ್ಟು ತೆರಳಿದ್ದನಂತೆ. ಬಳಿಕ ಕುರ್ನಾಡು ಶ್ರೀ ದತ್ತಾತ್ರೇಯ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಸುಧೀರ್ ನೇಣು ಬಿಗಿದುದನ್ನ ಅಂಗನವಾಡಿ ಶಿಕ್ಷಕಿ ನೋಡಿದ್ದಾರೆ.
ಕೊಣಾಜೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಮೃತ ಸುಧೀರ್ ಅವರ ಶರ್ಟ್ ಜೇಬಲ್ಲಿ ಡೆತ್ ನೋಟ್ ದೊರೆತಿದೆ. ನನ್ನ ತಲೆ ಕೂದಲು ನಿರಂತರವಾಗಿ ಉದುರುತ್ತಿದ್ದು, ತನ್ನ ಕಿಡ್ನಿಗಳನ್ನ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಬಾವ (ಅಕ್ಕನ ಗಂಡ)ನಿಗೆ ದಾನ ಮಾಡಿ. ಅಣ್ಣನ ಮದುವೆಯನ್ನ ಸಾಂಗವಾಗಿ ನಡೆಸಿ ಎಂದು ಡೆತ್ ನೋಟಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ.
ಇದೇ ಮೇ ತಿಂಗಳ 29 ರಂದು ಮೃತ ಸುಧೀರ್ ಅವರ ಅಣ್ಣನ ಮದುವೆ ಬೋಳಿಯಾರಿನ ಖಾಸಗಿ ಸಭಾಂಗಣದಲ್ಲಿ ನಿಗದಿಯಾಗಿತ್ತು. ಆದರೀಗ ಮನೆ ಮಗನ ಅಕಾಲಿಕ ಅಗಲಿಕೆಯಿಂದ ಮನೆ ಮಂದಿ ದಿಗ್ಬ್ರಾಂತರಾಗಿದ್ದಾರೆ. ಇನ್ನು ಸುಧೀರ್ ಸಾವಿಗೆ ಬೇರೆಯೇ ಕಾರಣಗಳಿವೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದತ್ತಾತ್ರೇಯ ಅನುದಾನಿತ ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಸುಧೀರ್ ಅದೇ ಶಾಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ವಿಪರ್ಯಾಸ. ಕೂದಲು ಉದುರುವ ಸಮಸ್ಯೆಗಾಗಿ ಆತ್ಮಹತ್ಯೆಗೈದಿರುವುದನ್ನ ನನ್ನ ವೃತ್ತಿ ಜೀವನದಲ್ಲೇ ಮೊದಲು ಕೇಳಿರುವುದಾಗಿ ಕೊಣಾಜೆ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Mangalore Youth Dies by Suicide After Hair Loss Struggle at Konaje, Donates Kidneys in Death Note. The deceased has been identified as Sudheer (32).
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
10-09-25 11:02 am
Mangalore Correspondent
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm