ಬ್ರೇಕಿಂಗ್ ನ್ಯೂಸ್
31-12-20 08:07 pm Mangaluru Correspondent ಕರಾವಳಿ
Photo credits : Facebook
ಮಂಗಳೂರು, ಡಿ.31: ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ. ವಿಕಾಶ್ ಕುಮಾರ್ ಅವರನ್ನು ಕೆಎಸ್ ಆರ್ ಪಿ ಡಿಐಜಿ ಆಗಿ ವರ್ಗ ಮಾಡಿದ್ದು ನೂತನ್ ಪೊಲೀಸ್ ಕಮಿಷನರ್ ಆಗಿ ಎನ್. ಶಶಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಶಶಿಕುಮಾರ್ ಬೆಂಗಳೂರು ವೈರ್ ಲೆಸ್ ವಿಭಾಗದಲ್ಲಿ ಎಸ್ಪಿ ಆಗಿದ್ದರು.
ಕಳೆದ ಜೂನ್ 29ರಂದು ವಿಕಾಶ್ ಕುಮಾರ್ ಮಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಕೇವಲ ಆರು ತಿಂಗಳಲ್ಲಿ ಕಮಿಷನರ್ ಹುದ್ದೆಯಿಂದ ತೆರವು ಮಾಡಿದ್ದು ಸಂಶಯಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಕಮಿಷನರ್ ಆಗಿದ್ದವರನ್ನು ಒಂದು ವರ್ಷಗಳ ಕಾಲ ವರ್ಗ ಮಾಡುವುದಿಲ್ಲ.

ಇದಕ್ಕೂ ಮುನ್ನ ಪಿ.ಎಸ್.ಹರ್ಷ ಮಂಗಳೂರು ಕಮಿಷನರ್ ಆಗಿದ್ದರು. ಕಳೆದ ಬಾರಿ ಗೋಲಿಬಾರ್ ಸಂದರ್ಭ ಹರ್ಷ ವಿರುದ್ಧ ಆರೋಪ ಕೇಳಿಬಂದರೂ, ಅವರನ್ನು ಉಳಿಸಿಕೊಳ್ಳಲಾಗಿತ್ತು. ಮೃದು ಸ್ವಭಾವದವರಾಗಿದ್ದ ಹರ್ಷ ಅವರ ಬಗ್ಗೆ ಮಂಗಳೂರಿನ ಪೊಲೀಸರಲ್ಲಿ ಉತ್ತಮ ಅಭಿಪ್ರಾಯವೇ ಇತ್ತು.
ಆದರೆ, ವಿಕಾಶ್ ಕುಮಾರ್ ಕಮಿಷನರ್ ಆಗಿ ಬಂದ ಬಳಿಕ ಸಹೋದ್ಯೋಗಿಗಳಲ್ಲಿಯೇ ಉತ್ತಮ ಅಭಿಪ್ರಾಯ ಇರಲಿಲ್ಲ. ಕೆಲವು ವಿಚಾರಗಳಲ್ಲಿ ಏಕಪಕ್ಷೀಯ ನಡೆ ತೋರುತ್ತಿದ್ದರೆಂದು ಆರೋಪಗಳಿದ್ದವು. ಹೊಯ್ಗೆ ಮಾಫಿಯಾ ದಲ್ಲಾಳಿಗಳು ಕಮಿಷನರ್ ಕಚೇರಿಗೇ ಬರುತ್ತಿದ್ದರೆಂಬ ಆರೋಪಗಳೂ ಇದ್ದವು. ಅಲ್ಲದೆ, ಯಾವುದೇ ಮಹತ್ವದ ಘಟನೆಗಳಾದ ಸಂದರ್ಭದಲ್ಲೂ ಕಮಿಷನರ್ ಸ್ಥಳಕ್ಕೆ ಬಂದು ಇತರೇ ಪೊಲೀಸರಿಗೆ ಮೋಟಿವೇಶನ್ ಕೊಡುವ ಕೆಲಸ ಮಾಡುತ್ತಿರಲಿಲ್ಲ. ಇದೇ ಕಾರಣಕ್ಕೋ ಏನೋ ಕೇವಲ ಆರೇ ತಿಂಗಳಲ್ಲಿ ಮಂಗಳೂರು ಕಮಿಷನರ್ ಮಹತ್ವದ ಹುದ್ದೆಯಿಂದ ತೆರವು ಮಾಡಲಾಗಿದ್ದು ಯಾವುದೇ ಮಹತ್ವ ಇರದ ಕೆಎಸ್ ಆರ್ ಪಿ ಡಿಐಜಿ ಆಗಿ ವರ್ಗ ಮಾಡಲಾಗಿದೆ. ಈ ಹುದ್ದೆಯನ್ನು ಡಿಮೋಶನ್ ಎಂದೇ ಪರಿಗಣಿಸಲಾಗುತ್ತದೆ.
ಇದೇ ವೇಳೆ, ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿಯಾಗಿ ಕರ್ತವ್ಯದಲ್ಲಿದ್ದ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಬಂದಾರು ಅವರನ್ನು ಭಟ್ಕಳ ಉಪ ವಿಭಾಗದ ಎಸ್ಪಿ ಆಗಿ ಪ್ರಮೋಟ್ ಮಾಡಲಾಗಿದೆ.
Mangaluru city commissioner Vikash Kumar Vikash has been transferred with immediate effect. Shashi Kumar appointed as New Police Commissioner of Mangalore City. Shashi Kumar who was earlier the superintendent of police, internal security division will now assume th
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm