ಬ್ರೇಕಿಂಗ್ ನ್ಯೂಸ್
02-09-26 01:16 pm HK News Staffer ಕರಾವಳಿ
ಮಂಗಳೂರು, ಸೆ.1: ನಗರದ ನಂತೂರಿನ ರಾಷ್ಟ್ರೀಯ ಹೆದ್ದಾರಿ ನಡುವಲ್ಲಿ ಇರುವ ಸಂಪಿಗೆ ಮರವನ್ನು ತೆರವು ಮಾಡುವಂತಿಲ್ಲ. ಯಾವುದೇ ಕಾರಣಕ್ಕು ಸಂಪಿಗೆ ಮರವನ್ನು ಬಿಟ್ಟು ಕೊಡಲ್ಲ ಎಂದು ಸ್ಥಳೀಯ ದೈವದ ಕೋಲದಲ್ಲಿ ರಾಹುಗುಳಿಗ ಎಚ್ಚರಿಕೆಯ ನುಡಿಯಾಡಿದ ಪ್ರಸಂಗ ನಡೆದಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ನಂತೂರು ಪದವಿನ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸಂಪಿಗೆ ಮರವೊಂದಿದ್ದು ಅದನ್ನು ಎದುರಲ್ಲೇ ಇರುವ ರಾಹುಗುಳಿಗ ದೈವದ ಗುಡಿಗೆ ಸೇರಿದ ಮರ ಎನ್ನಲಾಗುತ್ತಿದೆ. ತನ್ನ ನ್ಯಾಯ ಪೀಠ ಇರುವ ಸಂಪಿಗೆ ಮರವನ್ನು ತೆಗೆಯಲು ಬಿಡಲ್ಲ ಎಂದು ದೈವ ಇತ್ತೀಚೆಗೆ ಸಂಕ್ರಾಂತಿ ಕೋಲದ ಸಂದರ್ಭದಲ್ಲಿ ನೆಲಕ್ಕೆ ಕೈಯಿಟ್ಟು ಎಚ್ಚರಿಕೆ ನುಡಿಯಾಡಿದೆ. ಹಲವು ವರ್ಷಗಳ ತೂಗುಯ್ಯಾಲೆ ಬಳಿಕ ನಂತೂರಿನಲ್ಲಿ ಕಡೆಗೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಡೆಯುತ್ತಿದ್ದು ಅದಕ್ಕೀಗ ರಾಹು ಗುಳಿಗನ ಸಂಪಿಗೆ ಮರ ಅಡ್ಡಿಯಾಗಿದೆ ಎನ್ನುವ ನೆಪವನ್ನು ಈಗ ಮುಂದಿಡಲಾಗಿದೆ.




ನಂತೂರು ಹೆದ್ದಾರಿ ಬದಿಯಲ್ಲೇ ರಾಹುಗುಳಿಗ ಬಬ್ಬುಸ್ವಾಮಿ ದೈವಸ್ಥಾನವಿದ್ದು ಅದಕ್ಕೆ ಯಾವುದೇ ತೊಂದರೆ ಇಲ್ಲ. ಅದರ ನೇರ ಎದುರಿರುವ ಹೆದ್ದಾರಿ ಮಧ್ಯದ ಸಂಪಿಗೆ ಮರವನ್ನು ತೆಗೆಯಬೇಕೆಂಬ ಪ್ರಸ್ತಾಪ ಹೆದ್ದಾರಿ ಇಲಾಖೆಯಿಂದ ಬಂದಿದೆ ಎನ್ನಲಾಗುತ್ತಿದೆ. ಸಂಪಿಗೆ ಮರದಲ್ಲಿ ರಾಹುಗಳಿಗ ದೈವ ನೆಲೆಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದು ದೈವದ ಕೋಲ ಸಂದರ್ಭದಲ್ಲಿ ಮರಕ್ಕೆ ಹತ್ತಿ ನರ್ತನ ಮಾಡುವ ಕ್ರಮ ಇದೆ. ನಂತೂರಿನಲ್ಲಿ ಫ್ಲೈ ಓವರ್ ನಿರ್ಮಾಣದ ಪ್ರಸ್ತಾಪವಿದ್ದು ಹಾಗೊಂದ್ವೇಳೆ ಆದರೆ ಮರವನ್ನು ಕಡಿಯಬೇಕಾಗುತ್ತದೆ ಎನ್ನುವ ಮಾತು ಕೇಳಿಬಂದಿದೆ. ಅದಕ್ಕೆ ಮುನ್ನವೇ ಸ್ಥಳೀಯ ಭಕ್ತರು ಮರ ಕಡಿಯುವ ಕುರಿತಾಗಿ ದೈವದ ಬಳಿ ಪ್ರಾರ್ಥನೆ ಸಲ್ಲಿಸಿದ್ದು, ಆಗ ಮರವನ್ನು ಯಾವ ಕಾರಣಕ್ಕೂ ಕಡಿಯಬಾರದು ಎಂದು ದೈವ ಹೇಳಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
31-08-26 08:29 pm
HK News Staffer
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
02-09-26 12:28 pm
HK News Staffer
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
Mohan Bhagwat: ಹಿಂದೂ ರಾಷ್ಟ್ರದ ಪರಿಕಲ್ಪನೆ ಮುಸ್ಲ...
30-08-26 02:41 pm
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
02-09-26 02:09 pm
HK News Staffer
ನಂತೂರಿನಲ್ಲಿ ಹೆದ್ದಾರಿ ಮಧ್ಯೆ ಸಂಪಿಗೆ ಮರ ; ಯಾವ ಕಾ...
02-09-26 01:16 pm
‘ನಾನು ಜೀವಂತವಾಗಿದ್ದೇನೆ, ಆದರೆ ಎಸ್ಐಆರ್ನಲ್ಲಿ ಸತ...
02-09-26 11:02 am
ಜಾಲತಾಣದಲ್ಲಿ ಅವಹೇಳನ, ಶಾಸಕ ಅಶೋಕ ರೈಗೆ ನಿಂದನೆ ; ಪ...
01-09-26 11:17 pm
ಕೆಆರ್ ಐಡಿಎಲ್ ಕಮಿಷನ್ ಆರೋಪದ ಬಗ್ಗೆ ಸಚಿವ ಖಂಡ್ರೆ...
01-09-26 09:05 pm
02-09-26 10:37 am
HK News Staffer
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm
Thokottu Accident, Mangalore: ಪಾದಚಾರಿಗೆ ಡಿಕ್ಕ...
01-09-26 01:41 pm
ಶಿವಮೊಗ್ಗದ ಪಿಡಿಒ ದಂಪತಿಗಳ ಮನೆಗೆ ಲೋಕಾ ದಾಳಿ ಅಲ್ಲ....
01-09-26 12:53 pm