ಬ್ರೇಕಿಂಗ್ ನ್ಯೂಸ್
02-09-26 08:29 pm HK News Staffer ಕರಾವಳಿ
ಮಂಗಳೂರು, ಸೆ.2: ಕೆಆರ್ ಐಡಿಎಲ್ ಅಧಿಕಾರಿಗಳು ಹತ್ತು ಶೇಕಡಾ ಕಮಿಷನ್ ಪಡೆಯುತ್ತಿರುವ ಬಗ್ಗೆ ಆರೋಪ ಮಾಡಿದ್ದ ಶಾಸಕ ಅಶೋಕ್ ರೈ ಬಗ್ಗೆಯೇ ಸಚಿವ ಯು.ಟಿ ಖಾದರ್ ಪ್ರಶ್ನೆ ಮಾಡಿದ್ದಾರೆ. ಶಾಸಕರು ಯಾಕೆ ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರಿ? ಯಾಕೆ ಶಾಸಕರುಗಳು ಅವರಿಗೆ ಗುತ್ತಿಗೆ ಕೊಡೋದು? ಬೇರೆಲ್ಲ ಗುತ್ತಿಗೆ ಸಂಸ್ಥೆ ಇರುವಾಗ ಅಲ್ಲಿಗೆ ಯಾಕೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಖಾದರ್, ಶಾಸಕರು ಈ ಸಂಸ್ಥೆಗೆ ಯಾಕೆ ಟೆಂಡರ್ ಕೊಡಬೇಕು. ಸ್ವತಃ ಪಿಡಬ್ಲ್ಯುಡಿ ಇಲಾಖೆಗೆ ಟೆಂಡರ್ ಕೊಡೋದು. ಕೆಆರ್ ಐ ಡಿಎಲ್ ನಲ್ಲಿ ಸಿಬ್ಬಂದಿ ಕೊರತೆ ಇದೆ. ಬೇರೆ ಬೇರೆ ಅಧಿಕೃತ ಸಂಸ್ಥೆ ಇರುವಾಗ ಈ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡಬೇಕು ಎಂದು ಪ್ರಶ್ನಿಸಿದರು. ನಾಲ್ಕು ಐದು ಬಾರಿ ಗೆದ್ದಾಗ ಮಾತ್ರ ಪ್ರಭುದ್ಧತೆ ಬರುತ್ತದೆ. ಯಾರೋ ಬಂದು ದೂರು ನೀಡಿದ ಕೂಡಲೇ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇವರಿಗೆ ಮಾಹಿತಿ ನೀಡಿದವರೇ ಸರಿ ಇಲ್ಲ ಅನ್ನೋದು ತನಿಖೆಯಲ್ಲಿ ಗೊತ್ತಾಗುತ್ತೆ. ಆದರೂ ಅಶೋಕ್ ಕುಮಾರ್ ರೈ ಭ್ರಷ್ಟಾಚಾರ ಆರೋಪದ ಬಗ್ಗೆ ತುರ್ತಾಗಿ ಸ್ಪಂದಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ಎಸ್ಐಆರ್ ಎರಡನೇ ಹಂತದ ವೆರಿಫಿಕೇಶನ್ ವಿಚಾರದ ಪ್ರಶ್ನೆಗೆ, ಅಧಿಕಾರಿಗಳು ಮತದಾರರನ್ನು ಮತಪಟ್ಟಿಗೆ ಸೇರಿಸಲು ಒತ್ತನ್ನು ಕೊಡಬೇಕು. ವಿದೇಶದಲ್ಲಿ ಇರುವವರನ್ನು ಮತದಾನ ವಂಚಿತರನ್ನಾಗಿ ಮಾಡಬಾರದು. ಇವರಿಗಾಗಿ ಪ್ರತ್ಯೇಕ ಏಕರೂಪದ ಸಿಸ್ಟಮ್ ಜಾರಿಗೆ ತರಬೇಕು. ಅಧಿಕಾರಿಗಳು ಉತ್ತಮ ಕೆಲಸವನ್ನು ನನ್ನ ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದು ಖಾದರ್ ಹೇಳಿದರು.
ಮಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯಿಂದ ದಾಳಿ ಮುಂದುವರಿಸಲಾಗಿದೆ. ಬೇಕರಿ ಅಂಗಡಿ ಗುರಿಯಾಗಿಸಿ ದಾಳಿ ನಡೆಸಿದ್ದು ಎರಡು ಬೇಕರಿ ಘಟಕಗಳನ್ನು ಬಂದ್ ಮಾಡಿ ಇತರ ಘಟಕಗಳಿಗೆ ನೋಟಿಸ್ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಮೈಸೂರು ನಗರದಲ್ಲಿ ತಪಾಸಣೆ ತೀವ್ರ ಮಾಡುತ್ತೇವೆ. ಬೇಕರಿ, ಅಂಗಡಿ ಸೇರಿ ಆಹಾರ ತಯಾರಿ ಕೇಂದ್ರಗಳನ್ನು ಕ್ಲೀನ್ ಮಾಡಿ ಸ್ವಚ್ಛತೆ ಇಟ್ಟುಕೊಳ್ಳಬೇಕು. ಯಾರೂ ಇನ್ಫುಲೆನ್ಸ್ ಮಾಡಿದ್ರೂ ಕಾಪಾಡೋಕೆ ಆಗಲ್ಲ. ಕ್ಯೂ ಆರ್ ಕೋಡ್ ಮೂಲಕ ದೂರು ಬಂದ್ರೆ ಅಧಿಕಾರಿಗಳು ತಪಾಸಣೆ ಮಾಡುತ್ತಾರೆ.
ಪಿಜಿ ನಡೆಸುವವರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಗ್ರಾಹಕರಿಗೆ ಮೋಸ ಆಗುವಂತೆ ವರ್ತನೆ ಮಾಡಬಾರದು. ಮೊದಲ ಬಾರಿಗೆ ದಂಡವನ್ನು ವಿಧಿಸುತ್ತಿದ್ದು ಮುಂದಿನ ಬಾರಿ ಯಾವುದೇ ಕ್ಷಮೆ ಇರೋದಿಲ್ಲ. ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದರು.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 08:44 pm
HK News Staffer
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
ಕುತ್ತಾರು ಸರ್ಕಲ್ ವಿವಾದಕ್ಕೆ ಮಂಗಳ ; ನೂತನ ಸೌಹಾರ್...
02-09-26 02:09 pm
ನಂತೂರಿನಲ್ಲಿ ಹೆದ್ದಾರಿ ಮಧ್ಯೆ ಸಂಪಿಗೆ ಮರ ; ಯಾವ ಕಾ...
02-09-26 01:16 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm