ಕಾರವಾರ ರೈಲಿಗೂ ಬಂತು ವಿಸ್ಟಾ ಡೋಮ್ ಕೋಚ್ ! ಆ.16ರಿಂದ ಹಗಲು ರೈಲು ಆರಂಭ

14-08-21 01:56 pm       Udupi Correspondent   ಕರಾವಳಿ

ಕೋವಿಡ್ ಕಾರಣದಿಂದ ಸಂಚಾರವನ್ನು ಮೊಟಕುಗೊಳಿಸಿದ್ದ ಬೆಂಗಳೂರು ಯಶವಂತಪುರ- ಕಾರವಾರ ಸಂಚರಿಸುವ ಬೆಳಗಿನ ರೈಲು, ಆ.16ರಿಂದ ಹೊಸ ವಿಸ್ಟಾಡೋಮ್ ಕೋಚ್ ಸಹಿತ ಪುನರಾರಂಭಗೊಳ್ಳಲಿದೆ

ಉಡುಪಿ, ಆ.14: ಕೋವಿಡ್ ಕಾರಣದಿಂದ ಸಂಚಾರವನ್ನು ಮೊಟಕುಗೊಳಿಸಿದ್ದ ಬೆಂಗಳೂರು ಯಶವಂತಪುರ- ಕಾರವಾರ (ರೈಲು ನಂ. 06211/12) ಸಂಚರಿಸುವ ಬೆಳಗಿನ ರೈಲು, ಆ.16ರಿಂದ ಹೊಸ ವಿಸ್ಟಾಡೋಮ್ ಕೋಚ್ ಸಹಿತ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೋವಿಡ್ ಕಾರಣದಿಂದ ಬೆಂಗಳೂರು- ಕಾರವಾರ ಬೆಳಗಿನ ರೈಲು ಸಂಚಾರವನ್ನು ಕಳೆದ ಮೇ 3 ರಿಂದ ಮಂಗಳೂರಿನಿಂದ ಕಾರವಾರದ ತನಕದ ಸಂಚಾರವನ್ನು ರೈಲ್ವೆ ಇಲಾಖೆ ಮೊಟಕುಗೊಳಿಸಿತ್ತು. ರೈಲು ಮಂಗಳೂರು ಮತ್ತು ಬೆಂಗಳೂರು ನಡುವೆ ಓಡಾಟ ನಡೆಸುತ್ತಿತ್ತು. ಇದೀಗ ಈ ಭಾಗದ ಪ್ರಯಾಣಿಕರು ಹಾಗೂ ಸಾರ್ವಜನಿಕರು ವಿಸ್ಟಾಡೋಮ್‌ನೊಂದಿಗೆ ರೈಲನ್ನು ಕಾರವಾರದಿಂದ ಪುನರಾರಂಭಿಸಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಉಡುಪಿ- ಚಿಕ್ಕಮಗಳೂರು ಸಂಸತ್ ಸದಸ್ಯೆಯಾಗಿರುವ ಶೋಭಾ ಕಂದ್ಲಾಜೆ ಅವರನ್ನು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಕಾರವಾರ -ಬೆಂಗಳೂರು ಹಗಲು ರೈಲನ್ನು ಪುರಾರಾರಂಭಿಸುವಂತೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ರೈಲ್ವೆ ಸಚಿವರು ಕಾರವಾರ- ಬೆಂಗಳೂರು ಬೆಳಗಿನ ರೈಲನ್ನು ಪುನರಾರಂಭಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಇದೀಗ ನೈರುತ್ವ ರೈಲ್ವೆ ಬೆಂಗಳೂರು-ಕಾರವಾರ ರೈಲನ್ನು ಆ.16ರಿಂದ ಪುನರಾರಂಭಿಸುತ್ತಿದೆ ಹಾಗು ಒಂದು ಹೊಸ ವಿಸ್ಟಾಡೋಮ್ ಕೋಚ್ ಕೂಡ ಈ ರೈಲಿಗೆ ಸೇರ್ಪಡೆಗೊಳ್ಳಲಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

The train will resume between Bengaluru-Karava, which was shut down due to Corona anxiety. A train service will be in operation during the day from August 16. On the request of Union Minister of State Shobha Karandlaje, the Bangalore-Karwar train will resume. Minister of State for Agriculture, Shobha Karandlaje has appealed for the installation of the Vistadome coach on this route.