ಬ್ರೇಕಿಂಗ್ ನ್ಯೂಸ್
17-08-21 06:08 pm Mangaluru Correspondent ಕರಾವಳಿ
ಉಳ್ಳಾಲ, ಆ.17: ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಅವರ ಬಗ್ಗೆಯೇ ತಿಳಿಯದ ಎಸ್ ಡಿಪಿಐ ಕಾರ್ಯಕರ್ತರು ತಾಲಿಬಾನಲ್ಲಿ ಇದ್ದಾರೆಯೇ..? ಭಾರತದಲ್ಲಿದ್ದು ಸಾವರ್ಕರ್ ಬಗ್ಗೆ ತಿಳಿಯದವರು ಇಲ್ಲಿ ಇರಬಾರದು. ಮತಾಂಧ ಭಾವನೆ ಇಟ್ಟುಕೊಂಡು ಸ್ವಾತಂತ್ರ್ಯ ರಥವನ್ನ ತಡೆಯುವ ಸಂಘಟನೆಗಳು ನಿಷೇಧ ಆಗಬೇಕು. ಎಸ್ ಡಿಪಿಐ ಮತ್ತು ಪಿಎಫ್ಐಗಳು ನಿಷೇಧ ಆಗಲೇಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಆಗ್ರಹಿಸಿದ್ದಾರೆ.
ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಪುತ್ತೂರಿನ ಕಬಕದಲ್ಲಿ ಪಂಚಾಯತ್ ವತಿಯಿಂದ ನಡೆದ ಸ್ವಾತಂತ್ರ್ಯ ರಥ ಯಾತ್ರೆಯನ್ನು SDPI ಕಾರ್ಯಕರ್ತರು ತಡೆದು ಅಶಾಂತಿ ಉಂಟುಮಾಡಿದ್ದು ಖಂಡನೀಯ. ವೀರ ಸಾವರ್ಕರ್ ಒಬ್ಬ ಅಪ್ರತಿಮ ದೇಶಭಕ್ತನಾಗಿದ್ದು ದೇಶಕ್ಕಾಗಿ ಜೈಲು ವಾಸ ಅನುಭವಿಸಿದ್ದವರು. ದೇಶಕ್ಕಾಗಿ ಕಾಳಪಾನಿಯ ಶಿಕ್ಷೆಗೆ ಒಳಗಾದವರು. ಆದರೆ ಮತಾಂಧತೆಯನ್ನು ತುಂಬಿಕೊಂಡ ಎಸ್ ಡಿಪಿಐ ಕಾರ್ಯಕರ್ತರು ಸಾವರ್ಕರ್ ಫೋಟೊ ತೆಗೆದು ಟಿಪ್ಪು ಚಿತ್ರ ಹಾಕುವಂತೆ ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ್ದು ದೇಶ ದ್ರೋಹದ ಕೆಲಸವಾಗಿದ್ದು ಇವರ ವಿರುದ್ಧ ಪೊಲೀಸ್ ಇಲಾಖೆಯು ಕಠಿಣ ಕ್ರಮ ಕೈಗೊಳ್ಳಬೇಕು. ಈ ರೀತಿಯ ದೇಶದ್ರೋಹಿ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದರು. ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಗಳಲ್ಲಿ ನಾಲ್ಕೈದು ಸೀಟು ಗೆದ್ದು ಬೀಗುತ್ತಿರುವ SDPI ನ ಕಾರ್ಯಕರ್ತರು ತಾವು ತಾಲಿಬಾನಿನಲ್ಲಿ ಇದ್ದೇವೆ ಎಂದು ಭಾವಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯ ದೇಶದ್ರೋಹಿ ಕೃತ್ಯ ಕರಾವಳಿಯಲ್ಲಿ ಹೆಚ್ಚುತ್ತಿರುವ ಕಾರಣ, ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭಿಸುವ ಅಗತ್ಯವಿದ್ದು ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಒತ್ತಡದಿಂದಾಗಿ ಮಂಗಳೂರಿನಲ್ಲಿ ಎನ್ಐಎ ಕಾರ್ಯಾಲಯ ಆರಂಭಿಸುವ ಯೋಜನೆ ಇದ್ದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅವೆಲ್ಲದ್ದಕ್ಕೂ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಬಯಸುತ್ತಿದ್ದೇವೆ ಎಂದು ಹೇಳಿದರು.
ಎನ್ ಐ ಎ ಕಚೇರಿ ಮಂಗಳೂರು ಕ್ಷೇತ್ರದಲ್ಲಿಯೇ ಯಾಕೆ ಬೇಕೆಂದರೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿಯೇ ಭಟ್ಕಳದ ಉಗ್ರ ಅವಿತಿದ್ದ. ಈಗ ಉಳ್ಳಾಲದ ಮನೆಯೊಂದರಲ್ಲಿ ಶಂಕಿತನೊಬ್ಬ ಎನ್ ಐ ಎ ವಶವಾಗಿದ್ದಾನೆ. ದಿವಂಗತ ಶಾಸಕ ಇದಿನಬ್ಬರ ಮರಿ ಮೊಮ್ಮಗಳು, ಮೊಮ್ಮಗ, ಮತ್ತೊಬ್ಬ ಮೊಮ್ಮಗ ಹಾಗೂ ಆತನ ಪತ್ನಿ ಕೂಡ ಸಿರಿಯಾದ ನಂಟು ಹೊಂದಿರುವುದು ಸಾಬೀತಾಗಿದೆ. ಆದರೂ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಮಾತ್ರ ಇಲ್ಲಿಗೆ ಎನ್ಐಎ ಕಚೇರಿ ಅಗತ್ಯ ಇಲ್ಲವೇನೋ ಎನ್ನುವ ರೀತಿ ಇಲ್ಲಿ ಗಂಭೀರ ಬೆಳವಣಿಗೆ ಆಗುತ್ತಿದ್ದರೂ ಅದನ್ನು ಖಂಡಿಸಲೂ ಹೋಗದೆ ಸಮ್ಮನೆ ಕುಳಿತಿದ್ದಾರೆ. ಇದು ಖಾದರ್ ಬಗ್ಗೆಯೇ ಸಂಶಯ ಮೂಡಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಹಾಗೂ ಉಪಾಧ್ಯಕ್ಷ ಯಶವಂತ್ ಅಮೀನ್ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ರಥಕ್ಕೆ ಎಸ್ ಡಿಪಿಐ ಕಾರ್ಯಕರ್ತರ ತಡೆ ; ಸಾವರ್ಕರ್ ಫೋಟೊ ಬದಲು ಟಿಪ್ಪು ಫೋಟೊ ಹಾಕಲು ಒತ್ತಡ !
ಸ್ವಾತಂತ್ರ್ಯ ರಥಕ್ಕೆ ಎಸ್ಡಿಪಿಐ ತಡೆ ; ಮೂವರು ಆರೋಪಿಗಳ ಬಂಧಿಸಿದ ಪುತ್ತೂರು ಪೊಲೀಸರು
ತಾಲಿಬಾನಿ ಸಂಸ್ಕೃತಿ ನಡೆಯಲು ಬಿಡಲ್ಲ ; ಸಚಿವ ಕೋಟ, ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ಶಾಸಕ
Ullal Santhosh Rai Boliyar slams SDPI over Kadaba Savarkar photo row says SDPI belong to Taliban. Enraged over the photo of Veer Savarkar along with other freedom fighters on Swatantrya ratha, an Independence Day rally vehicle in Kabaka, the SDPI workers allegedly tried to disrupt Independence Day celebrations, at Kabaka Gram Panchayat premises.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm