ಬ್ರೇಕಿಂಗ್ ನ್ಯೂಸ್
21-08-21 01:19 pm Mangaluru Correspondent ಕರಾವಳಿ
ಕತಾರ್, ದೋಹಾ, ಆಗಸ್ಟ್ 21: ಇತ್ತೀಚೆಗೆ ಕತಾರ್ ವಿಶ್ವವಿದ್ಯಾಲಯದಿಂದ ಭಾರತೀಯ ಮೂಲದ ಮಹಿಳೆ, ಹರ್ಷಿತಾ ಶೈಲೇಶ್ ಅವರು ಗೌರವಾನ್ವಿತ ಪಿಎಚ್ಡಿ ಪದವಿ ಪಡೆದಿದ್ದಾರೆ. “Role of Protein Arginine Methyltransferase5 (PRMT5) in WNT/β-CATENIN" ಎಂಬ ಸ್ತನ ಕಾನ್ಸರ್ ಪ್ರಸರಣ ಸಂಕೇತಕ್ಕೆ ಸಂಬಂಧಪಟ್ಟ ಮಹಾ ಪ್ರಬಂಧಕ್ಕೆ ಈ ಗೌರವ ಸಂದಿದೆ.
ಕತಾರ್ ವಿಶ್ವವಿದ್ಯಾಲಯದ ಜೈವಿಕ ಮತ್ತು ಪರಿಸರ ವಿಜ್ಞಾನದ ವಿಭಾಗಸ್ಥ ಪ್ರೊಫೆಸರ್ ಸಯೀದ್ ಸಿಫ್ ಅವರು ಮಾರ್ಗದರ್ಶನ ನೀಡಿರುತ್ತಾರೆ. ಈ ಮೊದಲು 2020 ರ ಪದವಿ ಸಮಾರಂಭದಲ್ಲಿ ಹರ್ಷಿತಾ ಅವರು ಕತಾರ್ ಎಮಿರ್ ಶೇಖ್ ತಮೀಮ್ ಹಮದ್ ಬಿನ್ ಅಲ್ಥಾನಿಯವರ ಪತ್ನಿ ಹರ್ ಹೈನೆಸ್ ಶೇಖಾ ಜವಾಹರ್ ಬಿಂಟ್ ಹಮಾದ್ ಬಿನ್ ಸುಹೈಮ್ ಅಲ್ಥಾನಿ ಅವರಿಂದ ಚಿನ್ನದ ಪದಕವನ್ನು ಪಡೆದು ಶ್ರೇಷ್ಠ ಮಹಿಳಾ ಪದವಿ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದರು.
ಹರ್ಷಿತಾ, ಕರ್ನಾಟಕ ರಾಜ್ಯದ ಕಾರ್ಕಳದ ತಾಲೂಕಿನ ಸಣ್ಣ ಪಟ್ಟಣದಿಂದ ಬಂದವರು. ಬಾಲ್ಯದಿಂದಲೇ ಅತ್ಯುತ್ತಮ ಸಾಧಕಿಯಾಗಿದ್ದ ಆಕೆ ತನ್ನ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ. ಮಂಗಳೂರಿನ ವಿಶ್ವವಿದ್ಯಾನಿಲಯದಿಂದ ಬಯೋಟೆಕ್ನಾಲಜಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ್ದರು. ನಂತರ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಆಬಳಿಕ ಕತಾರ್ ವಿಶ್ವವಿದ್ಯಾಲಯಕ್ಕೆ ಸೇರಿದ್ದು ಪಿಎಚ್ಡಿ ಮುಗಿಸಿದ್ದಾರೆ.
ಪಿಎಚ್ಡಿ ಆಕ್ರಮಣಕಾರಿ ಸ್ತನ ಕ್ಯಾನ್ಸರ್ ಕೋಶಗಳ ಪ್ರಸರಣ ಮತ್ತು ಬೆಳವಣಿಗೆಯಲ್ಲಿ ಪಿಆರ್ಎಂಟಿ 5 ಪ್ರಮುಖ ಎಪಿಜೆನೆಟಿಕ್ ಕಿಣ್ವದ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ಅಧ್ಯಯನವು ಕೇಂದ್ರೀಕರಿಸಿದೆ. ಅವರ ವ್ಯವಸ್ಥಿತ ಅಧ್ಯಯನವು PRMT5 ಅಭಿವ್ಯಕ್ತಿಯು ಆಕ್ರಮಣಕಾರಿ ಸ್ತನ ಕ್ಯಾನ್ಸರ್ಗಳ ಪೈಕಿ ಹೆಚ್ಚಿದೆ ಎಂದು ತೋರಿಸಿದೆ. ಅಧ್ಯಯನದಿಂದ ಕಂಡುಕೊಂಡ ಅಂಶಗಳು ವಿಶ್ವದಾದ್ಯಂತ ಆಕ್ರಮಣಕಾರಿ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ಜನರಿಗೆ ಒಂದು ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಅಡಿಪಾಯವಾಗಿದೆ. ಇವರ ಸಂಶೋಧನಾ ಪ್ರಬಂಧ ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
Harshitha from karkala gets Phd by Qatar University in Qatar.
07-05-24 09:11 pm
HK News Desk
Lok Sabha Elections 2024, Uttar Karnataka Vot...
07-05-24 07:11 pm
Karnataka Bitcoin scam, Srikrishna Ramesh ali...
07-05-24 06:18 pm
Ramesh Jarkiholi, DK Shivakumar, Prajwal Reva...
07-05-24 12:43 pm
ಮಂಡ್ಯದಲ್ಲಿ ಭ್ರೂಣಹತ್ಯೆ ಪ್ರಕರಣ ಜೀವಂತ ! ಪಾಂಡವಪುರ...
07-05-24 11:27 am
07-05-24 10:26 pm
HK News Desk
Solapur Lok Sabha Constituency, Maharashtra,...
07-05-24 08:38 pm
Ram Mandir, Rahul Gandhi, Acharya Pramod Kris...
07-05-24 05:16 pm
Kasaragod Manjeshwar accident, Ambulance: ಮಂಜ...
07-05-24 03:26 pm
ಕನ್ಯಾಕುಮಾರಿ ; ವೇಮೂರ್ ಬೀಚ್ ನಲ್ಲಿ ಐವರು ಮೆಡಿಕಲ್...
06-05-24 09:31 pm
07-05-24 02:34 pm
Mangalore Correspondent
Mangalore Crime News, suicide: ವೆನ್ಲಾಕ್ ಆಸ್ಪತ...
06-05-24 08:17 pm
Lok Sabha election, Prajwal Revanna: ಪ್ರಜ್ವಲ್...
06-05-24 04:54 pm
Prajwal Revanna sex, Congress Shalet Pinto Ma...
06-05-24 02:51 pm
Ksrtc Mangalore, crime: ಸೈಡ್ ಕೊಟ್ಟಿಲ್ಲ ಎಂಬ ಕಾ...
06-05-24 02:14 pm
07-05-24 10:03 pm
HK News Desk
Bangalore Cyber crime: ಸ್ಟಾಕ್ ಮಾರ್ಕೆಟ್ ಹೂಡಿಕೆ...
07-05-24 09:48 pm
Bangalore crime, Robbery: ಊರಿಗೆ ಹೋದ್ಲು ಅಕ್ಕ ;...
07-05-24 02:57 pm
Crime News: ಗಂಡನ ಕೈ - ಕಾಲು ಕಟ್ಟಿ ಸಿಗರೇಟ್ ನಿಂ...
07-05-24 12:53 pm
Crime News, Bangalore: ಕುಡಿದ ಮತ್ತಿನಲ್ಲಿ ತಾಯಿಯ...
07-05-24 12:14 pm