ಬ್ರೇಕಿಂಗ್ ನ್ಯೂಸ್
24-08-21 02:00 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 23: ಇತ್ತೀಚೆಗಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದೆ. ಆದರೆ, ತುರ್ತು ಕರೆಗೆ ಸ್ಪಂದಿಸಿ ಆಗಸ್ಟ್ 9ರಂದು ಅಫ್ಘಾನಿಸ್ತಾನಕ್ಕೆ ತಲುಪಿದ್ದೆ. ಕೇವಲ ಐದು ದಿನ ಕರ್ತವ್ಯ ನಿರ್ವಹಿಸುವಷ್ಟರಲ್ಲಿ ದೇಶವನ್ನು ತಾಲಿಬಾನಿ ಭಯೋತ್ಪಾದಕರು ಸ್ವಾಧೀನ ಪಡಿಸಿಕೊಂಡಿದ್ದರು. ಆದರೆ ಅಮೆರಿಕದ ಮಿಲಿಟರಿ ಬೇಸ್ ನಲ್ಲಿದ್ದ ಕಾರಣ ನಮಗೇನೂ ತೊಂದರೆ ಆಗಿಲ್ಲ ನಗರದ ಬಿಕರ್ನಕಟ್ಟೆಯ ನಿವಾಸಿ ರಾಕಿ ಚರಣ್ ಮೊಂತೇರೋ ಹೇಳಿದ್ದಾರೆ.
ಅಮೆರಿಕ ಸೇನಾಪಡೆಯಲ್ಲಿ ಮೆಕಾನಿಕಲ್ ಇನ್ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಕಿ ಚರಣ್ ಕಳೆದ ಮಾರ್ಚ್ ತಿಂಗಳಲ್ಲಿ ಊರಿಗೆ ಬಂದಿದ್ದೆ. ಈ ಮಧ್ಯೆ ಸೇನಾ ವಿಭಾಗದಿಂದ ತುರ್ತು ಕರೆ ಬಂದ ಕಾರಣಕ್ಕೆ ಆ. 9ರಂದು ಅಪಘಾನಿಸ್ಥಾನಕ್ಕೆ ತೆರಳಿದ್ದೆ. ಅಲ್ಲಿ ಅಮೆರಿಕ ಸೇನೆಯ ಅಗತ್ಯ ಕಾರ್ಯಗಳನ್ನ ನಿರ್ವಹಣೆ ಮಾಡುತ್ತಿದ್ದಾಗಲೇ ಇಡೀ ದೇಶವನ್ನು ತಾಲಿಬಾನ್ಗಳು ಆಕ್ರಮಿಸಿದ್ದರು. ರಜೆಯಲ್ಲಿ ಬಂದು ಮತ್ತೆ ಕರ್ತವ್ಯಕ್ಕೆ ಹಾಜರಾದ ಐದೇ ದಿನದಲ್ಲಿ ಈ ರೀತಿ ಆಗಿದ್ದು ಆತಂಕಗೊಂಡಿದ್ದೆ.



ಆದರೆ, ಈ ನಡುವೆ ಆ.16ರ ರಾತ್ರಿ ಕಾಬೂಲ್ನಿಂದ ಕತಾರ್ ಗೆ ಏರ್ಲಿಫ್ಟ್ ಮಾಡುವುದೆಂದು ತಿಳಿಸಿದರು. ವಿಮಾನದಲ್ಲಿ ಕುಳಿತಾಗ ನಿಲ್ದಾಣದ ಹೊರಗೆ ಜನಜಂಗುಳಿ ಕಾಣಿಸಿತು. ಜನರು ಜೀವ ರಕ್ಷಣೆಗಾಗಿ ಬಸ್ ನಿಲ್ದಾಣಕ್ಕೆ ನುಗ್ಗಿದಂತೆ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿರುವುದು ಅಲ್ಲಿನ ಭೀಕರತೆಗೆ ಸಾಕ್ಷಿಯಾಗಿತ್ತು ಎಂದಿದ್ದಾರೆ.
ಅಮೆರಿಕ ಸೇನೆ ಭಾರತೀಯರು ಸಹಿತ ತಮ್ಮ ಹಿಡಿತದಲ್ಲಿರುವ ಮಿಲಿಟರಿ ಬೇಸ್ ನೌಕರರನ್ನು ಕತಾರ್ ನಿಲ್ದಾಣಕ್ಕೆ ಸ್ಥಳಾಂತರ ಮಾಡುತ್ತಿದೆ. ಅಲ್ಲಿಂದ ಭಾರತೀಯ ರಾಯಭಾರಿಗಳು ಸೇರಿ ನಮ್ಮನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ತಲುಪಿಸಿದ್ದಾರೆ ರಾಕಿ ಚರಣ್ ಮೊಂತೆರೋ ನಿಟ್ಟುಸಿರು ಬಿಟ್ಟಿದ್ದಾರೆ.
Rocky Sharan stranded in Afghan reaches Mangalore shares his experience in Kabul. Last night five stranded people reached Managalore airport.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm