ಬ್ರೇಕಿಂಗ್ ನ್ಯೂಸ್
24-08-21 10:28 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 24: ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ ಬಳಿಯಲ್ಲಿ ಅತಂತ್ರರಾಗಿ ಸಿಕ್ಕಿಬಿದ್ದಿದ್ದ ಸಿದ್ದಕಟ್ಟೆ ಮೂಲದ ಫಾದರ್ ಜೆರೋಮ್ ಸಿಕ್ವೇರಾ (52) ವಾಯುಪಡೆ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಎರಡು ದಿನಗಳ ಹಿಂದೆ ಅವರನ್ನು ಕತಾರ್ ಗೆ ಏರ್ ಲಿಫ್ಟ್ ಮಾಡಿ, ಅಲ್ಲಿಂದ ವಾಯುಪಡೆ ಕರೆತಂದಿದೆ ಎನ್ನಲಾಗುತ್ತಿದೆ.
ಜೆರೋಮ್ ಮಂಗಳೂರು ಮೂಲದವರಾದರೂ ಅವರ ಸೇವಾ ವ್ಯಾಪ್ತಿ ರಾಜಸ್ಥಾನ ಆಗಿರುವುದರಿಂದ ಈಗಲೇ ಊರಿಗೆ ಆಗಮಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ವಾರದ ಹಿಂದೆ, ತಮ್ಮ ಆಪ್ತರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದ ಜೆರೋಮ್, ತನ್ನೆದುರಲ್ಲೇ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ಮೆಸೇಜ್ ಫಾದರ್ ಜೆರೋಮ್ ಕೆಲಸ ಮಾಡುತ್ತಿರುವ ಜೆಸೂಟ್ ರೆಫ್ಯುಜಿ ಸರ್ವಿಸಸ್ ಸಂಘಟನೆಯ ಸದಸ್ಯರಿಗೆ ಲಭ್ಯವಾಗಿತ್ತು.
"ನಾನು ಬೆಳಗ್ಗೆ ಕಾಬೂಲ್ ಏರ್ಪೋರ್ಟ್ ಕಡೆಗೆ ಬರುತ್ತಿದ್ದೆ. ಆದರೆ, ಅಲ್ಲಿನ ಸ್ಥಿತಿ ನೋಡಿ ಭಯಭೀತಿ ಉಂಟುಮಾಡಿತ್ತು. ತಾಲಿಬಾನ್ ಉಗ್ರರು ಏರ್ಪೋರ್ಟ್ ಮತ್ತು ಅಲ್ಲಿಗೆ ಬರುವ ರಸ್ತೆಗಳನ್ನು ವಶಕ್ಕೆ ಪಡೆದು ಜನರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಸೇರಿದ್ದ ಸಾವಿರಾರು ಜನರು ಮತ್ತು ವಾಹನಗಳ ನಡುವೆ ನಾನು ನನ್ನ ಲಗ್ಗೇಜ್ ತಳ್ಳಿಕೊಂಡೇ ಮುಂದಕ್ಕೆ ಬಂದಿದ್ದೆ. ಆದರೆ ಸಾವಿರಾರು ಜನರು ಏರ್ಪೋರ್ಟ್ ಬಳಿಗೆ ನುಗ್ಗಿ ಬರುತ್ತಿದ್ದರು. ಕೊನೆಗೆ, ಹೇಗಾದ್ರೂ ಮಾಡಿ ಏರ್ಪೋರ್ಟ್ ಎರಡನೇ ಗೇಟ್ ಬಳಿಗೆ ಬಂದು ತಲುಪಿದ್ದೆ. ಅಷ್ಟರಲ್ಲಿ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸತೊಡಗಿದ್ದಾರೆ. ಜನರನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ಪಿಸ್ತೂಲ್ ತೋರಿಸಿ ಹೆದರಿಸುತ್ತಿದ್ದರು. ನಾನು ಅಲ್ಲಿಗೆ ತಲುಪುವಾಗಲೇ ಸಾವಿರಾರು ಜನರು ಏರ್ಪೋರ್ಟ್ ಒಳಗಡೆ ನುಗ್ಗಿದ್ದರು. ಅದಕ್ಕೂ ಮೊದಲೇ ಏರ್ಪೋರ್ಟ್ ಸಿಬಂದಿ ತಮ್ಮ ಸ್ಥಾನ ಬಿಟ್ಟು ಓಡಿ ಹೋಗಿದ್ದರು. ಜನರು ಒಮ್ಮೆಲೇ ಅಲ್ಲಿ ನಿಂತಿದ್ದ ವಿಮಾನದತ್ತ ಓಡತೊಡಗಿದ್ದರು. ಯಾವುದೇ ಸೆಕ್ಯುರಿಟಿಯೂ ಇರಲಿಲ್ಲ. ಬೋರ್ಡಿಂಗ್ ಪಾಸ್ ಕೂಡ ಇರದೇ ವಿಮಾನ ಹತ್ತಲು ಆರಂಭಿಸಿದ್ದರು..."
ಹೀಗೆಂದು ಕಳೆದ ವಾರ ವೈರಲ್ ಆಗಿದ್ದ ವಿಮಾನದ ಮೇಲೇರಿ ಹತ್ತಿ ಕುಳಿತ ವಿಡಿಯೋ ಘಟನೆಯು ತನ್ನ ಕಣ್ಣೆದುರಲ್ಲೇ ನಡೆದಿತ್ತು ಎಂದು ವಾಯ್ಸ್ ಮೆಸೇಜ್ ನಲ್ಲಿ ಜೆರೋಮ್ ವಿವರಿಸಿದ್ದಾರೆ.
ಜೆಸೂಟ್ ರೆಫ್ಯುಜಿ ಸರ್ವಿಸಸ್ ಎನ್ನುವುದು ಅಂತಾರಾಷ್ಟ್ರೀಯ ಎನ್ ಜಿಓ ಸೇವಾ ಸಂಸ್ಥೆಯಾಗಿದ್ದು ಫಾ.ಜೆರೋಮ್ ಸಿಕ್ವೇರಾ ಕಾಬೂಲ್ ಘಟಕದ ಮುಖ್ಯಸ್ಥರಾಗಿ ನೇಮಕವಾಗಿದ್ದರು. ರಾಜಸ್ಥಾನದ ಜೆಮ್ಮೆಡ್ ಪುರದಲ್ಲಿ ನೆಲೆಸಿದ್ದ ಜೆರೋಮ್ ಕಳೆದ ಜನವರಿಯಲ್ಲಿ ಕಾಬೂಲಿಗೆ ತೆರಳಿದ್ದರು. ಆದರೆ, ಕಳೆದ ಒಂದು ವಾರದಿಂದ ಏರ್ಪೋರ್ಟ್ ಬಳಿ ಸಿಕ್ಕಿಬಿದ್ದಿದ್ದ ಜೆರೋಮ್ ವಿದೇಶಾಂಗ ಇಲಾಖೆಯ ಸಂಪರ್ಕದಲ್ಲಿದ್ದರು. ಅದರ ಜೊತೆಗೆ, ಕುಟುಂಬಸ್ಥರಿಗೂ ಫೋನ್ ಮಾಡಿ, ತಾನು ಸೇಫ್ ಆಗಿರುವ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಜೆರೋಮ್ ದೆಹಲಿಗೆ ತಲುಪಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅವರ ಜೊತೆಗಿದ್ದ ತೀರ್ಥಹಳ್ಳಿ ಮೂಲದ ಇನ್ನೊಬ್ಬ ಫಾದರ್ ಕುರಿತು ಮಾಹಿತಿಯಿಲ್ಲ.
A Jesuit priest, Fr Jerome Sequeira, a resident of Kallkuri from Siddakatte of Sangabettu village, who was stranded in strife-ridden Afghanistan, arrived at Delhi on Tuesday August 24. Fr Jerome is working as the head in-charge of Jesuit Refugee Services (JRS), an international NGO in Kabul.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm