ಮಾಂಸ ಕೊಡಿಸುವ ಆಮಿಷ ; ಐದರ ಬಾಲೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಧರ್ಮದೇಟು !

12-09-21 10:44 pm       Mangaluru Correspondent   ಕರಾವಳಿ

ಐದರ ಬಾಲೆಯನ್ನು ಮಾಂಸ ತಿನ್ನಿಸುವ ಆಮಿಷ ಒಡ್ಡಿ ತೋಟಕ್ಕೆ ಒಯ್ದು ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಿನ್ಯ ಗ್ರಾಮದ ನಡುಕುಮೇರಿನಲ್ಲಿ ನಡೆದಿದೆ.

ಉಳ್ಳಾಲ, ಸೆ.12 : ಐದರ ಬಾಲೆಯನ್ನು ಮಾಂಸ ತಿನ್ನಿಸುವ ಆಮಿಷ ಒಡ್ಡಿ ತೋಟಕ್ಕೆ ಒಯ್ದು ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಿನ್ಯ ಗ್ರಾಮದ ನಡುಕುಮೇರಿನಲ್ಲಿ ನಡೆದಿದೆ.

ಆರಿಫ್ ಪಾಷಾ ಎಂಬಾತನೇ ಧರ್ಮದೇಟು ತಿಂದ ಕಾಮುಕ. ನಡುಕುಮೇರಿನಲ್ಲಿ ನೆಲೆಸಿರುವ ಹೊರಜಿಲ್ಲೆಯ ವಲಸೆ ಕಾರ್ಮಿಕನೊಬ್ಬನ ಪರಿಚಯಸ್ಥನಾಗಿರುವ ಆರಿಫ್ ಆತನ 5 ರ ಹರೆಯದ ಹೆಣ್ಣು ಮಗುವನ್ನು ಇಂದು ಸಂಜೆ ಮಾಂಸ ಕೊಡುತ್ತೇನೆಂದು ಪುಸಲಾಯಿಸಿ ಹತ್ತಿರದ ತೋಟವೊಂದಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ. 

ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಎಂಬವರು ಮಗು ಕಿರಾತಕನ ಕೈಯಿಂದ ತಪ್ಪಿಸಿ ಬರುತ್ತಿದ್ದದನ್ನು ಕಂಡು ಮಗುವನ್ನ ರಕ್ಷಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಜನರು ಆರೋಪಿಗೆ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಆರಿಫ್ ಪಾಷಾ ಕೂಡ ವಲಸೆ ಕಾರ್ಮಿಕನೆಂದು ತಿಳಿದು ಬಂದಿದೆ. ಬಜರಂಗದಳದ ಪ್ರಮುಖರಾದ ಅರ್ಜುನ್ ಮಾಡೂರು, ಪವಿತ್ರ ಕೆರೆಬೈಲ್ ಅವರು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದ್ದಾರೆ.

Ullal police on Sunday September 12 arrested a man for allegedly sexually harassing a five-year-old girl. The incident was reported near Natekal. The guy was thrashed by the public and later was handed over to the public.