ದುಬೈನಿಂದ ತರುತ್ತಿದ್ದ 41.33 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ; ಪೇಸ್ಟ್ ರೂಪಕ್ಕಿಳಿಸಿ ನಾಲ್ಕು ಉಂಡೆಗಳಾಗಿಸಿದ್ದ ಪ್ರಯಾಣಿಕ !

16-09-21 05:50 pm       Mangaluru Correspondent   ಕರಾವಳಿ

ದುಬೈನಿಂದ ವಿಮಾನದ ಮೂಲಕ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಮಂಗಳೂರು, ಸೆ.16 : ದುಬೈನಿಂದ ವಿಮಾನದ ಮೂಲಕ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಕಾಸರಗೋಡು ಜಿಲ್ಲೆಯ ನಿವಾಸಿ ಪ್ರಯಾಣಿಕ ತನ್ನ ಗುದದ್ವಾರದಲ್ಲಿ ಚಿನ್ನವನ್ನು ಪೇಸ್ಟ್ ರೂಪಕ್ಕಿಳಿಸಿ ನಾಲ್ಕು ಉಂಡೆಗಳಾಗಿಸಿ ತರುತ್ತಿದ್ದ. ‌ಈ ವೇಳೆ ಕಸ್ಟಮ್ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. 

ಆತನ ಬಳಿ 854 ಗ್ರಾಂ ತೂಕದ ರೂ. 41.33 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ವೇಳೆ ಸಿಕ್ಕಿಬಿದ್ದಿದ್ದು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

41 lakhs worth God seized inside capsules from Kasaragod Passanger in Mangalore Airport. 854 grams of Gold has been seized by the custom officials.