ಬ್ರೇಕಿಂಗ್ ನ್ಯೂಸ್
16-09-21 09:45 pm Mangaluru Correspondent ಕರಾವಳಿ
ಮಂಗಳೂರು, ಸೆ.16 : ನಗರದ ಮರೋಳಿಯ ಶೆಡ್ ಒಂದರಲ್ಲಿ ಟ್ಯಾಂಕರ್ ನಲ್ಲಿ ಅಕ್ರಮವಾಗಿ ಶೇಖರಿಸಲಾಗಿದ್ದ 15 ಸಾವಿರ ಲೀಟರ್ ಡೀಸೆಲನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ರಿ ಶೆಡ್ ಮರೋಳಿಯ ಯಮುನಾ ಅರ್ಥ್ ಮೂವರ್ಸ್ ಮತ್ತು ಬೋರ್ ವೆಲ್ಸ್ ಸಂಸ್ಥೆಗೆ ಸೇರಿದ್ದು ಅಕ್ರಮವಾಗಿ ದಾಸ್ತಾನು ಮಾಡಿದ್ದ ಡೀಸೆಲ್ ಕೂಡ ಅದೇ ಕಂಪನಿಗೆ ಸೇರಿದ್ದಾಗಿತ್ತು. ಆದರೆ, ಡೀಸೆಲನ್ನು ದಾಸ್ತಾನು ಮಾಡಿರುವ ಬಗ್ಗೆ ಯಾವುದೇ ದಾಖಲೆ ಹೊಂದಿರಲಿಲ್ಲ. ಕಂಪನಿಯ ಬೋರ್ ವೆಲ್ ಉದ್ದೇಶಕ್ಕೆ ಬಳಸಲು ಡೀಸೆಲ್ ಶೇಖರಣೆ ಮಾಡಿದ್ದರೂ ಅದನ್ನು ಅಕ್ರಮವಾಗಿ ಹೀಗೆ ದಾಸ್ತಾನು ಮಾಡಲು ಅವಕಾಶ ಇಲ್ಲ. ಹೀಗಾಗಿ ಕಂಕನಾಡಿ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಯಮುನಾ ಅರ್ಥ್ ಮೂವರ್ಸ್ ಸಂಸ್ಥೆಯ ಮಾಲಕ ಪುರುಷೋತ್ತಮ್ ಶೆಟ್ಟಿ ಅವರನ್ನು ಈ ಬಗ್ಗೆ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಆದರೆ, ಯಾವುದೇ ದಾಖಲೆ ಒದಗಿಸಲು ಶೆಟ್ಟಿ ವಿಫಲವಾಗಿದ್ದಾರೆ. ಹೀಗಾಗಿ ಪೆಟ್ರೋಲಿಯಂ ಏಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದೆ. 15 ಸಾವಿರ ಲೀಟರ್ ಡೀಸೆಲ್ ಮೌಲ್ಯ 12.5 ಲಕ್ಷ ಆಗಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಹಿತಿ ಪ್ರಕಾರ, ಮುಂಬೈನಿಂದ ನೇರವಾಗಿ ರಿಫೈನರಿ ಕಂಪನಿಗಳಿಂದ ಅಥವಾ ಬೇನಾಮಿಯಾಗಿ ಇನ್ನಿತರ ಮೂಲಗಳಿಂದ ಡೀಸೆಲನ್ನು ಕಡಿಮೆ ದರಕ್ಕೆ ಪಡೆದು ದಾಸ್ತಾನು ಮಾಡಲಾಗುತ್ತದೆ. ಅದೇ ರೀತಿ ಯಮುನಾ ಅರ್ಥ್ ಮೂವರ್ಸ್ ಕಂಪನಿಯವರು ಮಾಡಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಇತ್ತೀಚೆಗೆ ಬಂಟ್ವಾಳದಲ್ಲಿ ಡೀಸೆಲ್ ಪೈಪ್ ಲೈನಿಗೆ ಕನ್ನ ಹಾಕಿದ್ದಲ್ಲದೆ, 50 ಸಾವಿರ ಲೀಟರಿಗೂ ಹೆಚ್ಚು ಡೀಸೆಲ್ ಕಳವಾಗಿದ್ದು ಕಂಡುಬಂದಿತ್ತು. ಈ ರೀತಿ ಕಳವು ಮಾಡುವ ಡೀಸೆಲನ್ನು ಬೇನಾಮಿ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಬೋರ್ ವೆಲ್ ಕಂಪನಿಯವರು ಯಾವ ಮೂಲದಿಂದ ಡೀಸೆಲ್ ಪಡೆದಿದ್ದಾರೆ ಅನ್ನೋದು ಪೊಲೀಸರಿಗೆ ಪತ್ತೆಯಾಗಿಲ್ಲ. ಪೆಟ್ರೋಲ್ ಪಂಪ್ ಹೊರತುಪಡಿಸಿ ಇತರ ಕಡೆ ಡೀಸೆಲ್ ಅಥವಾ ಪೆಟ್ರೋಲ್ ಖರೀದಿಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ.
Mangalore Police seize illegally stored 15,000 litres of Diesel stored in a tank of tanker lorry from Yamuna Earth Movers and Buildts shed at Maroli. Police sources informed that it was stored without any permit. In this regard, police have taken one person for inquiry.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm