ಬ್ರೇಕಿಂಗ್ ನ್ಯೂಸ್
26-09-21 06:43 pm Mangaluru Correspondent ಕರಾವಳಿ
ಉಡುಪಿ, ಸೆ.26: ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ವಾಷಿಂಗ್ಟನ್ ಡಿಸಿಯಲ್ಲಿ ಉಡುಪಿ ಮೂಲದ ಹೊಟೇಲ್ ಉದ್ಯಮಿಗೆ ಸೇರಿದ ರೆಸ್ಟೋರೆಂಟಿಗೆ ತೆರಳಿ, ಉಡುಪಿ ಖಾದ್ಯವನ್ನು ಸವಿದಿದ್ದಾರೆ.
ಬೈಂದೂರು ಮೂಲದ ಆನಂದ್ ಪೂಜಾರಿ ಮತ್ತು ಸುಮಿತಾ ದಂಪತಿ ಕಳೆದ 35 ವರ್ಷಗಳಿಂದ ಅಮೆರಿಕದಲ್ಲಿದ್ದು, ವಾಷಿಂಗ್ಟನ್ ಡಿಸಿಯಲ್ಲಿ ವುಡ್ ಲ್ಯಾಂಡ್ಸ್ ಹೆಸರಲ್ಲಿ ಸ್ಟಾರ್ ಹೊಟೇಲ್ ನಡೆಸುತ್ತಿದ್ದಾರೆ. ಅಲ್ಲಿನ ಭಾರತೀಯರಿಗೆ ದಕ್ಷಿಣ ಭಾರತ ಶೈಲಿಯ ಆಹಾರ, ತಿನಿಸುಗಳನ್ನು ಮಾಡಿಕೊಡುತ್ತಿದ್ದಾರೆ. ಭಾರತೀಯ ಮೂಲದವರು, ಇಲ್ಲಿನ ಅಧಿಕಾರಿಗಳು, ಕೇಂದ್ರ ಸರಕಾರದ ಪ್ರತಿನಿಧಿಗಳು ವಾಷಿಂಗ್ಟನ್ ತೆರಳಿದರೇ ಇದೇ ಹೊಟೇಲಿಗೆ ಬಂದು ಆತಿಥ್ಯ ಪಡೆಯುತ್ತಾರೆ.

ಪ್ರಧಾನಿ ಮೋದಿ ವಾಷಿಂಗ್ಟನ್ ತೆರಳಿದ್ದರಿಂದ ಸೆ.24ರಂದು ಉಡುಪಿ ಮೂಲದ ಹೊಟೇಲ್ ನಲ್ಲಿ ಉಪಾಹಾರ ಸೇವಿಸಿದ್ದಾರೆ. ಇಡ್ಲಿ, ವಡೆ ಸಾಂಬಾರ್ ಮತ್ತು ಎರಡು ರೀತಿಯ ಸ್ವೀಟ್ ಐಟಂಗಳನ್ನು ಮೋದಿ ಸವಿದಿದ್ದಾರೆ. ಈ ಮೂಲಕ ಅಮೆರಿಕಕ್ಕೆ ತೆರಳಿದರೂ, ಉಡುಪಿ ಮೂಲದ ಖಾದ್ಯವನ್ನು ಸವಿಯುವ ಮೂಲಕ ಭಾರತೀಯ ಖಾದ್ಯಕ್ಕೆ ಮೋದಿ ಆದ್ಯತೆ ನೀಡಿದ್ದಾರೆ.
ಈ ವೇಳೆ, ಪ್ರಧಾನಿ ಮೋದಿ ಅವರನ್ನು ಆನಂದ್ ಪೂಜಾರಿ ದಂಪತಿ ಭೇಟಿಯಾಗಿದ್ದು, ಹಾರೈಕೆ ತಿಳಿಸಿದ್ದಾರೆ. ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ಬಡಿಯ ಪೂಜಾರಿ – ಗಿರಿಜಾ ದಂಪತಿಯ ಮಗ ಆನಂದ್ ಪೂಜಾರಿ, 35 ವರ್ಷಗಳಿಂದ ಅಮೆರಿಕದಲ್ಲಿದ್ದರೂ, ಪ್ರತಿ ವರ್ಷ ಊರಿಗೆ ಬರುತ್ತಾರೆ. ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದ ಮೂರು ವರ್ಷಗಳಿಂದ ಊರಿಗೆ ಬಂದಿರಲಿಲ್ಲ.
ಆನಂದ ಪೂಜಾರಿ ದಂಪತಿ ನಾಲ್ಕನೇ ಬಾರಿಗೆ ಮೋದಿಯನ್ನು ಭೇಟಿಯಾಗಿದ್ದು ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ಕ್ವಾಡ್ ಮೀಟ್ ಸಲುವಾಗಿ ಸೆ.23ರಂದು ಅಮೆರಿಕಕ್ಕೆ ತೆರಳಿದ್ದ ಮೋದಿ, ವಿಶ್ವಸಂಸ್ಥೆಯಲ್ಲಿ ಭಾಷಣ ಸೇರಿದಂತೆ ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿ ವಿಚಾರದಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.
Anand Poojary hosted the Prime Minister in United States and also took care of his diet. Anand Poojary along with his wife who have been living in Washington DC for about 35 years have been running Woodlands Hotel for 25 years,
11-02-26 11:02 pm
HK News Desk
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
11-02-26 06:47 pm
HK News Desk
ಹಗಲಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್, ರಾತ್ರಿ ವೇಳೆ...
11-02-26 04:22 pm
ಮಥುರಾದಲ್ಲಿ ಮೂವರು ಮಕ್ಕಳಿಗೆ ವಿಷವುಣಿಸಿ ದಂಪತಿ ಸಾವ...
10-02-26 07:31 pm
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
11-02-26 06:00 pm
Mangalore Correspondent
ಎಡಪದವು ಬಳಿ ಹೊಸ ಹೆದ್ದಾರಿಗೆ ಅಗೆತ - ಹಳೆ ರಸ್ತೆ ಕು...
11-02-26 03:45 pm
Love Jihad, Mangalore: ಬಿಎಸ್ಸಿ ಕ್ರಿಮಿನಾಲಜಿ ಓದ...
10-02-26 11:03 pm
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
11-02-26 10:54 pm
Udupi Correspondent
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm
ಸಚಿವ ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾ...
10-02-26 09:05 pm
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am