ಬ್ರೇಕಿಂಗ್ ನ್ಯೂಸ್
27-09-21 01:20 pm Mangaluru Correspondent ಕರಾವಳಿ
ಉಳ್ಳಾಲ, ಸೆ.27: ಹಿರಿಯ ಜನಪದ ವಿದ್ವಾಂಸರು, ಸಾಹಿತಿ ಪ್ರೊ.ಡಾ.ಅಮೃತ ಸೋಮೇಶ್ವರ ಅವರ 86ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ "ಗೌರವಶ್ರೀ" ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರದಾನ ಮಾಡಲಾಗುವ 2020ನೇ ಸಾಲಿನ ಗೌರವಶ್ರೀ ಪ್ರಶಸ್ತಿಗೆ ಮಂಗಳೂರಿನ ಹಿರಿಯ ಸಾಹಿತಿ ಮತ್ತು ಜನಪದ ವಿದ್ವಾಂಸರಾದ ಪ್ರೊ.ಡಾ.ಅಮೃತ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿತ್ತು. ಕಳೆದ ಸೆ.12 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿತ್ತು. ಅನಾರೋಗ್ಯದ ಕಾರಣ ಸಾಹಿತಿ ಅಮೃತರಿಗೆ ಬೆಂಗಳೂರಿಗೆ ತೆರಳಲು ಆಗಿರಲಿಲ್ಲ. ಇಂದು ಅಮೃತರ ಸೋಮೇಶ್ವರದ ಸ್ವಗೃಹ ಒಲುಮೆಯಲ್ಲಿ "ಗೌರವ ಶ್ರೀ" ಪ್ರಶಸ್ತಿಯನ್ನು ಪ್ರದಾನಿಸಲಾಯಿತು.



ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ವಿ ವಸಂತ್ ಕುಮಾರ್ ಮಾತನಾಡಿ ಅಮೃತರಂತಹ ಮಹಾನ್ ಸಾಹಿತಿಗೆ ಪ್ರಶಸ್ತಿ ಪ್ರದಾನ ಮಾಡಿರುವುದರಿಂದ ಈ ಪ್ರಶಸ್ತಿಯ ಗೌರವ ಇಮ್ಮಡಿಯಾಗಿದೆ. ಅವರ ರಚನೆಯ "ಮಾನವತೆ ಗೆದ್ದಾಗ"ಎಂಬ ಕೃತಿಗೆ ಇಂದು ಅವರೇ ನಿದರ್ಶನರಾಗಿದ್ದಾರೆ. ಸುದೀರ್ಘ ಸಾಹಿತ್ಯ ಜೀವನದಲ್ಲಿ ಅವರು ಅಮೃತತ್ವವನ್ನು ಪ್ರಾಪ್ತಿಸಿದ್ದಾರೆ. ಅವರ ಜೀವನ ಶೈಲಿಯೇ ನಮಗೆಲ್ಲರಿಗೂ ಮಾದರಿ. ಅವರ ಮಾರ್ಗದರ್ಶನ ಅಕಾಡೆಮಿಗೆ ಮುಂದೆಯೂ ಅಗತ್ಯವಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಅಮೃತ ಸೋಮೇಶ್ವರ ಅವರು ಮನೆಯಲ್ಲೇ ಪ್ರಶಸ್ತಿ ಪ್ರದಾನದ ಸನ್ನಿವೇಶ ಸೃಷ್ಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ನನ್ನ ಪಾಡಿಗೆ ನಾನು ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದೇನೆ. ಆಶೆ ,ಆಕಾಂಕ್ಷೆ ಇಲ್ಲದೆ ನನ್ನ ಇತಿ, ಮಿತಿಯಲ್ಲಿ ಮಾಡಿದ ಕೆಲಸವನ್ನ ಗಮನಿಸಿ ಗೌರವಿಸಿದಕ್ಕೆ ಕೃತಜ್ಞತೆ ಅರ್ಪಿಸಿದರು.


ಅಕಾಡೆಮಿ ಅಧ್ಯಕ್ಷರು, ಪದಾಧಿಕಾರಿಗಳು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಮೃತ ಸೋಮೇಶ್ವರ ಅವರು ಕೇಕ್ ಕತ್ತರಿಸಿ 86ನೇ ಹುಟ್ಟುದಿನವನ್ನ ಆಚರಿಸಲಾಯಿತು. ಅಮೃತರ ಮೊಮ್ಮಗಳಾದ ಸೃಷ್ಟಿ ಸೋಮೇಶ್ವರ ಅವರು ಅಜ್ಜನದ್ದೇ ಸಾಹಿತ್ಯದ 'ಎಂಚಿತ್ತಿ ಮಗನ್ ಪಡೆಯಲ್ ಪಾರ್ವತಿ...' ಎಂಬ ಭಕ್ತಿಗೀತೆಯನ್ನ ಹಾಡಿ ರಂಜಿಸಿದಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆದ ಎನ್. ಕರಿಯಪ್ಪ , ಪದಾಧಿಕಾರಿಗಳಾದ ಹರೀಶ್ ಕುಮಾರ್, ಡಾ.ಬಿ.ಎಂ ಶರಭೇಂದ್ರ ಸ್ವಾಮಿ, ಮಂಗಳೂರು ಆಕಾಶವಾಣಿಯ ಸೂರ್ಯನಾರಾಯಣ ಭಟ್, ಅಮೃತ ಸೋಮೇಶ್ವರರ ಧರ್ಮ ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ, ಸೃಷ್ಟಿ ಸೋಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.
Ullal Tulu scholar and writer Dr Amrut Someshwar honoured by Sahitya Academy awards Gourawa Shree on 86th birthday. The program was held in Someshwar in Mangalore.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm