ಕಾಡಿದ ಅನಾರೋಗ್ಯ ; ಪೆಟ್ರೋಲ್ ಕುಡಿದು ಸಾವಿಗೆ ಶರಣಾದ ವೃದ್ಧ ಮಹಿಳೆ

30-09-21 03:28 pm       Mangaluru Correspondent   ಕರಾವಳಿ

ಅನಾರೋಗ್ಯದಿಂದ ಬೇಸತ್ತ ವೃದ್ಧ ಮಹಿಳೆಯೊಬ್ಬರು ಮನೆಯಲ್ಲಿದ್ದ ಪೆಟ್ರೋಲ್ ಕುಡಿದು ಸಾವಿಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದಲ್ಲಿ ನಡೆದಿದೆ.

ಬಂಟ್ವಾಳ, ಸೆ.30: ತನ್ನ ಅನಾರೋಗ್ಯದಿಂದ ಬೇಸತ್ತ ವೃದ್ಧ ಮಹಿಳೆಯೊಬ್ಬರು ಮನೆಯಲ್ಲಿದ್ದ ಪೆಟ್ರೋಲ್ ಕುಡಿದು ಸಾವಿಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದಲ್ಲಿ ನಡೆದಿದೆ.

78 ವರ್ಷದ ಪದ್ಮಾವತಿ ಮೃತಪಟ್ಟ ಮಹಿಳೆ. ಅವರು ಮಗಳ ಗಂಡನ ಮನೆ, ಬಿಳಿಯೂರು ನಿವಾಸಿ ಉಮಾನಾಥ ಶೆಟ್ಟಿ ಎಂಬವರ ಮನೆಯಲ್ಲಿ ನಾಲ್ಕು ವರ್ಷಗಳಿಂದ ವಾಸವಿದ್ದರು. ಆದರೆ, ಅನಾರೋಗ್ಯದಿಂದಾಗಿ ಇನ್ನೊಬ್ಬರನ್ನು ಅವಲಂಬಿಸಿ, ಬದುಕುವ ಪರಿಸ್ಥಿತಿ ಬಂತಲ್ಲ ಎಂದು ಮನೆಯಲ್ಲಿ ಕೊರಗುತ್ತಿದ್ದರು. ಇದೇ ವಿಚಾರವನ್ನು ಹೇಳಿಕೊಂಡು ಬೇಸರ ಪಡುತ್ತಿದ್ದ ಪದ್ಮಾವತಿ ಸೆ.26ರಂದು ಮನೆಯಲ್ಲಿ ಹುಲ್ಲು ಕೊಯ್ಯುವ ಯಂತ್ರಕ್ಕಾಗಿ ತಂದಿಟ್ಟಿದ್ದ ಪೆಟ್ರೋಲನ್ನು ಕುಡಿದು ಅಸ್ವಸ್ಥಗೊಂಡಿದ್ದರು.

ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೆ.29ರಂದು ಸಂಜೆ ಮಹಿಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಉಮಾನಾಥ ಶೆಟ್ಟಿ ನೀಡಿದ ದೂರಿನಂತೆ, ಉಪ್ಪಿನಂಗಡಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. 

Mangalore Woman depressed by health issues drinks petrol and ends life in Bantwal. The deceased has been identified as Padmavathi (78).