ಕೆಎಸ್ಸಾರ್ಟಿಸಿ ಬಸ್ ಚಾಲಕನ ಧಾವಂತಕ್ಕೆ ತಾಯಿ, ಮಗು ಬಲಿ ! ಬೆಳ್ಳಂಬೆಳಗ್ಗೆ ಉಪ್ಪಿನಂಗಡಿ ಪೇಟೆಗೆ ನುಗ್ಗಿದ ಯಮದೂತ !

12-10-21 01:27 pm       Mangalore Reporter   ಕರಾವಳಿ

ಕೆಎಸ್ ಆರ್ ಟಿಸಿ ಬಸ್ ಚಾಲಕನ ಧಾವಂತಕ್ಕೆ ತಾಯಿ, ಮಗು ಪ್ರಾಣ ಕಳಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪುತ್ತೂರು, ಅ.12 : ಕೆಎಸ್ ಆರ್ ಟಿಸಿ ಬಸ್ ಚಾಲಕನ ಧಾವಂತಕ್ಕೆ ತಾಯಿ, ಮಗು ಪ್ರಾಣ ಕಳಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ತಾಯಿ ತನ್ನ ಒಂದು ವರ್ಷದ ಮಗುವಿನ ಜೊತೆ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕೆಎಸ್ಸಾರ್ಟಿಸಿ ಬಸ್, ಅವರ ಮೇಲಿನಿಂದ ಹರಿದು ದುರಂತ ಸಂಭವಿಸಿದೆ. 

ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಸಿದ್ದೀಕ್ ಎಂಬವರ ಪತ್ನಿ ಶಾಹಿದಾ (25) ಹಾಗೂ ಆಕೆಯ ಒಂದು ವರ್ಷದ ಪುತ್ರ ಶಾಹೀಲ್ ಮೃತ ದುರ್ದೈವಿಗಳು. ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಇಂದು ಬೆಳಗ್ಗೆ ವೈದ್ಯರ ಬಳಿಗೆಂದು ಪುತ್ತೂರಿಗೆ ಮಗುವಿನ ಜೊತೆ ಹೊರಟಿದ್ದರು.

ಬಸ್ ಬಂತೆಂದು ತಿಳಿದು ಬಸ್ ನಿಲ್ದಾಣಕ್ಕೆ ತಿರುಗುವಲ್ಲೇ ಇರುವ ನಂದಿನಿ ಹಾಲಿನ ಬೂತಿನ ಎದುರಿನಿಂದ ಮತ್ತೊಂದು ಕಡೆಗೆ ಶಾಹಿದಾ ಮಗುವಿನೊಂದಿಗೆ ರಸ್ತೆ ದಾಟಿದ್ದರು‌‌. ಇದೇ ವೇಳೆ ಯಮದೂತನಂತೆ ನುಗ್ಗಿದ ಬಸ್, ತಾಯಿ ಮಗುವಿನ ಮೇಲೆ ಹರಿದಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ. 

ಕ್ಷಣಕಾಲದಲ್ಲಿ ನಡೆದು ಹೋಗಿದ್ದ ಘಟನೆಯಿಂದಾಗಿ ತಾಯಿ, ಮಗುವಿನ ಪ್ರಾಣ ಹೋಗಿದೆ. ಘಟನೆಯ ಬೆನ್ನಲ್ಲೇ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಸೇರಿದ್ದು ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲ್ಲೆ ನಡೆಸುವಷ್ಟರ ಮಟ್ಟಿಗೆ ಹೋಗಿದ್ದು ಬಳಿಕ ಪೊಲೀಸರು ಬಂದು ಜನರನ್ನು ಚದುರಿಸಿದ್ದಾರೆ.

In an unfortunate incident, a woman and her one-and-half-year-old son were killed in a road accident on Tuesday October 12. The deceased are identified as Shahida (25), wife of Siddiq, a resident of Shirlal in Beltangady taluk and her son Shaheel.