ಕೆ.ಸಿ.ರೋಡ್ ಬಳಿ ಭೀಕರ ಅಪಘಾತಕ್ಕೆ ಬೈಕ್ ಸವಾರರು ಬಲಿ ; ಕುದ್ರೋಳಿ ದಸರಾ ವೀಕ್ಷಿಸಿ ತೆರಳುತ್ತಿದ್ದಾಗ ಘಟನೆ 

16-10-21 10:10 am       Mangaluru Correspondent   ಕರಾವಳಿ

ಕುದ್ರೋಳಿ ದಸರಾ ವಿಸರ್ಜನೆ ವೀಕ್ಷಿಸಿ ಹಿಂತಿರುಗುತ್ತಿದ್ದ ಬೈಕ್ ಸವಾರರಿಬ್ಬರು ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ನಿನ್ನೆ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕೆ.ಸಿ.ರೋಡ್ ಬಳಿಯ ಉಚ್ಚಿಲ ಕಿರು ಸೇತುವೆಯಲ್ಲಿ ನಡೆದಿದೆ. 

ಉಳ್ಳಾಲ, ಅ.16: ಕುದ್ರೋಳಿ ದಸರಾ ವಿಸರ್ಜನೆ ವೀಕ್ಷಿಸಿ ಹಿಂತಿರುಗುತ್ತಿದ್ದ ಬೈಕ್ ಸವಾರರಿಬ್ಬರು ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ನಿನ್ನೆ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕೆ.ಸಿ.ರೋಡ್ ಬಳಿಯ ಉಚ್ಚಿಲ ಕಿರು ಸೇತುವೆಯಲ್ಲಿ ನಡೆದಿದೆ. 

ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದ ಕುಂಟನ್ಗರಡ್ಕ ನಿವಾಸಿಗಳಾದ ಕೃಷ್ಣಪ್ರಸಾದ್ ಗಟ್ಟಿ (26) ಪ್ರಜೀತ್ (24) ಮೃತರು. ನಿನ್ನೆ ರಾತ್ರಿ ಯುವಕರಿಬ್ಬರು ದಸರಾ ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಅಪಘಾತ ಆಗಿರುವುದನ್ನು ನೋಡಿ ಕಾರು ಚಾಲಕರೊಬ್ಬರು ನಿಲ್ಲಿಸಿದ್ದು ಸಾರ್ವಜನಿಕರು ಆತನೇ ಅಪಘಾತ ನಡೆಸಿರುವುದಾಗಿ ಆರೋಪಿಸಿ ಥಳಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. 

ಆದರೆ ಕಾರು ಚಾಲಕನ ತಪ್ಪಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಅಪಘಾತ ಹೇಗಾಯ್ತು ಎಂದು ಇನ್ನಷ್ಟೆ ತಿಳಿಯಬೇಕಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Gruesome Bike Car Accident near KC Road in Mangalore Two Youths die on Spot. The two were returning from Watching Dasara.