ಉಳ್ಳಾಲ: ಗಾಂಜಾ ವಿರುದ್ಧ ದೂರು ನೀಡಿದ್ದ ಕರಾಟೆ ಮಾಸ್ಟರಿಗೆ ಇರಿದ ಆರೋಪಿ ಬಂಧನ 

20-10-21 11:17 am       Mangaluru Correspondent   ಕರಾವಳಿ

ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ದೂರು ನೀಡಿದ್ದ ಕರಾಟೆ ಮಾಸ್ಟರ್ ಓರ್ವರನ್ನ ಹಾಡುಹಗಲೇ ಇರಿದು ಕೊಲೆಗೆ ಯತ್ನಿಸಿದ್ದ 17 ರ‌ ಅಪ್ರಾಪ್ತ ಆರೋಪಿಯನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. 

ಉಳ್ಳಾಲ, ಅ.20: ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ದೂರು ನೀಡಿದ್ದ ಕರಾಟೆ ಮಾಸ್ಟರ್ ಓರ್ವರನ್ನ ಹಾಡುಹಗಲೇ ಇರಿದು ಕೊಲೆಗೆ ಯತ್ನಿಸಿದ್ದ 17 ರ‌ ಅಪ್ರಾಪ್ತ ಆರೋಪಿಯನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. 

ಮೊಗವೀರ ಪಟ್ಣದಲ್ಲಿ 17 ರ ಹರೆಯದ ಅಪ್ರಾಪ್ತ ಆರೋಪಿಯನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ನಿನ್ನೆ ಸಂಜೆ ಉಳ್ಳಾಲದ ವೀರಭದ್ರ ದೇವಸ್ಥಾನದ ಬಳಿಯಿರುವ ಗ್ಯಾಸ್ ಅಕ್ಸೆಸರೀಸ್ ಅಂಗಡಿಗೆ ನುಗ್ಗಿ ಉಳಿಯ ನಿವಾಸಿ ಹರೀಶ್ ಗಾಣಿಗರನ್ನ ಎರಡು ಮಾರಕಾಯುಧಗಳಿಂದ ಇರಿದು ಕೊಲೆಗೆ ಯತ್ನಿಸಿದ್ದ. ತನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹರೀಶ್ ವಿರುದ್ಧ ಸೇಡು ತೀರಿಸಲು ಆರೋಪಿ ಈ ಕೃತ್ಯ ಎಸಗಿದ್ದನೆನ್ನಲಾಗಿದೆ.

ಎರಡು ಬಾರಿ ಹರೀಶ್ ಆರೋಪಿಯ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಜೀವ ಬೆದರಿಕೆ ಇರುವುದಾಗಿಯೂ ಹೇಳಿದ್ದರು. ತಿಂಗಳ ಹಿಂದೆಯೂ ಗಾಂಜಾ ಮಾಫಿಯಾದ ಉಪಟಳ ತಾಳಲಾರದೆ ಠಾಣೆಗೆ ದೂರು ನೀಡಿದ್ದರು. ಆದರೆ ಅಸಡ್ಡೆ ತೋರಿದ್ದ ಉಳ್ಳಾಲ ಪೊಲೀಸರು ನಿನ್ನೆ ಬೆಳಗ್ಗೆ ಆರೋಪಿಯನ್ನ ಠಾಣೆಗೆ ಕರೆಸಿ ವಿಚಾರಿಸಿ ಬಿಟ್ಟಿದ್ದರು. ಈ ಮೊದಲೇ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಹರೀಶ್ ಅವರ ಕೊಲೆಯತ್ನ ಪ್ರಕರಣ ನಡೆಯುತ್ತಿರಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.

ಗಾಂಜಾ ಮಾಫಿಯಾ ವಿರುದ್ಧ ದೂರು ಕೊಟ್ಟಿದ್ದ ಕರಾಟೆ ಮಾಸ್ಟರ್ ಗೆ ಚೂರಿ ಇರಿತ ; ಉಳ್ಳಾಲ ಪೊಲೀಸರ ನಿರ್ಲಕ್ಷ್ಯ 

The accused who stabbed a man and escaped from the spot, has been nabbed by police in Ullal. The incident took place on Tuesday October 19. It may be recalled, the accused, who is a minor and a resident of Uliya, stabbed Harish (42). It is learnt that the accused had a scuffle with Harish near his residence earlier.