ಬ್ರೇಕಿಂಗ್ ನ್ಯೂಸ್
06-11-21 10:48 am Mangaluru Correspondent ಕರಾವಳಿ
ಮಂಗಳೂರು, ನ.6: ಕರಾವಳಿ ಜನರ ಮನೆಮಾತಾಗಿರುವ ಮಂಗಳೂರಿನ ಹೆಸರಾಂತ ಐಸ್ ಕ್ರೀಂ ಬ್ರಾಂಡ್ ಐಡಿಯಲ್ ಐಸ್ ಕ್ರೀಂ ಸಂಸ್ಥೆಯ ಸ್ಥಾಪಕ ಎಸ್. ಪ್ರಭಾಕರ ಕಾಮತ್ ನಿಧನರಾಗಿದ್ದಾರೆ. ವಾರದ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಕಾಮತ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆತ್ಮೀಯರ ವಲಯದಲ್ಲಿ ಪಬ್ಬಾ ಮಾಮ್ ಎಂದೇ ಹೆಸರಾಗಿದ್ದ ಪ್ರಭಾಕರ ಕಾಮತ್ 1970 ರಲ್ಲಿಯೇ ಮಂಗಳೂರಿನಲ್ಲಿ ವ್ಯವಹಾರ ಆರಂಭಿಸಿದ್ದರು. ಮೊದಲಿಗೆ, ಜೀನಸು ಇನ್ನಿತರ ವಹಿವಾಟು ಹೊಂದಿದ್ದ ಕಾಮತ್ ಆಬಳಿಕ ಜನರಿಗೆ ವರ್ಷ ಪೂರ್ತಿ ಬೇಡಿಕೆ ಇರುವ ವ್ಯವಹಾರ ಆರಂಭಿಸಲು ಮುಂದಾಗಿದ್ದರು. ಐಸ್ ಕ್ರೀಂ ಪಾರ್ಲರ್ ಮಾಡಬೇಕೆಂದು ನಿರ್ಧರಿಸಿದ ಕಾಮತ್, ಅದಕ್ಕಾಗಿ ತನ್ನ ಮನೆಯಲ್ಲೇ ಪ್ರಯೋಗಗಳನ್ನು ನಡೆಸತೊಡಗಿದ್ದರು. ಮನೆ ಪರಿಸರದ ನಿವಾಸಿಗಳ ಟೀಕೆಯ ಮಧ್ಯೆಯೂ ತಮ್ಮದೇ ಚಿಂತನೆಯಲ್ಲಿ ಐಸ್ ಕ್ರೀಂ ತಯಾರಿಸಲು ಆರಂಭಿಸಿದ್ದರು.
ಮೂರು ತಿಂಗಳ ನಂತರ 1975ರ ಮೇ 1 ರಂದು ನಗರದ ಹಂಪನಕಟ್ಟೆಯ ಮಾರ್ಕೆಟ್ ರಸ್ತೆಯಲ್ಲಿ 14 ವಿಭಿನ್ನ ರೀತಿಯ ಫ್ಲೇವರ್ ಗಳ ಜೊತೆ ಐಸ್ ಕ್ರೀಂ ಪಾರ್ಲರ್ ಆರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಐಡಿಯಲ್ ಐಸ್ ಕ್ರೀಂ ಮಂಗಳೂರಿನ ಜನರ ಆಕರ್ಷಣೆ ಗಳಿಸಿತ್ತು. ಆನಂತರದ ದಿನಗಳಲ್ಲಿ ಐಸ್ ಕ್ರೀಂ ಪಾರ್ಲರ್ ಎಷ್ಟತ ಮಟ್ಟಿಗೆ ಬೇಡಿಕೆ ಪಡೆದಿತ್ತು ಎಂದರೆ, ಜನರು ಕ್ಯೂ ನಿಲ್ಲುತ್ತಿದ್ದರು.
ಆನಂತರ ಹಂಪನಕಟ್ಟೆಯಲ್ಲಿ ಎರಡು ಕಡೆ ಪಾರ್ಲರ್ ಆರಂಭಗೊಂಡರೆ, ಬೇಡಿಕೆ ಹೆಚ್ಚಿದಂತೆ ಲಾಲ್ ಬಾಗ್ ನಲ್ಲಿ ಪಬ್ಬಾಸ್ ಹೆಸರಲ್ಲಿ ಮತ್ತೊಂದು ಪಾರ್ಲರ್ ಆರಂಭಿಸಲಾಗಿತ್ತು. ಇಂದು ಮಂಗಳೂರಿನಲ್ಲಿ ಐದು ಕಡೆ ಐಡಿಯಲ್ ಐಸ್ ಕ್ರೀಂ ಪಾರ್ಲರ್ ಇದ್ದು ಅದರಲ್ಲಿ ಒಂದು ದೇಶದಲ್ಲೇ ಅತಿದೊಡ್ಡ ಐಸ್ ಕ್ರೀಂ ಪಾರ್ಲರ್ ಎನ್ನುವ ಹೆಗ್ಗಳಿಕೆ ಪಡೆದಿದೆ. ಇದಲ್ಲದೆ, 1500 ಕ್ಕೂ ಹೆಚ್ಚು ಐಡಿಯಲ್ ಐಸ್ ಕ್ರೀಂ ಡೀಲರ್ ಗಳನ್ನು ಹೊಂದಿದೆ. ಕರಾವಳಿ ಕರ್ನಾಟಕ, ಉತ್ತರ ಕೇರಳ ಮತ್ತು ಗೋವಾದಲ್ಲಿ ರಿಟೇಲ್ ನೆಟ್ವರ್ಕ್ ಅನ್ನೂ ಹೊಂದಿದ್ದು ನೂರಕ್ಕೂ ಹೆಚ್ಚು ಫ್ಲೇವರ್ ಗಳಲ್ಲಿ ತನ್ನದೇ ಆದ ವಿಶಿಷ್ಟ ರುಚಿಯೊಂದಿಗೆ ಐಸ್ ಕ್ರೀಂ ತಯಾರಿಸುತ್ತಿದ್ದಾರೆ. ಅದರಲ್ಲೂ ಐಡಿಯಲ್ ಗಡ್ ಬಡ್ ಅಂದರೆ, ಅದಕ್ಕೆ ಬೇರೆ ಸಾಟಿಯಿಲ್ಲ.
ಇಂಥ ಮೇರು ಸಂಸ್ಥೆಯನ್ನು ಹುಟ್ಟು ಹಾಕಿರುವ ಪ್ರಭಾಕರ ಕಾಮತ್, ಇನ್ನು ನೆನಪು ಮಾತ್ರ. ಅವರು ಪತ್ನಿ , ಪುತ್ರ ಐಡಿಯಲ್ ಸಂಸ್ಥೆಯ ಮಾಲಕ ಮುಕುಂದ ಕಾಮತ್ ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
Founder of Mangaluru's favourite ice cream brand S Prabhakar Kamath passed away in the wee hours of Saturday November 6. Founder of Ideal Ice Cream, Prabhakar Kamath breathed his last at around 3.30 am.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 09:57 pm
HK News Staffer
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm