ಕೋಟೆಕಾರಲ್ಲಿ ಹಿಟ್ & ರನ್ ;  ರೆಸ್ಟೋರಂಟಲ್ಲಿ ಚಿಕನ್ ಸವಿದು ರಸ್ತೆ ದಾಟುತ್ತಿದ್ದ ಯುವಕ ಸಾವು  

07-11-21 11:10 am       Mangaluru Correspondent   ಕರಾವಳಿ

ಫಾಸ್ಟ್ ಫುಡ್ ರೆಸ್ಟೋರೆಂಟಲ್ಲಿ ಸ್ನೇಹಿತನ ಜೊತೆ ಕಬಾಬ್ ಸವಿದು ರಸ್ತೆ ದಾಟುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ. 66 ರ ಕೋಟೆಜಾರು ಬೀರಿ ಎಂಬಲ್ಲಿ ನಡೆದಿದೆ. 

ಉಳ್ಳಾಲ, ನ.7: ಫಾಸ್ಟ್ ಫುಡ್ ರೆಸ್ಟೋರೆಂಟಲ್ಲಿ ಸ್ನೇಹಿತನ ಜೊತೆ ಕಬಾಬ್ ಸವಿದು ರಸ್ತೆ ದಾಟುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ. 66 ರ ಕೋಟೆಜಾರು ಬೀರಿ ಎಂಬಲ್ಲಿ ನಡೆದಿದೆ. 

ಧಾರವಾಡ ಮೂಲದ ವಲಸೆ ಕಾರ್ಮಿಕ ಆನಂದ್ ಅಲಿಯಾಸ್ ಸಾಗರ್(28)ಮೃತ ಯುವಕ. ಮೃತ ಆನಂದ್ ಸಂಕೋಳಿಗೆಯ ಎ.ಕೆ ಟ್ರೇಡರ್ಸ್ ಎಂಬ ಸಿಮೆಂಟ್ ಅಂಗಡಿಯಲ್ಲಿ ಕೂಲಿ ಕಾರ್ಮಿಕನಾಗಿದ್ದು ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೀರಿಯ ಹೆದ್ದಾರಿ ಬದಿಯಲ್ಲಿರುವ ಟಿಕ್ಕ ಪಾಯಿಂಟ್ ಎಂಬ ರೆಸ್ಟೋರಂಟಿಗೆ ತೆರಳಿ ಹಿಂತಿರುಗುತ್ತಿದ್ದ. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಆನಂದ್ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದು, ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ.

Mangalore Kotekar hit and run an accident youth hit by a speeding vehicle while crossing the road after having hi lunch at Tikka Point dies on spot. The deceased has been identified as Anand Sagar (28) resident of Dharwad.