ಕುರ್ನಾಡು ಮಸೀದಿ ಎದುರು ಯುವಕರ ಪುಂಡಾಟಿಕೆ ; ಶಾಂತಿ ಭಂಗಕ್ಕೆ ಯತ್ನ, ಮೂವರು ಕೊಣಾಜೆ ಪೊಲೀಸರ ವಶಕ್ಕೆ

15-11-21 11:26 am       Mangaluru Correspondent   ಕರಾವಳಿ

ಕುರ್ನಾಡು ಸುಬ್ಬುಗುಳಿ ಮಸೀದಿಯೆದುರು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರು ಪುಂಡಾಟಿಕೆ ಮೆರೆದು ಶಾಂತಿ ಭಂಗಕ್ಕೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ನಡೆದಿದ್ದು ಆರೋಪಿಗಳನ್ನ ಕೊಣಾಜೆ ಪೊಲೀಸರು ವಶಕ್ಕೆ ತೆಗೆದಿದ್ದಾರೆ.

ಉಳ್ಳಾಲ, ನ.15: ಕುರ್ನಾಡು ಸುಬ್ಬುಗುಳಿ ಮಸೀದಿಯೆದುರು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರು ಪುಂಡಾಟಿಕೆ ಮೆರೆದು ಶಾಂತಿ ಭಂಗಕ್ಕೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ನಡೆದಿದ್ದು ಆರೋಪಿಗಳನ್ನ ಕೊಣಾಜೆ ಪೊಲೀಸರು ವಶಕ್ಕೆ ತೆಗೆದಿದ್ದಾರೆ.
 
ಕುರ್ನಾಡು ನಿವಾಸಿಗಳಾದ ಶರಣ್ , ವಿಘ್ನೇಶ್, ಹರ್ಷಿತ್ ಎಂಬ ಮೂವರು ಯುವಕರನ್ನ ಕೊಣಾಜೆ ಪೊಲೀಸರು ವಶಕ್ಕೆ ತೆಗೆದಿದ್ದಾರೆ. ನಿನ್ನೆ ರಾತ್ರಿ ಈ ಮೂವರು ಯುವಕರು ದ್ವಿಚಕ್ರ ವಾಹನದಲ್ಲಿ ಸುಬ್ಬುಗುಳಿಯ ತಾಜುಲ್ ಉಲಮಾ ಜುಮಾ ಮಸೀದಿ ಎದುರು ಘೋಷಣೆ, ಕೇಕೆ ಹಾಕಿ ಬೋಳಿಯಾರ್ ಕಡೆ ತೆರಳಿದ್ದು ಮತ್ತೆ ಹಿಂದಿರುಗುವಾಗ ಮಸೀದಿ ಬಳಿ ಜನ ಜಮಾಯಿಸಿದ್ದರು. ಜನ ಜಮಾಯಿಸಿದನ್ನ ಕಂಡ ಯುವಕರು ಮಸೀದಿ ಹತ್ತಿರದ ಕ್ಲಬ್ ಒಂದರ ಬಳಿ ಅವಿತಿದ್ದಾರೆ. ಅಶಾಂತಿ ಸೃಷ್ಟಿಸಲು ಯತ್ನಿಸಿದ ಮೂವರು ಯುವಕರನ್ನ ತಕ್ಷಣ ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಾಂತಿ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿರುವ ಕುರ್ನಾಡು ಬೋಳಿಯಾರ್ ಜನತೆಯ ಶಾಂತಿ ನೆಮ್ಮದಿಯನ್ನು ಕದಡಲು ಕೆಲವು ಪುಂಡ ಯುವಕರು ಯತ್ನಿಸುತ್ತಿದ್ದಾರೆ. ನಿನ್ನೆ ರಾತ್ರಿ ಸುಬ್ಬುಗುಳಿ ಮಸೀದಿ ಬಳಿಯೂ ಶಾಂತಿ ಕದಡಲು ಯುವಕರು ಯತ್ನಿಸಿದ್ದು ಬಂಧಿತ ಅರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಬ್ಬುಗುಳಿ ಸ್ಥಳೀಯರು ನಿಯೋಗ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.

Three held for disrupting peace near Karnad Mosque near Konaje. It is said three youths who came on the two-wheeler tried to disturb the peace by shouting slogans after which localities have caught hold of them and have surrendered them to the police.