ನೆಲ್ಯಾಡಿ ; ಮನೆ ಬಳಿಯ ಕೆರೆಗೆ ಬಿದ್ದು ಕಾಲೇಜು ವಿದ್ಯಾರ್ಥಿನಿ ಸಾವು !

15-11-21 11:40 am       Mangaluru Correspondent   ಕರಾವಳಿ

ಮನೆ ಬಳಿಯ ಕೆರೆಯಲ್ಲಿ ತಾವರೆ ಗಿಡವನ್ನು ಬಿಡಲು ಹೋಗಿದ್ದ ಕಾಲೇಜು ವಿದ್ಯಾರ್ಥಿನಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ನಡೆದಿದೆ.

ಪುತ್ತೂರು, ನ.15: ಮನೆ ಬಳಿಯ ಕೆರೆಯಲ್ಲಿ ತಾವರೆ ಗಿಡವನ್ನು ಬಿಡಲು ಹೋಗಿದ್ದ ಕಾಲೇಜು ವಿದ್ಯಾರ್ಥಿನಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ನಡೆದಿದೆ.

 

ರಾಮಕುಂಜ ರಾಮಕುಂಜೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ (18) ಮೃತ ಯುವತಿ. ಈಕೆ ಭಾನುವಾರ ಸಂಜೆ ಮನೆ ಸಮೀಪದ ಕೆರೆಯಲ್ಲಿ ತಾವರೆ ಗಿಡ ಬಿಡುವುದಕ್ಕೆಂದು ಹೋಗಿದ್ದಳು ಎನ್ನಲಾಗಿದ್ದು ಸುಮಾರು ಹೊತ್ತಾದರೂ ಮರಳಿ ಬರದೇ ಇದ್ದುದರಿಂದ ಮನೆಯವರು ಹುಡುಕಾಡಿದಾಗ ಕೆರೆಯಲ್ಲಿ ಶವ ಪತ್ತೆಯಾಗಿದೆ.

 

ನೆಲ್ಯಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾವರೆ ಗಿಡ ಬಿಡಲು ಹೋಗಿದ್ದಳು ಎಂದು ಮನೆಮಂದಿ ತಿಳಿಸಿದ್ದು ಬೇರೇನಾದರೂ ಸಾವಿಗೆ ಕಾರಣ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Puttur 18 year old girl accidentally slips into the lake near the house and dies in Nelyadi.