ಮದುವೆ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದ ಯುವಕ ನೇಣಿಗೆ ಶರಣು

22-11-21 12:02 pm       Mangaluru Correspondent   ಕರಾವಳಿ

ಮದುವೆ ನಿಶ್ಚಿತಾರ್ಥ ಫಿಕ್ಸ್ ಆಗಿ, ಕಾರ್ಯಕ್ರಮಕ್ಕೆ ಕೆಲವೇ ದಿನಗಳಿರುವಾಗ ಮದುವೆ ಗಂಡು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ಪದವಿನಲ್ಲಿ ನಡೆದಿದೆ.

ಪುತ್ತೂರು, ನ.22: ಮದುವೆ ನಿಶ್ಚಿತಾರ್ಥ ಫಿಕ್ಸ್ ಆಗಿ, ಕಾರ್ಯಕ್ರಮಕ್ಕೆ ಕೆಲವೇ ದಿನಗಳಿರುವಾಗ ಮದುವೆ ಗಂಡು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ಪದವಿನಲ್ಲಿ ನಡೆದಿದೆ.

ಸುಳ್ಯ ಪದವು ಶಬರಿನಗರದ ಕೂಸಪ್ಪ ಪೂಜಾರಿ ಎಂಬವರ ಪುತ್ರ ರವಿರಾಜ್ (31) ಮೃತ ಯುವಕ. ಮನೆಮಂದಿ ಕಾರ್ಯಕ್ರಮಕ್ಕೆ ರೆಡಿ ಮಾಡುತ್ತಿದ್ದಾಗ, ಮನೆಯ ಬಾತ್ ರೂಮಿನಲ್ಲೇ ಯುವಕ ನೇಣಿಗೆ ಶರಣಾಗಿದ್ದಾನೆ.

ಕೆಲವು ದಿನಗಳ ಹಿಂದೆ ಮದುವೆಗೆ ಹೆಣ್ಣು ನೋಡಿ ಫಿಕ್ಸ್ ಮಾಡಲಾಗಿತ್ತು. ನಿಶ್ಚಿತಾರ್ಥ ಕಾರ್ಯಕ್ರಮ ಮಾಡಬೇಕೆಂದು ಎರಡೂ ಕಡೆಯವರು ಮಾತನಾಡಿ ನಿರ್ಧರಿಸಿದ್ದರು. ಆದರೆ, ಇದರ ನಡುವಲ್ಲೇ ಮದುವೆಯ ಗಂಡು ಸಾವಿಗೆ ಶರಣಾಗಿದ್ದಾನೆ. ಕೃತ್ಯಕ್ಕೆ ಏನು ಕಾರಣ ಅನ್ನೋದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

In a tragic incident which happened on Sunday November 21, a young man whose engagement was fixed to be held in a few days, ended his life at his residence. The youth's family was busy preparing for the housewarming ceremony of his brother when the youth went inside the bathroom and hanged himself.