ಹೆಬ್ರಿ ; ಹೊಳೆಗೆ ಈಜಾಟಕ್ಕೆ ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು ! 

26-11-21 03:32 pm       HK news Desk   ಕರಾವಳಿ

ಹೊಳೆಗೆ ಈಜಲು ತೆರಳಿದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಹೊಳೆಯಲ್ಲಿ ನಡೆದಿದೆ.‌ 

Photo credits : Headline Karnataka

ಉಡುಪಿ, ನ.26: ಹೊಳೆಗೆ ಈಜಲು ತೆರಳಿದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಹೊಳೆಯಲ್ಲಿ ನಡೆದಿದೆ.‌ 

ಸುದರ್ಶನ್ (16), ಸೋನಿತ್ (17) ಹಾಗೂ ಕಿರಣ್ (6 ) ಮೃತಪಟ್ಟ ವಿದ್ಯಾರ್ಥಿಗಳು. ಇವರು ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದರು. 

ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಗುಡ್ಡೆ ಸಮೀಪದ ಭಟ್ರಾಡಿಯ ಹೊಳೆಯಲ್ಲಿ ಈಜಲೆಂದು ಯುವಕರು ತೆರಳಿದ್ದರು. ಈ ವೇಳೆ, ಕೆರೆಯ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ.

ಮೂವರ ಮೃತದೇಹವನ್ನೂ ಸ್ಥಳೀಯರು ಸೇರಿ ಮೇಲಕ್ಕೆ ಎತ್ತಿದ್ದಾರೆ.‌ ಸ್ಥಳಕ್ಕೆ ಭೇಟಿ ನೀಡಿದ ಹೆಬ್ರಿ ಠಾಣಾ ಪೋಲಿಸರು ಭೇಟಿ ನೀಡಿದ್ದು ಕೇಸು ದಾಖಲು ಮಾಡಿದ್ದಾರೆ.‌

In tragic incident, three students studying in Hiriadka pre-university college died due to drowning in Bhatrady rivulet near Mullugudde under the limits of Shivapura gram panchayat of Hebri taluk on Friday November 26.