ಸತ್ತ ಹಸುವನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದ ಘಟನೆ ವೈರಲ್ ; ಐಆರ್ ಬಿ ಕಂಪನಿ ವಿರುದ್ಧ ಹಿಂಜಾವೇ ಆಕ್ರೋಶ 

05-12-21 09:59 pm       HK Desk news   ಕರಾವಳಿ

ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತ ಹಸುಗಳನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ ಎಳೆದೊಯ್ದ ಘಟನೆ ನಡೆದಿದ್ದು ಹಿಂದು ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

Photo credits : Headline Karnataka

ಉಡುಪಿ, ಡಿ.4: ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತ ಹಸುಗಳನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ ಎಳೆದೊಯ್ದ ಘಟನೆ ನಡೆದಿದ್ದು ಹಿಂದು ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸತ್ತುಬಿದ್ದಿದ್ದ ಎರಡು ಹಸುಗಳನ್ನು ವಾಹನಕ್ಕೆ ಹಾಕಿ ಸಾಗಿಸುವ ಬದಲು ಹಗ್ಗ ಕಟ್ಟಿ ಎಳೆದೊಯ್ದಿದ್ದಾರೆ. ಹೆದ್ದಾರಿ ಕನ್ ಸ್ಟ್ರಕ್ಷನ್ ಕೆಲಸ ಮಾಡುವ ಐಆರ್ ಬಿ ಕಂಪನಿಯವರು ಈ ರೀತಿ ಹಸುಗಳನ್ನು ಹೆದ್ದಾರಿಯಲ್ಲಿ ಎಳೆದೊಯ್ದ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಹಾನಗರ ಪಾಲಿಕೆ ಅಥವಾ ಆಯಾ ಭಾಗದ ಸ್ಥಳೀಯಾಡಳಿತಗಳು ಇದನ್ನು ಮಾಡಬೇಕಿತ್ತು. ಆದರೆ ಅವರು ಮಾಡಿಲ್ಲ ಎಂದು ಹೆದ್ದಾರಿ ಗಸ್ತು ನಿರತ ಐಆರ್ ಬಿ ಕಂಪನಿಯವರು ಹಸುಗಳನ್ನು ಎತ್ತುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. 

ಹಸುಗಳನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದ ಘಟನೆಯ ವಿಡಿಯೋ ವೈರಲ್ ಆಗಿದ್ದು ಘಟನೆ ಬಗ್ಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Udupi IRB construction company tows cow that had died of an accident, VHP Angry over cruel act. The video of this has gone viral on social media.