ಉಪ್ಪಿನಂಗಡಿ ಘಟನೆ ಹಿನ್ನೆಲೆ ಪೊಲೀಸರಿಗೆ ಕೊಲೆ ಬೆದರಿಕೆ ; ಕದ್ರಿ ಠಾಣೆಗೆ ದೂರು 

16-12-21 04:06 pm       HK Desk news   ಕರಾವಳಿ

ಉಪ್ಪಿನಂಗಡಿ ಘಟನೆ ಹಿನ್ನೆಲೆಯಲ್ಲಿ ವಾಟ್ಸಪ್ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಪೊಲೀಸರನ್ನು ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿದ್ದು ಈ ಘಟನೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕದ್ರಿ ಠಾಣೆಯಲ್ಲಿ ಪೊಲೀಸ್ ದೂರು ನೀಡಲಾಗಿದೆ. 

ಮಂಗಳೂರು, ಡಿ.16 : ಉಪ್ಪಿನಂಗಡಿ ಘಟನೆ ಹಿನ್ನೆಲೆಯಲ್ಲಿ ವಾಟ್ಸಪ್ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಪೊಲೀಸರನ್ನು ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿದ್ದು ಈ ಘಟನೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕದ್ರಿ ಠಾಣೆಯಲ್ಲಿ ಪೊಲೀಸ್ ದೂರು ನೀಡಲಾಗಿದೆ. 

ಕರೆಂಟ್ ಅಫೇರ್ಸ್ ಎನ್ನುವ ವಾಟ್ಸಪ್ ಗ್ರೂಪ್ ನಲ್ಲಿ ಪೊಲೀಸರಿಗೆ ತಲ್ವಾರ್ ಹಿಡಿಯೋಕೆ, ಮುಸ್ಲಿಮರನ್ನು ಒಡೆದು ಉರುಳಿಸೋಕೆ ಯಾರು ಪರ್ಮಿಷನ್ ಕೊಟ್ಟಿದ್ದು.. ಪೊಲೀಸರ ತಲೆಯನ್ನು ಒಂದು ದಿನ ರಸ್ತೆಯಲ್ಲೇ ಉರುಳಿಸಬೇಕಾಗುತ್ತದೆ ಎಂಬುದಾಗಿ ಬರೆಯಲಾಗಿದೆ‌. ಇದರ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು ಪೊಲೀಸರಿಗೆ ಬಹಿರಂಗ ಬೆದರಿಕೆ ಹಾಕಿದ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ವಯಂಪ್ರೇರಿತ ಕೇಸು ದಾಖಲಿಸಬೇಕೆಂದು ಆಗ್ರಹ ವ್ಯಕ್ತವಾಗಿತ್ತು. 

ಇದೇ ವಿಚಾರ ಮುಂದಿಟ್ಟು ಕದ್ರಿ ನಿವಾಸಿ ಪ್ರದೀಪ್ ಕುಮಾರ್ ಎಂಬವರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವ ರೀತಿ ವರ್ತಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಮಾಡಿದ್ದಾರೆ. ‌

PFI uppinangady lati charge, open life threat WhatsApp messages to police has become viral on social media. In connection to this a case has been filed at Kadri Police station in Mangalore.