ಪ್ರೀತಿಯಲ್ಲಿ ವೈಮನಸ್ಸು ; ಕಣಚೂರು ಆಸ್ಪತ್ರೆಯ ಯುವ ವೈದ್ಯೆ ನೇಣಿಗೆ ಶರಣು ! ಪ್ರಿಯಕರ ಪೊಲೀಸ್ ವಶಕ್ಕೆ

19-12-21 10:49 pm       HK Desk news   ಕರಾವಳಿ

ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಪೂರೈಸಿ ವೈದ್ಯಕೀಯ ಇಂಟರ್ನ್ ಶಿಪ್ ನಡೆಸುತ್ತಿದ್ದ ಯುವತಿ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. 

Photo credits : Headline Karnataka

ಮಂಗಳೂರು, ಡಿ.19: ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಪೂರೈಸಿ ವೈದ್ಯಕೀಯ ಇಂಟರ್ನ್ ಶಿಪ್ ನಡೆಸುತ್ತಿದ್ದ ಯುವತಿ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. 

ಮೂಲತಃ ಬೀದರ್ ಜಿಲ್ಲೆಯ ಆನಂದ್ ನಗರದ ನಿವಾಸಿ, ತೊಕ್ಕೊಟ್ಟು ಬಳಿಯ ಕುತ್ತಾರಿನಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದ ವೈಶಾಲ್ ಗಾಯಕ್ವಾಡ್ (25) ಮೃತ ಯುವತಿ. ಈಕೆ ತನ್ನ ಎಂಬಿಬಿಎಸ್ ಕ್ಲಾಸ್ ಮೇಟ್ ಆಗಿದ್ದ ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿ ಸುಜೀಶ್ ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ‌

ಸುಜೀಶ್ ಕೂಡಾ ಕುತ್ತಾರಿನ ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ. ಆದರೆ ಇವರ ನಡುವೆ ಯಾವುದೋ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಇಂದು ವೈಶಾಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರಿಬ್ಬರು ಕೂಡ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದ್ದರು. 

ಪ್ರಕರಣ ಸಂಬಂಧಿಸಿ ಪೊಲೀಸರು ಪ್ರಿಯಕರ ಸುಜೀಶ್ ನನ್ನು ವಶಕ್ಕೆ ಪಡೆದಿದ್ದಾರೆ. ‌ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

Mangalore 25 year old girl an Mbbs intern commits suicide after misunderstanding, lover Sujish arrested. Both were interns of Kanachur Medical college in Natekal. Some misunderstanding between each other has led to suicide. The deceased has been identified as Vaishali Gaikwad who was a resident of Bidar. Lover Sujish has been taken to custody by the Police.