ಬ್ರೇಕಿಂಗ್ ನ್ಯೂಸ್
22-12-21 10:17 pm HK Desk news ಕರಾವಳಿ
ಉಡುಪಿ, ಡಿ.22 : ಉಡುಪಿ ಮಲ್ಲಿಗೆ ಅಂದರೆ ಕರಾವಳಿಯಲ್ಲಿ ಶಂಕರಪುರ ಮಲ್ಲಿಗೆ ಭಾರೀ ಫೇಮಸ್. ಆದರೆ ಈ ಬಾರಿ ಉಡುಪಿ ಮಲ್ಲಿಗೆಯ ದರ ಕೈಸುಡುವಷ್ಟರ ಮಟ್ಟಿಗೆ ಹೋಗಿದೆ. ಉಡುಪಿ ಮಲ್ಲಿಗೆಯ ದರವನ್ನು ಡಿಸೆಂಬರ್ 23ರಿಂದ ಅನ್ವಯವಾಗುವಂತೆ ಮಲ್ಲಿಗೆ ಹೂವಿನ ಅಟ್ಟಿಗೆ (3200 ಬಿಡಿ ಹೂವು) ಬರೋಬ್ಬರಿ 2,100 ರೂ.ಗಳಿಗೆ ಏರಿಸಿದೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರ ಕುಟುಂಬಗಳು ಮಲ್ಲಿಗೆ ಬೆಳೆಯನ್ನು ನಂಬಿ ಜೀವನ ನಡೆಸುತ್ತಿದೆ. ಪ್ರಸಕ್ತ ಹವಾಮಾನ ವೈಪರೀತ್ಯ ಸ್ಥಿತಿಯಲ್ಲಿ ಮಲ್ಲಿಗೆ ಬೆಳೆಗಾರ ಕುಟುಂಬಗಳು, ಗಿಡಗಳು ಹಾನಿಗೊಳಗಾಗಿ ಹೂವಿನ ಇಳುವರಿ ಕುಂಠಿತವಾಗಿದ್ದು ತೀರಾ ಸಂಕಷ್ಟ ಸ್ಥಿತಿಯಲ್ಲಿವೆ. ಇದರ ಜತೆಯಲ್ಲಿ ನಿರ್ವಹಣಾ ವೆಚ್ಚ, ಸಾಗಾಟದ ವೆಚ್ಚಗಳೂ ಏರಿರುವ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿನ ದರವನ್ನು ನಿಶ್ಚಿತವಾಗಿ ಏರಿಸಲಾಗಿದೆ ಎಂದು ಮಲ್ಲಿಗೆ ವರ್ತಕರ ಸಂಘದ ದರ ನಿಗದಿ ಕೇಂದ್ರವು ಅಭಿಪ್ರಾಯ ಪಟ್ಟಿದೆ.
ಎಲ್ಲೆಡೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿ ಕೃಷಿಕರನ್ನು ಶೋಷಣೆ ಮಾಡುತ್ತಾರೆ. ತಮ್ಮ ಹಿತಾಸಕ್ತಿ ಸಾಧನೆಗಾಗಿ ಕೃಷಿಕರನ್ನು ಬಳಸಿ ಕೊಳ್ಳುತ್ತಾರೆ. ಇದರ ನಡುವೆ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಕೃಷಿಕರ ಹಿತಾಸಕ್ತಿಯನ್ನೇ ಮಾನದಂಡವಾಗಿಟ್ಟುಕೊಂಡು, ಮಲ್ಲಿಗೆ ಬೆಳೆಗಾರರಿಂದ ಹಿಡಿದು, ಹೂವನ್ನು ಕೊಯ್ದು, ಸಂಗ್ರಹ ಮಾಡಿ ಮಾರುಕಟ್ಟೆಗೆ ಒಯ್ಯುವ ತನಕದ ಎಲ್ಲರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ದರ ಏರಿಸಿದೆ.
ಯಾವುದೇ ಹೂವಿನ ಮಾರುಕಟ್ಟೆಗಳಿಗೆ ಹೋಲಿಸಿದರೆ ದೇಶಕ್ಕೇ ಮಾದರಿಯಾಗಿ, ಕಳೆದ 80 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಯಾವುದೇ ಒಳ ಒಪ್ಪಂದಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ, ಸರ್ವಸಮ್ಮತವಾಗಿ ಕೆಲಸ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.
Udupi Jasmine flower rate will go rocket high from Dec 23rd. The fixed price will be 2,100 Rs.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm