ವಿದ್ಯುತ್ ತಂತಿ ಸ್ಪರ್ಶಿಸಿ ನವಿಲು ಸಾವು ; ಅರಣ್ಯ ಇಲಾಖೆಯಿಂದ ಗೌರವ ಅಂತ್ಯ ಸಂಸ್ಕಾರ 

23-12-21 02:04 pm       Mangalore Correspondent   ಕರಾವಳಿ

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಳ್ಳ ಎಂಬಲ್ಲಿ ವಿದ್ಯುತ್ ಕಂಬದ ಹೈಟೆನ್ಷನ್ ತಂತಿ ಸ್ಪರ್ಶಿಸಿ ರಾಷ್ಟ್ರ ಪಕ್ಷಿ ನವಿಲು ಸಾವನ್ನಪ್ಪಿದ್ದು ಅರಣ್ಯ ಇಲಾಖಾಧಿಕಾರಿಗಳು ಗೌರವ ಅಂತ್ಯ ಸಂಸ್ಕಾರ ನಡೆಸಿದ್ದಾರೆ. 

ಉಳ್ಳಾಲ, ಡಿ.23 : ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಳ್ಳ ಎಂಬಲ್ಲಿ ವಿದ್ಯುತ್ ಕಂಬದ ಹೈಟೆನ್ಷನ್ ತಂತಿ ಸ್ಪರ್ಶಿಸಿ ರಾಷ್ಟ್ರ ಪಕ್ಷಿ ನವಿಲು ಸಾವನ್ನಪ್ಪಿದ್ದು ಅರಣ್ಯ ಇಲಾಖಾಧಿಕಾರಿಗಳು ಗೌರವ ಅಂತ್ಯ ಸಂಸ್ಕಾರ ನಡೆಸಿದ್ದಾರೆ. 

ಪಿಲಾರು ಪಳ್ಳ ಪ್ರದೇಶದಲ್ಲಿ ಇಂದು ಬೆಳಗ್ಗೆ ಹೆಣ್ಣು ನವಿಲೊಂದು ಸುತ್ತಾಡುತ್ತಿದ್ದ ವೇಳೆ ಬೀದಿ ನಾಯಿಗಳು ಅದನ್ನ ಅಟ್ಟಾಡಿಸಿವೆ. ಈ ವೇಳೆ ನವಿಲು ಮೇಲಕ್ಕೆ ಹಾರುತ್ತಿದ್ದ ವೇಳೆ ವಿದ್ಯುತ್ ಕಂಬದ ತಂತಿ ಸ್ಪರ್ಶಿಸಿ ಕೆಳಗೆ ಕುಸಿದು ಬಿದ್ದಿದೆ.

ತಕ್ಷಣ ಸ್ಥಳೀಯ ಸಮಾಜ ಸೇವಕ ಉದಯ ಗಟ್ಟಿ ಅವರು ನವಿಲಿಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದ್ದು ಗಂಭೀರ ಗಾಯಗೊಂಡ ನವಿಲು ಸಾವನ್ನಪ್ಪಿದೆ. ಉದಯ ಗಟ್ಟಿ ಅವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ ಅವರು ಮೃತ ನವಿಲಿನ ಕಳೇಬರವನ್ನ ಕೊಂಡೊಯ್ದು ಇಲಾಖೆ ವತಿಯಿಂದ ಗೌರವ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

In what came as a rude shock for environmentalists here, a peacock was found electrocuted at a residential area in Pillar. Social worker Uday Gatti informed the forest officials.