ಕೋಟ ; ಪ್ರೇಮ ವೈಫಲ್ಯದಿಂದ ಬೇಸತ್ತ ಆಟೋ ಚಾಲಕ ನೇಣಿಗೆ ಶರಣು

30-12-21 01:08 pm       HK Desk news   ಕರಾವಳಿ

ಪ್ರೇಮ ವೈಪಲ್ಯದಿಂದ ಬೇಸತ್ತ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಗೆ ಹಲ್ಲೆಗೈದು ನೇಣಿಗೆ ಶರಣಾಗಿರುವ ಘಟನೆ ಕುಂದಾಪುರ ತಾಲೂಕಿನ ಕೋಟ ಗ್ರಾಮದ ಶಿರಿಯಾರ ಬಳಿಯ ಹೆಸ್ಕತ್ತೂರಿನಲ್ಲಿ ನಡೆದಿದೆ.

ಕುಂದಾಪುರ, ಡಿ.29 : ಪ್ರೇಮ ವೈಪಲ್ಯದಿಂದ ಬೇಸತ್ತ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಗೆ ಹಲ್ಲೆಗೈದು ನೇಣಿಗೆ ಶರಣಾಗಿರುವ ಘಟನೆ ಕುಂದಾಪುರ ತಾಲೂಕಿನ ಕೋಟ ಗ್ರಾಮದ ಶಿರಿಯಾರ ಬಳಿಯ ಹೆಸ್ಕತ್ತೂರಿನಲ್ಲಿ ನಡೆದಿದೆ.

ಆಟೋ ಚಾಲಕನಾಗಿದ್ದ ರಾಘವೇಂದ್ರ ಕುಲಾಲ್ (35) ಮೃತ ಯುವಕ. ಅದೇ ಪರಿಸರದ ಯುವತಿಯನ್ನು ರಾಘವೇಂದ್ರ ಪ್ರೀತಿಸುತ್ತಿದ್ದು, ಕೆಲವು ಸಮಯಗಳಿಂದ ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ತೀವ್ರ ನೊಂದಿದ್ದ ಯುವಕ ಬುಧವಾರ ಸಂಜೆ ದಾರಿ ಬದಿಯಲ್ಲಿ ಅಡ್ಡಗಟ್ಟಿ ಆಕೆಯ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾನೆ.

ಆನಂತರ ಮನೆಗೆ ತೆರಳಿದ್ದ ರಾಘವೇಂದ್ರ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಯಗೊಂಡಿದ್ದ ಯುವತಿ ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A man, who was distraught due to failure of his love with a woman killed himself at Heskuthur near Shiriyara of Kota in the taluk on Wednesday December 29. Raghavendra Kulal (35), auto driver by profession, is the deceased.