ಬ್ರೇಕಿಂಗ್ ನ್ಯೂಸ್
07-01-22 07:27 pm Mangalore Correspondent ಕರಾವಳಿ
ಬಂಟ್ವಾಳ, ಜ.7 : ಕೊರಗಜ್ಜ ದೈವದ ಮಾದರಿಯಲ್ಲಿ ವೇಷ ಧರಿಸಿ ಮುಸ್ಲಿಮ್ ಮದುವೆಯಲ್ಲಿ ಅಣಕವಾಡಿದ ಘಟನೆಯನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ಸಾಲೆತ್ತೂರಿನ ವಧುವಿನ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಮನೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದು, ಧಿಕ್ಕಾರ ಕೂಗಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ವಿಟ್ಲ ಪೊಲೀಸರು ಬಜರಂಗದಳದ ಯುವಕರನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರಿನ ಅಜೀಜ್ ಎಂಬವರ ಮಗಳ ಮದುವೆ ಜನವರಿ 6ರಂದು ನಡೆದಿದ್ದು, ರಾತ್ರಿ ವೇಳೆ ಸಂಪ್ರದಾಯದಂತೆ ವರನ ಕಡೆಯವರು ವಧುವಿನ ಮನೆಗೆ ಬಂದಿದ್ದರು. ಈ ವೇಳೆ, ಮದುಮಗ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಉಮರುಳ್ಳ ಬಾಷಿತ್ ನನ್ನು ಸ್ನೇಹಿತರು ವಿಶಿಷ್ಟವಾಗಿ ಸಿಂಗರಿಸಿ ತಂದಿದ್ದಾರೆ. ತುಳುನಾಡಿನಲ್ಲಿ ಆರಾಧಿಸುವ ಕೊರಗಜ್ಜನ ರೀತಿ ಬಿಂಬಿಸಿ ಯುವಕನಿಗೆ ವೇಷ ಹಾಕಿದ್ದು, ಇತರು ಯುವಕರು ಕುಣಿದು ಕುಪ್ಪಳಿಸುತ್ತಾ ಬಂದಿದ್ದಾರೆ.
ಇದಲ್ಲದೆ, ತಲೆಗೆ ಹಾಳೆಯ ಮುಟ್ಟಾಳೆ ರೀತಿ ಇಟ್ಟು ಊಟ ಮಾಡಿದ್ದು, ಕೊರಗಜ್ಜನಿಗೆ ಅವಮಾನಿಸುವ ರೀತಿ ಯುವಕರು ವರ್ತಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದುಗಳಿಂದ ಭಾರೀ ಆಕ್ರೋಶ ಕೇಳಿಬಂದಿತ್ತು. ಘಟನೆ ಬಗ್ಗೆ ಸ್ಥಳೀಯ ಕಡಂಬು ನಿವಾಸಿ ಚೇತನ್ ಎಂಬವರು ವಿಟ್ಲ ಠಾಣೆಗೆ ದೂರು ನೀಡಿದ್ದು, ಕೊರಗಜ್ಜನಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ವಧುವಿನ ಕಡೆಯವರು ಮತ್ತು ವರನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದು ಸಂಘಟನೆಗಳಿಂದ ಆಕ್ರೋಶ ಕೇಳಿಬಂದಿದ್ದು, ವಿಶ್ವ ಹಿಂದು ಪರಿಷತ್ ಘಟನೆಯನ್ನು ಖಂಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದೆ. ಇದೇ ವೇಳೆ, ಸ್ಥಳೀಯ ಬಜರಂಗದಳ ಕಾರ್ಯಕರ್ತರು ಸಾಲೆತ್ತೂರಿನ ಅಜೀಜ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಮತಾಂಧರಿಗೆ ಧಿಕ್ಕಾರ, ಕೊರಗಜ್ಜನಿಗೆ ಅವಮಾನ ಮಾಡಿದವರನ್ನು ಬಂಧಿಸಿ ಎನ್ನುತ್ತಾ ಘೋಷಣೆ ಕೂಗಿದ್ದಾರೆ. ಈ ವೇಳೆ, ವಿಟ್ಲ ಪೊಲೀಸರು ಸ್ಥಳಕ್ಕೆ ಬಂದಿದ್ದು, ಎರಡು ಜೀಪ್ ಗಳಲ್ಲಿ ಯುವಕರನ್ನು ಬಂಧಿಸಿ ಠಾಣೆಗೆ ಹೊತ್ತೊಯ್ದಿದ್ದಾರೆ. ಘಟನೆ ಹಿನ್ನೆಲೆ ಸಾಲೆತ್ತೂರಿನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಮುಸ್ಲಿಂ ಮದುವೆ ಸಂಭ್ರಮ ; ಕೊರಗಜ್ಜನ ರೀತಿ ವೇಷ ತೊಟ್ಟು ಕುಣಿದು ಕುಪ್ಪಳಿಸಿದ ಯುವಕರು, ಆಕ್ರೋಶ
Mangalore Insult to Koragajja during Muslim wedding, VHP activist try to enter brides house after which police took them into custody. A video of youths dancing by wearing Korajagga costume had gone viral on social media.
26-04-24 11:17 pm
Bangalore Correspondent
ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ...
26-04-24 09:10 pm
Madikeri, election, heart attack; ಮಡಿಕೇರಿ ; ಮ...
26-04-24 06:14 pm
Chamarajanagar, villagers, Booth: ಮತದಾನ ಬಹಿಷ್...
26-04-24 04:53 pm
ಚಿತ್ರದುರ್ಗ ; ಲೋ ಬಿಪಿಯಿಂದ ಅಸ್ವಸ್ಥ , ಮತಗಟ್ಟೆಯಲ್...
26-04-24 03:04 pm
26-04-24 02:58 pm
HK News Desk
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
26-04-24 10:45 pm
Mangalore Correspondent
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
ಸುಳ್ಯ ; 18 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸ್ತ್ರಸ...
26-04-24 08:42 pm
Mangalore live voting percentage: ದಕ್ಷಿಣ ಕನ್ನ...
26-04-24 05:56 pm
26-04-24 03:59 pm
Mangalore Correspondent
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm