ಬ್ರೇಕಿಂಗ್ ನ್ಯೂಸ್
10-01-22 10:24 pm Mangalore Correspondent ಕರಾವಳಿ
Photo credits : Headline Karnataka
ಉಳ್ಳಾಲ, ಜ.10 : ಸೋಮೇಶ್ವರ ಗ್ರಾಮದ ಪಿಲಾರಿನಲ್ಲೀಗ ಸರ್ಪಗಳ ಹಾವಳಿ ಶುರುವಾಗಿದ್ದು ಮನೆಗೆ ಬಂದ ಸರ್ಪವನ್ನ ಹಿಡಿಯಲು ಹೋದ ಮಾಜಿ ಯೋಧನಿಗೆ ಹಾವು ಕಡಿದ ಘಟನೆ ನಡೆದಿದೆ.
ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಮಾಜಿ ಯೋಧ ಸದಾನಂದ ಗಟ್ಟಿ ಯಾನೆ ಬಾಬು ಗಟ್ಟಿ ಎಂಬವರು ಹಾವಿಂದ ಕಡಿತಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮೇಶ್ವರ ಗ್ರಾಮದ ಪಿಲಾರು ಮಹಾಲಕ್ಮೀ ಮಂದಿರ ಬಳಿಯ ದಿವಂಗತ ಪೊಲೀಸ್ ತ್ಯಾಂಪಣ್ಣ ಶೆಟ್ಟಿ ಅವರ ಜಮೀನಿನ ಪೊದೆಗಳನ್ನ ಕಡಿದು ಜೆಸಿಬಿ ಯಂತ್ರದ ಮೂಲಕ ಸಮತಟ್ಟುಗೊಳಿಸಲಾಗಿದೆ. ಅನೇಕ ವರುಷಗಳಿಂದ ಇದ್ದ ಪೊದೆಗಳನ್ನ ಏಕಾಏಕಿ ಕಡಿದು ಸಮತಟ್ಟುಗೊಳಿಸಿದ ಪರಿಣಾಮ ಅಲ್ಲಿದ್ದ ಬೃಹದಾಕಾರದ ಸರ್ಪಗಳು ದಿಕ್ಕಾಪಾಲಾಗಿ ನೆರೆಹೊರೆಯ ಮನೆಗಳ ಆವರಣಕ್ಕೆ ಹೊಕ್ಕುತ್ತಿವೆ.


ಇಂದು ಮಧ್ಯಾಹ್ನ ಸದಾನಂದ ಗಟ್ಟಿ ಅವರ ಮನೆ ಆವರಣಕ್ಕೆ ಬೃಹತ್ ಸರ್ಪ ಹೊಕ್ಕಿದ್ದು ಗಟ್ಟಿ ಅವರು ಅದನ್ನ ಹಿಡಿದು ಗೋಣಿ ಚೀಲದಲ್ಲಿ ಹಾಕಿದ್ದಾರೆ. ಈ ನಡುವೆ ಸರ್ಪವು ಗಟ್ಟಿ ಅವರ ಬೆರಳಿಗೆ ಕಡಿದಿದ್ದು ಕೂಡಲೇ ಅವರನ್ನ ಮಂಗಳೂರಿನ ಪಾಧರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಭಾರತೀಯ ಸೇನೆಯಲ್ಲಿ ಪಳಗಿದ್ದ ಸದಾನಂದ ಗಟ್ಟಿ ಅವರು ಈ ಮೊದಲೂ ಅನೇಕ ವಿಷಕಾರಿ ಸರ್ಪಗಳನ್ನ ಹಿಡಿದು ಕಾಡಿಗೆ ಬಿಟ್ಟಿದ್ದರು. ಆದರೆ ಇಂದು ಸರ್ಪವನ್ನು ಹಿಡಿಯಲು ಹೋದ ಗಟ್ಟಿ ಅವರಿಗೆ ಸರ್ಪ ಕಡಿದಿದೆ.


ಹಳೆಯ ಪೊದೆಗಳನ್ನ ಕಡಿದು ಸಮತಟ್ಟುಗೊಳಿಸಿದ ಕಾರಣ ಈಗಾಗಲೇ ಪರಿಸರದಲ್ಲಿ ನಾಲ್ಕೈದು ಸರ್ಪಗಳು ದಿಕ್ಕಿಲ್ಲದೆ ಹರಿದಾಡುತ್ತಿದ್ದು ಇನ್ನಷ್ಟು ಸರ್ಪಗಳು ಬರುವ ಸಾಧ್ಯತೆಗಳಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ಇಂದು ಮಧ್ಯಾಹ್ನ ಮಾಜಿ ಯೋಧ ಸದಾನಂದ ಗಟ್ಟಿ ಅವರಿಗೆ ಹಾವು ಕಡಿದ ನಂತರ ಅದೇ ಪರಿಸರದ ಮನೆಗಳ ಆವರಣಗಳಲ್ಲಿ ನಾಲ್ಕು ಸರ್ಪಗಳು ಕಾಣ ಸಿಕ್ಕಿವೆ.
Mangalore poisonous Snake bites man while catching in Pillar. Someshwar Resident X Military Man Sadanada Shetty was the man who was bitten by snake. He has been admitted to Fr Mullers Hospital in the city.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm