ಬ್ರೇಕಿಂಗ್ ನ್ಯೂಸ್
 
            
                        10-11-20 07:12 pm Headline Karnataka News Network ಸ್ಪೆಷಲ್ ಕೆಫೆ
 
            ನವದೆಹಲಿ, ನವೆಂಬರ್ 10: ಸಾಮಾನ್ಯವಾಗಿ ಒಂದು ಕಾರನ್ನು ಎಷ್ಟು ವೇಗದಲ್ಲಿ ಓಡಿಸಬಹುದು. ರಸ್ತೆ ಚೆನ್ನಾಗಿದ್ದರೆ ಹೆಚ್ಚೆಂದರೆ ಗಂಟೆಗೆ 150-200 ಕಿಮೀ ವೇಗದಲ್ಲಿ ಓಡಿಸುವವರು ಇದ್ದಾರೆ. ಆದರೆ, ಇಟಲಿಯಲ್ಲಿ 500 ಕಿಮೀ ದೂರವನ್ನು ಕಾರಿನಲ್ಲಿ ಕೇವಲ ಎರಡೇ ಗಂಟೆಯಲ್ಲಿ ತಲುಪುವ ಮೂಲಕ ಅಲ್ಲಿನ ಪೊಲೀಸರು ಜಗತ್ತಿನ ಗಮನ ಸೆಳೆದಿದ್ದಾರೆ.
ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡುವುದಕ್ಕಾಗಿ ಇಟಲಿಯ ಪೊಲೀಸರು ಲ್ಯಾಂಬೋರ್ಗಿನಿ ಹುರಾಕಾನ್ ಕಾರಿನಲ್ಲಿ ಈ ಅತ್ಯಂತ ವೇಗದಲ್ಲಿ ಧಾವಿಸಿದ್ದು ಈಗ ಸುದ್ದಿಯಾಗಿದೆ. 500 ಕಿಮೀ ದೂರದಲ್ಲಿ ದಾನಿ ನೀಡಿದ್ದ ಕಿಡ್ನಿಯನ್ನು ಇನ್ನೊಂದು ಆಸ್ಪತ್ರೆಗೆ ತಲುಪಿಸಲು ಪೊಲೀಸರೇ ಈ ಕಾರನ್ನು ಓಡಿಸಿದ್ದಾರೆ. ಇಂಥ ಸಂದಿಗ್ಧ ಸಮಯದಲ್ಲಿ ಇಟಲಿಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಪೊಲೀಸರೇ ಓಡಿಸುವ ಮೂಲಕ ಸಾಹಸ ಮೆರೆಯುತ್ತಾರೆ. ಆದಷ್ಟು ಬೇಗ ಕಿಡ್ನಿ ತಲುಪಿಸುವುದಕ್ಕಾಗಿ ಗಂಟೆಗೆ 243 ಕಿಮೀ ವೇಗದಲ್ಲಿ ಕಾರು ಚಲಾಯಿಸಿದ್ದು, 500 ಕಿಮೀ ದೂರದ ಗಮ್ಯವನ್ನು ಕೇವಲ ಎರಡೇ ಗಂಟೆಯಲ್ಲಿ ಮುಟ್ಟಿದ್ದಾರೆ.
ಕಿಡ್ನಿ ಕೊಂಡೊಯ್ದು ಒಬ್ಬನ ಪ್ರಾಣ ಉಳಿಸುವುದಕ್ಕಾಗಿ ಕಾರು ಚಲಾಯಿಸಿದ ವಿಡಿಯೋ ಇಟಲಿಯಲ್ಲಿ ವೈರಲ್ ಆಗಿದ್ದು, ಪೊಲೀಸರ ಸಾಹಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ಸಾಧಾರಣವಾಗಿ 500 ಕಿಮೀ ದೂರ ತಲುಪಲು ಇಟಲಿಯ ನುಣ್ಣಗಿನ ರಸ್ತೆಯಲ್ಲಿ ಆರು ಗಂಟೆ ಬೇಕಾಗುವುದಂತೆ. ಆದರೆ, ಲ್ಯಾಂಬೋರ್ಗಿನಿಯ ಶರವೇಗದ ಓಟ ಎರಡೇ ಗಂಟೆಯಲ್ಲಿ ಗುರಿ ತಲುಪಿಸಿತ್ತು. ಪೊಲೀಸ್ ಅಧಿಕಾರಿಗಳೇ ತಮ್ಮ ಸಾಹಸದ ಬಗ್ಗೆ ವಿಡಿಯೋ ಮಾಡಿ ಟ್ವಿಟರಲ್ಲಿ ಹಂಚಿಕೊಂಡಿದ್ದರು.
ಇಟಲಿ ಭಾಷೆಯಲ್ಲಿ ಪೊಲೀಸರು ಹಾಕಿದ್ದ ಟ್ವೀಟ್ ಹೀಗಿತ್ತು. ‘ಥ್ಯಾಂಕ್ಸ್ ಟು ಲ್ಯಾಂಬೋರ್ಗಿನಿ ಹುರಾಕಾನ್.. ಒಂದು ಜೀವ ಉಳಿಸುವುದಕ್ಕಾಗಿ ದಾನಿಯೊಬ್ಬರು ನೀಡಿದ್ದ ಕಿಡ್ನಿಯನ್ನು ಸಕಾಲಕ್ಕೆ ಮುಟ್ಟಿಸಿದ್ದೇವೆ. ಒಂದು ಜೀವ ಉಳಿಸಲು ಸೂಪರ್ ಪವರ್ ಆಗಬೇಕಾಗಿಯೇ ಇಲ್ಲ. ದಕ್ಷತೆ, ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳಬಹುದು’ ಎಂದಿದ್ದರು.
This Lamborghini helped deliver a kidney for emergency transplant pic.twitter.com/szXD1ieSwq
— Reuters (@Reuters) November 7, 2020
 
            
            
            Italy's state police drove a specially-equipped Lamborghini Huracan from Padua to Rome to transport a kidney to a patient in the capital's Gemelli hospital.
 
    
            
             30-10-25 11:00 pm
                        
            
                  
                Bangalore Correspondent    
            
                    
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             30-10-25 11:16 pm
                        
            
                  
                Mangalore Correspondent    
            
                    
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm