ಬಾಯಾರು ; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ 

03-08-20 05:18 pm       Headline Karnataka News Network   ಕ್ರೈಂ

ಒಂದೇ ಕುಟುಂಬದ ನಾಲ್ವರನ್ನು ಸಂಬಂಧಿಯೇ ಕಡಿದು ಕೊಲೆಗೈದ ಘಟನೆ ಗಡಿಜಿಲ್ಲೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ.‌

ಮಂಜೇಶ್ವರ, ಆಗಸ್ಟ್ 3: ಒಂದೇ ಕುಟುಂಬದ ನಾಲ್ವರನ್ನು ಸಂಬಂಧಿಯೇ ಕಡಿದು ಕೊಲೆಗೈದ ಘಟನೆ ಗಡಿಜಿಲ್ಲೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ.‌

ಮಂಜೇಶ್ವರ ತಾಲೂಕಿನ ಬಾಯಾರು ಸಮೀಪದ ಸುದೆಂಬಳ ಎಂಬಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ನಡೆದಿದೆ. 

ಬಾಬು, ವಿಠಲ, ಸದಾಶಿವ ಮತ್ತು ದೇವಕಿ ಎಂಬವರು ಬರ್ಬರ ಹತ್ಯೆಯಾದವರಾಗಿದ್ದು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಇವರ ಹತ್ತಿರದ ಸಂಬಂಧಿಯಾಗಿರುವ ಉದಯ ಎಂಬಾತ ಕೃತ್ಯ ಎಸಗಿದ್ದು ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ. ಸ್ಥಳೀಯರು ಆರೋಪಿ ಉದಯನನ್ನು ಕಟ್ಟಿಹಾಕಿ ಥಳಿಸಿದ್ದು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮಂಜೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.