ಬ್ರೇಕಿಂಗ್ ನ್ಯೂಸ್
30-09-22 09:55 pm HK News Desk ಕ್ರೈಂ
ಬೆಳಗಾವಿ, ಸೆ.30 : ತನ್ನ ಪ್ರಿಯಕರನ ಜೊತೆ ಮದುವೆಯಾಗಲು ಅಡ್ಡಿಯಾಗಿದ್ದಕ್ಕೆ ಮಗಳೇ ತನ್ನ ತಂದೆಯನ್ನು ತಾಯಿ ಮತ್ತು ಪ್ರಿಯತಮನ ಜೊತೆ ಸೇರಿ ಕೊಲೆಗೈದ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸುಧೀರ್ ಕಾಂಬಳೆ ಹತ್ಯೆ ಪ್ರಕರಣವನ್ನು ಭೇದಿಸಿದ ಪೊಲೀಸರು, ಆತನ ಪತ್ನಿ, ಮಗಳು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಸೆ.17 ರಂದು ಕೊಲೆ ಘಟನೆ ನಡೆದಿತ್ತು. ಪತ್ನಿ ರೋಹಿಣಿ ಕಾಂಬಳೆ, ಪುತ್ರಿ ಸ್ನೇಹಾ ಕಾಂಬಳೆ, ಸ್ನೇಹಾಳ ಪ್ರಿಯಕರ ಪುಣೆ ಮೂಲದ ಅಕ್ಷಯ ವಿಠಕರ್ (25) ಬಂಧಿತರು. ಕೊಲೆಗೂ ಮುನ್ನ ಆರೋಪಿಗಳು ರವಿಚಂದ್ರನ್ ಅಭಿನಯದ ದೃಶ್ಯಂ ಸಿನಿಮಾ ನೋಡಿದ್ದರು. ದೃಶ್ಯಂ ಸಿನಿಮಾ ಮಾದರಿಯಲ್ಲಿ ಸಾಕ್ಷ್ಯಗಳ ನಾಶಕ್ಕಾಗಿ ಮತ್ತು ಕೊಲೆ ಕೃತ್ಯ ನಡೆಸಿ ಪಾರಾಗಲು ಸಂಚು ಹೂಡಿದ್ದರು. ಆದರೆ ಪೊಲೀಸರ ಕರಾರುವಾಕ್ ತನಿಖೆಯ ಮುಂದೆ ತಾಯಿ, ಮಗಳು ಹೂಡಿದ್ದ ಸ್ಕೆಚ್ ಬಯಲಾಗಿದೆ.

ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿ
ಸುಧೀರ್ ಕಾಂಬಳೆ ಪತ್ನಿ ರೋಹಿಣಿಗೆ ನಿತ್ಯ ಮಾನಸಿಕ ಕಿರುಕುಳ ನೀಡ್ತಿದ್ದ ಎನ್ನುವ ಆರೋಪಗಳಿದ್ದವು. ಇದರಿಂದ ಮಾನಸಿಕವಾಗಿ ಖಿನ್ನಳಾಗಿದ್ದ ರೋಹಿಣಿ ಪುತ್ರಿ ಸ್ನೇಹಾ ಮುಂದೆ ಅಳಲು ತೋಡಿಕೊಂಡಿದ್ದಳು. ಈ ನಡುವೆ, ಪುಣೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡ್ತಿದ್ದ ಸ್ನೇಹಾಗೆ ಹೋಟೆಲ್ ರಿಸೆಪ್ಷನಿಸ್ಟ್ ಆಗಿದ್ದ ಅಕ್ಷಯ್ ಪರಿಚಯ ಆಗಿತ್ತು. ಅಕ್ಷಯ -ಸ್ನೇಹಾ ನಡುವೆ ಪರಿಚಯ ಬಳಿಕ ಪ್ರೇಮಕ್ಕೆ ತಿರುಗಿತ್ತು. ಆದರೆ ಇವರ ಪ್ರೀತಿಗೆ ತಂದೆ ನಿರಾಕರಿಸಿದ್ದು ಯಾವುದೇ ಕಾರಣಕ್ಕೂ ಆತನನ್ನು ಮದುವೆಯಾಗಲು ಬಿಡಲ್ಲ ಎಂದಿದ್ದರು.

ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆ ತನ್ನ ಬಾಳಿಗೂ ಕೊಳ್ಳಿ ಇಡುತ್ತಾನೆಂದು ಮಗಳು ಸ್ನೇಹಾ ಪುಣೆಯಲ್ಲಿದ್ದುಕೊಂಡೇ ಪ್ರಿಯಕರನ ಜೊತೆ ಸೇರಿ ತಂದೆಯ ಕೊಲೆಗೆ ಸ್ಕೆಚ್ ಹಾಕಿದ್ದಳು. ಅದರಂತೆ, ಸೆಪ್ಟೆಂಬರ್ 15 ರಂದು ಬೆಳಗಾವಿಗೆ ಬಂದಿದ್ದ ಅಕ್ಷಯ ವಿಠಕರ, ಸ್ನೇಹಾ ತಾಯಿ ರೋಹಿಣಿಯನ್ನು ರಹಸ್ಯವಾಗಿ ಭೇಟಿಯಾಗಿದ್ದ. ಬೆಳಗಾವಿ ಹೊರವಲಯದಲ್ಲಿ ಇವರು ಜೊತೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದರು. ಸೆಪ್ಟೆಂಬರ್ 16ರಂದು ತನ್ನ ಎರಡು ಮಕ್ಕಳ ಜೊತೆ ರೋಹಿಣಿ ಮನೆಯ ನೆಲಮಹಡಿಯ ಕೊಠಡಿಯಲ್ಲಿ ಮಲಗಿದ್ದಳು. ಮನೆಯ ಮೇಲ್ಮಹಡಿಯ ರೂಮ್ನಲ್ಲಿ ಗಂಡ ಸುಧೀರ್ ಮಲಗಿದ್ದ. ಸೆಪ್ಟೆಂಬರ್ 17ರ ಬೆಳಗಿನ ಜಾವ ಹಿಂಬದಿ ಬಾಗಿಲಿನಿಂದ ಮನೆಗೆ ನುಗ್ಗಿದ್ದ ಅಕ್ಷಯ್, ರೋಹಿಣಿ ಜೊತೆಗೂಡಿ ಸುಧೀರ್ ಕಾಂಬಳೆಯನ್ನು ಹತ್ಯೆ ಮಾಡಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸುಧೀರ್ ಹೊಟ್ಟೆ, ಕತ್ತು, ಕೈ, ಮುಖಕ್ಕೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಲಾಗಿತ್ತು.
ಘಟನೆಯ ಬಳಿಕ ಏನೂ ಆಗಿಲ್ಲ ಎಂಬಂತೆ ಅಕ್ಷಯ್ ಪುಣೆಗೆ ವಾಪಸ್ ಆಗಿದ್ದ. ಆದರೆ, ರೋಹಿಣಿ ಫೋನ್ ಕರೆಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯಗಳು ತೆರೆದುಕೊಂಡಿದ್ದವು.
Belagavi Daughter along with her mother and lover kills own father who was into real estate for opposing love marriage. The plot was done watching Dhrushyam movie.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm