ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಏಳು ಮಂದಿ ಸೆರೆ 

09-10-20 11:03 pm       Udupi Reporter   ಕ್ರೈಂ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಏಳು ಮಂದಿಯನ್ನು ಕುಂದಾಪುರದ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಉಡುಪಿ, ಅಕ್ಟೋಬರ್ 9: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಏಳು ಮಂದಿಯನ್ನು ಕುಂದಾಪುರದ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸುಬ್ರಹ್ಮಣ್ಯ ಕೊಠಾರಿ(36), ಸಂತೋಷ ಶೆಟ್ಟಿ (26), ಕಿರಣ್ ಪೂಜಾರಿ(19), ವಿವೇಕ ಶೆಟ್ಟಿ(29), ಜಯ ಶೆಟ್ಟಿ(36), ಉಳ್ಳೂರಿನ ಅಕ್ಷಯ ಪೂಜಾರಿ(23), ಶಿಕಾರಿಪುರದ ಅಕ್ಸರ್(25) ಎಂದು ಗುರುತಿಸಲಾಗಿದೆ. 

ಆರೋಪಿಗಳು ಸಿದ್ದಾಪುರ ಮಾರ್ಕೆಟ್ ಬಳಿ ಗುಂಪು ಕೂಡಿಕೊಂಡು ಐಪಿಎಲ್ ತಂಡಗಳಾದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜು ಆಡುತ್ತಿದ್ದರು.  ಬಂಧಿತರಿಂದ ಒಂದು ಮೊಬೈಲು, 3,300 ರೂ. ನಗದು ಹಣವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Udupi city Police have arrested seven bookies in connection with the cricket betting on IPL Cricket world cup 2020.