ಕುಲಶೇಖರ ; ಕಾಂಗ್ರೆಸ್ ಮುಖಂಡನ ಮೇಲೆ ತಲವಾರು ದಾಳಿ, ಕೊಲೆಯತ್ನ ! 

12-10-20 11:55 pm       Mangaluru Correspondent   ಕ್ರೈಂ

ಮಂಗಳೂರು ತಾ.ಪಂ. ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಯೂಸುಫ್ ಮೇಲೆ ತಲವಾರು ದಾಳಿಯಾಗಿದೆ. 

ಮಂಗಳೂರು, ಅಕ್ಟೋಬರ್ 12: ಮಂಗಳೂರು ತಾ.ಪಂ. ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಯೂಸುಫ್ ಮೇಲೆ ತಲವಾರು ದಾಳಿಯಾಗಿದೆ. 

ಮಂಗಳೂರಿನ ಕುಲಶೇಖರ ಬಳಿ ಘಟನೆ ನಡೆದಿದ್ದು ಕಾರಿನಲ್ಲಿ ಬಂದ ಆಗಂತುಕರು ತಲವಾರಿನಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ. 

ಪೊಳಲಿ ಸಮೀಪದ ಉಳಾಯಿಬೆಟ್ಟು ನಿವಾಸಿ ಆಗಿರುವ ಯೂಸುಫ್, ಮನೆಗೆ ತೆರಳುತ್ತಿದ್ದಾಗ ಬೈಕ್ ನಲ್ಲಿ ಡಿಕ್ಕಿ ಹೊಡೆಸಿ ಕಾರನ್ನು ನಿಲ್ಲಿಸಿದ್ದಾರೆ. ಕಾರು ನಿಂತ ಕೂಡಲೇ ತಲವಾರು ಬೀಸಿದ್ದಾರೆ. ಗಾಯಗೊಂಡ ಯೂಸುಫ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Miscreants sword attack Congress member and former taluk panchayath member Yusuf in Kulshekar, Mangalore here on 12 October, Monday, 2020. Yusuf has been admitted to the local hospital and is out of danger. Kankandy police have registered the case.