ಬ್ರೇಕಿಂಗ್ ನ್ಯೂಸ್
18-12-22 06:47 pm Bangalore Correspondent ಕ್ರೈಂ
ಬೆಂಗಳೂರು, ಡಿ 18: ಸ್ವಿಗ್ಗಿ ಮತ್ತು ಝೋಮ್ಯಾಟೊ ಕಂಪನಿಯ ಫುಡ್ ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಅಭಿಜಿತ್(28) ಬಂಧಿತ. ಮತ್ತೂಬ್ಬ ಆರೋಪಿ ಪರಾರಿಯಾಗಿದ್ದಾನೆ.
ಬಂಧಿ ತನಿಂದ ಫುಡ್ ಡೆಲಿವರಿ ಬ್ಯಾಗ್ನಲ್ಲಿದ್ದ 4 ಲಕ್ಷ ರೂ. ಮೌಲ್ಯದ 3 ಕೆ.ಜಿ. ಗಾಂಜಾ, 14 ಗ್ರಾಂ ತೂಕದ 12 ಎಲ್ ಎಸ್ಡಿ ಸ್ಟ್ರೀಪ್ಸ್ ಮತ್ತು ಮೊಬೈಲ್, ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಿಬ್ಬರೂ ಬಿಹಾರ ಮೂಲದವ ರಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಿಹಾರದಿಂದಲೇ ಬೆಂಗಳೂರಿಗೆ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಗ್ರಾಹಕರ ಜತೆ ಸಂಪರ್ಕ ಹೊಂದಿದ್ದು, ಆನ್ಲೈನ್ನಲ್ಲೇ ವ್ಯವಹಾರ ನಡೆಸುತ್ತಿದ್ದ. ಗ್ರಾಹಕನ ಲೋಕೇಷನ್ ಮತ್ತು ಆತ ಧರಿಸಿ ರುವ ಬಟ್ಟೆಯ ಬಣ್ಣದ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಅದನ್ನು ಅಭಿಜಿತ್ಗೆ ರವಾನಿಸಿದ್ದ. ಈತ ಸ್ವಿಗ್ಗಿ ಮತ್ತು ಝೋಮ್ಯಾಟೋ ಡೆಲಿವರಿ ಬಾಯ್ ಸೋಗಿನಲ್ಲಿ ಫುಡ್ ಡೆಲಿವರಿ ಮಾದರಿಯಲ್ಲಿ ಪ್ಯಾಕೆಟ್ಗಳನ್ನು ಮಾಡಿಕೊಂಡು ಗ್ರಾಹಕನಿಗೆ ಮಾರಾಟ ಮಾಡುತ್ತಿದ್ದ. ಅಭಿಜಿತ್ಗೆ ಬಿಹಾರ ಮೂಲದ ಆರೋಪಿ, ಪ್ರತಿ ಗ್ರಾಹಕನಿಗೆ ಪೂರೈಕೆ ಮಾಡಿದ ಬಳಿಕ ಇಂತಿಷ್ಟು ಕಮಿಷನ್ ನೀಡುತ್ತಿದ್ದ.
ಗ್ರಾಹಕ ಯಾರೆಂದು ಗೊತ್ತಿಲ್ಲ:
ಅಭಿಜಿತ್ ಈ ಹಿಂದೆ ಸ್ವಿಗ್ಗಿ ಮತ್ತು ಝೋಮ್ಯಾಟೋ ಕಂಪನಿಯಲ್ಲಿ ಪುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟಿದ್ದ. ಆದರೆ, ಕಂಪನಿಗೆ ಸಮ ವಸ್ತ್ರ ಮತ್ತು ಫುಡ್ ಡೆಲಿವರಿ ಬ್ಯಾಗ್ ವಾಪಸ್ ನೀಡಿರಲಿಲ್ಲ. ಅದನ್ನು ತನ್ನ ಬಳಿಯೇ ಇಟ್ಟು ಕೊಂಡು, ಬಿಹಾರದ ತನ್ನ ಸ್ನೇಹಿತನ ಸೂಚನೆ ಮೇರೆಗೆ ಮಾದಕ ವಸ್ತು ಪೂರೈಸುತ್ತಿದ್ದ. ವಿಶೇಷ ವೆಂದರೆ, ಅಭಿಜಿತ್ಗೆ ತಾನೂ ಯಾರಿಗೆ ಡ್ರಗ್ಸ್ ಪೂರೈಸುತ್ತಿದ್ದೇನೆ ಎಂದು ಗೊತ್ತಿರಲಿಲ್ಲ. ಬಿಹಾರ ದಿಂದಲೇ ಆರೋಪಿ ಸೂಚಿಸಿದ ಲೋಕೇಷನ್ ಮತ್ತು ಗ್ರಾಹಕನ ಬಟ್ಟೆ ಬಣ್ಣ ತಿಳಿಸಿ, ಡ್ರಗ್ಸ್ ಅನ್ನು ಪ್ಯಾಕೆಟ್ಗಳನ್ನು ಕಳುಹಿಸುತ್ತಿದ್ದರಿಂದ ಗ್ರಾಹಕನ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾನೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಈ ಸಂಬಂಧ ವೈಟ್ಫೀಲ್ಡ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
A Bengaluru-based man was recently arrested for posing as Zomato, Swiggy delivery agent, and delivering drugs. The accused, whose identity has not yet been revealed, was arrested by the Central Crime Branch (CCB) of Bengaluru police earlier on Friday. After the arrest, 3 kg of marijuana, 12 LSD strips, one phone, one two-wheeler, and other items, were seized by the police.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 07:08 pm
Mangalore Correspondent
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm