ಬ್ರೇಕಿಂಗ್ ನ್ಯೂಸ್
11-03-23 04:31 pm Mangalore Correspondent ಕ್ರೈಂ
ಮಂಗಳೂರು, ಮಾ.11 : ಪೊಲೀಸ್ ಅಂತ ಹೇಳಿ ಸಿನಿಮಾ ನಟಿಯೋರ್ವಳ ತಾಯಿಯನ್ನು ಬ್ಲಾಕ್ಮೇಲ್ ಮಾಡಿ ಹಣ ಪೀಕಿದ ವ್ಯಕ್ತಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕಾವೂರು ಈಶ್ವರ ನಗರ ನಿವಾಸಿ ಶಿವರಾಜ್ ದೇವಾಡಿಗ ಬಂಧಿತ ಆರೋಪಿ.
ತನ್ನನ್ನು ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸ್ ಎಂದು ಪರಿಚಯಿಸಿ ಮಹಿಳೆಯ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಬ್ಲಾಕ್ಮೇಲ್ ಮಾಡಿದ್ದಾನೆ. ನಿಮ್ಮಲ್ಲಿ ನಗದು ಹಣ ಇದೆ, ಬಂಗಾರ ಇದೆಯೆಂದು ದೂರು ಬಂದಿದೆ. ಕಮಿಷನರ್ ಸಾಹೇಬ್ರ ಬಳಿಗೆ ನಿಮ್ಮ ಕೇಸ್ ಹೋಗಿದೆ, ಹಣ ಕೊಟ್ಟರೆ ಪ್ರಕರಣ ಮುಚ್ಚಿ ಹಾಕ್ತೀನಿ ಎಂದು ಹೇಳಿದ್ದ. ತನ್ನನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸ್ ಶಿವರಾಜ್ ದೇವಾಡಿಗ ಅಂತಾ ಪರಿಚಯ ಹೇಳಿಕೊಂಡಿದ್ದ. ಸಾಹೇಬ್ರು ಈಗ ರೈಡ್ ಮಾಡ್ತಾರೆ, ಗೂಗಲ್ ಪೇ ಮಾಡಿ ಹಣ ಕೊಟ್ಟರೆ ರೈಡ್ ಮಾಡಲ್ಲ ಅಂತ ಹೇಳಿದ್ದ.
ಆನಂತರ ತನ್ನ ನಂಬರಿನಿಂದ ಕರೆ ಮಾಡಿ ಅದೇ ನಂಬರ್ ಗೆ ಆನ್ಲೈನ್ ಮೂಲಕ ಹಣ ಹಾಕಿಸಿಕೊಂಡಿದ್ದ. ಮೊದಲಿಗೆ 20 ಸಾವಿರ, ಆನಂತರ 18 ಸಾವಿರ ಹೀಗೆ ಒಟ್ಟು 38 ಸಾವಿರ ಹಣ ನೀಡಿದ್ದರು. ಅಲ್ಲದೆ, ಸಾಹೇಬ್ರ ಜೊತೆ ಸಹಕರಿಸಿದ್ರೆ ತೊಂದರೆ ಆಗಲ್ಲ ಅಂತ ಹೇಳಿದ್ದ.
ಪೊಲೀಸರ ರೀತಿ ಸಮವಸ್ತ್ರ, ಖಾಕಿ ಶೂ ಹಾಕಿ ಬಂದು ಬೆದರಿಸಿದ್ದರಿಂದ ಹೆದರಿದ್ದ ಮಹಿಳೆ, ಹಣ ಕೊಟ್ಟಿದ್ದರು. ಅಲ್ಲದೆ, ಹೊಸ ಕಮಿಷನರ್ ಬಂದಿದ್ದಾರೆ, ಅವರ ಟೇಬಲ್ ಮೇಲೆ ಫೈಲ್ ಇದೆ. ಕೇಸ್ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದಿದ್ದ. ಈ ಬಗ್ಗೆ ಮಹಿಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಪೊಲೀಸರ ಸೋಗಿನಲ್ಲಿ ಹಣ ಪೀಕಿಸಿದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಮಹಿಳೆಯನ್ನು ಸಂಪರ್ಕಿಸಿದ ಪೊಲೀಸರು ಆರೋಪಿ ಪತ್ತೆ ಮಾಡಿದ್ದಾರೆ. ಬಳಿಕ ಮಹಿಳೆಯಿಂದ ದೂರು ಪಡೆದು ಆರೋಪಿ ವಿರುದ್ಧ ಕೇಸು ದಾಖಲಿಸಿದ್ದಾರೆ.
Mangalore Man arrested for blackmailing women who is a mother of Kannada actress running a beauty parlour in city. The accused was posing as pandeshwar police constable and blackmailing her of raid.
23-03-23 11:31 am
Bangalore Correspondent
ಉರಿಗೌಡ- ನಂಜೇಗೌಡರ ಬಗ್ಗೆ ದಾಖಲೆ ಇದೆ, ಕಾಲ್ಪನಿಕ ಪಾ...
21-03-23 09:55 pm
ದೂರು ನೀಡಲು ಬಂದಿದ್ದ ಯುವತಿ ಜೊತೆಗೆ ಕೊಡಿಗೇಹಳ್ಳಿ ಠ...
21-03-23 09:36 pm
ಒಂದು ಕೋಟಿ ಲಂಚ ಆರೋಪ ; ಪ್ರಕರಣ ರದ್ದು ಕೋರಿ ಹೈಕೋರ್...
21-03-23 07:25 pm
ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎ...
21-03-23 02:18 pm
23-03-23 10:30 pm
HK News Desk
ಆರ್ಥಿಕ ಕುಸಿತಕ್ಕೆ ನಲುಗುತ್ತಿದೆ ಟೆಕ್ ಕಂಪನಿ 'ಆಕ್...
23-03-23 09:31 pm
ಪಾಕ್ ಗಡಿಭಾಗದಲ್ಲಿ ಶಾರದಾ ಮಂದಿರ ಮರು ಸ್ಥಾಪನೆ ; ಸ್...
22-03-23 10:00 pm
ದೆಹಲಿಯಲ್ಲಿ ಮೋದಿ ಹಠಾವೋ, ದೇಶ್ ಬಚಾವೋ ಪೋಸ್ಟರ್ ; ಪ...
22-03-23 02:53 pm
ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್...
22-03-23 12:28 pm
23-03-23 10:57 pm
Mangalore Correspondent
ಮಾ.25ರಂದು ಮೋರ್ಲ- ಬೋಳದಲ್ಲಿ ಲವ-ಕುಶ ಜೋಡುಕರೆ ಕಂಬಳ...
23-03-23 10:00 pm
ತಲೆ ಗಟ್ಟಿ ಇದೆಯೆಂದು ಗಡಾಯಿಕಲ್ಲಿಗೆ ತಾಗಿಸಿದರೆ ತಲೆ...
23-03-23 05:08 pm
ಕರಾವಳಿ, ಚಿಕ್ಕಮಗಳೂರು, ಹಾಸನದಲ್ಲಿ ಮಾ.23ರಿಂದಲೇ ರಂ...
22-03-23 10:31 pm
ಪೌರ ಕಾರ್ಮಿಕರ ಮುಷ್ಕರ ಹತ್ತನೇ ದಿನಕ್ಕೆ ; ಕಸದ ರಾಶಿ...
22-03-23 09:02 pm
23-03-23 04:18 pm
Mangalore Correspondent
ಪೊಲೀಸರಿಂದಲೇ ಕಿಡ್ನಾಪ್, 40 ಲಕ್ಷಕ್ಕೆ ಬೇಡಿಕೆ ; ಮಾ...
23-03-23 02:16 pm
ಮಿನಿ ಕಂಟೇನರ್ ನಲ್ಲಿ ಸಾಗಿಸುತ್ತಿದ್ದ 9 ಕೇಜಿ ಅಕ್ರಮ...
23-03-23 01:38 pm
ಐಶ್ವರ್ಯ ರಜನಿಕಾಂತ್ ಮನೆಯಲ್ಲಿ ಕಳ್ಳತನ ; 18 ವರ್ಷದಿ...
23-03-23 12:15 pm
ಬಸ್ ಚಾಲಕನಿಂದ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ...
22-03-23 06:46 pm