ಬ್ರೇಕಿಂಗ್ ನ್ಯೂಸ್
24-10-20 12:31 pm Mangalore Correspondent ಕ್ರೈಂ
ಮಂಗಳೂರು, ಅಕ್ಟೋಬರ್ 24: ಅತ್ತ ಮಹಾನಗರ ಪಾಲಿಕೆ ಹೊರ ರಾಜ್ಯದ, ಹೊರ ಜಿಲ್ಲೆಗಳ ಬೀಫ್ ಮಾಂಸ ತಂದು ಮಾರುವಂತಿಲ್ಲ ಎಂದು ಸೂಚನೆ ಕೊಟ್ಟಿರುವಾಗಲೇ ಕುದ್ರೋಳಿ ಕಸಾಯಿಖಾನೆಯಲ್ಲಿ ಹೊರಗಿನಿಂದ ತರುತ್ತಿದ್ದ ದನದ ಮಾಂಸ ಪತ್ತೆಯಾಗಿದೆ.
ಟಾಟಾ ಏಸ್ ವಾಹನದಲ್ಲಿ ಎರಡು ಕ್ವಿಂಟಾಲ್ ನಷ್ಟು ದನದ ಮಾಂಸವನ್ನು ತರಲಾಗಿದೆ. ವಾಹನದಲ್ಲಿ ಮಾಂಸ ತರುತ್ತಿದ್ದ ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಟಾಟಾ ಏಸ್ ವಾಹನ ತಪ್ಪಿಸಿಕೊಂಡು ಬಂದು ಕುದ್ರೋಳಿ ಕಸಾಯಿಖಾನೆಗೆ ನುಗ್ಗಿದೆ.
ಈ ಬಗ್ಗೆ ಬಜರಂಗದಳ ಕಾರ್ಯಕರ್ತರು, ಬಂದರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಸಾಯಿಖಾನೆಯಲ್ಲಿ ಪರಿಶೀಲಿಸಿದಾಗ, ಟಾಟಾ ಏಸ್ ವಾಹನದಲ್ಲಿ ಮಾಂಸ ಪತ್ತೆಯಾಗಿದ್ದು ಮಾಂಸ ಸಹಿತ ವಾಹನವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದಾರೆ. ಅದರಲ್ಲಿದ್ದ ಚಾಲಕ ಪರಾರಿಯಾಗಿದ್ದಾನೆ.
ಮಹಾನಗರ ಪಾಲಿಕೆಯಿಂದ ಅಕ್ರಮ ಗೋಹತ್ಯೆ ತಡೆಯುವ ಸಲುವಾಗಿ ಕೆಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 20 ಬೀಫ್ ಸ್ಟಾಲ್ ಗಳಿದ್ದು ಎಲ್ಲದಕ್ಕೂ ಮಂಗಳೂರಿನ ಅಧಿಕೃತ ಕುದ್ರೋಳಿ ಕಸಾಯಿಖಾನೆಯಿಂದಲೇ ಮಾಂಸ ಪಡೆಯಬೇಕು. ಹೊರ ಜಿಲ್ಲೆಗಳಿಂದ ಮಾಂಸ ತಂದು ಮಾಡುವಂತಿಲ್ಲ. ಜೊತೆಗೆ ಕಸಾಯಿಖಾನೆಯಿಂದ ಮಾಂಸ ಪಡೆದಿದ್ದಕ್ಕೆ ಸೂಕ್ತ ರಶೀದಿ, ದಾಖಲಾತಿ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಪಾಲಿಕೆಯ ಈ ಕ್ರಮದಿಂದಾಗಿ ಒಂದು ಹಂತಕ್ಕೆ ಅಕ್ರಮ ಗೋಸಾಗಾಟ ಮತ್ತು ಗೋಮಾಂಸ ಸಾಗಾಟಕ್ಕೆ ಬ್ರೇಕ್ ಬೀಳಬಹುದೆಂಬ ನಿರೀಕ್ಷೆಯಿದೆ.
A tempo van that was illegally transporting about 2 quintals of beef meat was held by Bunder police at Kudroli after Bajarang Dal Activities informed the cops here on Saturday 24 October 2020.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm