ಬ್ರೇಕಿಂಗ್ ನ್ಯೂಸ್
22-03-23 06:46 pm Mangalore Correspondent ಕ್ರೈಂ
ಮಂಗಳೂರು, ಮಾ.22: 13 ವರ್ಷದ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್ ಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಬಸ್ ಚಾಲಕ ವೃತ್ತಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷಗಳ ಶಿಕ್ಷೆ ನೀಡಿದೆ.
ಕಾವೂರು ಠಾಣೆ ವ್ಯಾಪ್ತಿಯ ಮರಕಡ ನಿವಾಸಿ ದಯಾನಂದ ದಾನನ್ನವರ್(30) ಶಿಕ್ಷೆಗೊಳಗಾದ ವ್ಯಕ್ತಿ. ಅಪ್ರಾಪ್ತ ಬಾಲಕಿ ಈತನಿಗೆ ಇನ್ ಸ್ಟಾ ಗ್ರಾಮ್ ಮೂಲಕ ಪರಿಚಯ ಆಗಿದ್ದಳು. ಆನಂತರ, ಬಸ್ ಚಾಲಕನಾಗಿದ್ದ ವ್ಯಕ್ತಿ ಆಕೆಯನ್ನು ತನ್ನೊಂದಿಗೆ ಬರುವಂತೆ ಪುಸಲಾಯಿಸುತ್ತಿದ್ದ. ಆದರೆ ಬರಲು ಕೇಳದೇ ಇದ್ದಾಗ 2022ರ ಜನವರಿ 28ರಂದು ಮರಕಡದಿಂದ ಆಟೋ ರಿಕ್ಷಾದಲ್ಲಿ ಕರೆದೊಯ್ದಿದ್ದು, ನೇರವಾಗಿ ಹಂಪನಕಟ್ಟೆ ಬಳಿಯ ಲಾಡ್ಜ್ ಒಂದಕ್ಕೆ ಕರೆದೊಯ್ದಿದ್ದ. ಅಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಆನಂತರ ಆಕೆಯನ್ನು ಮನೆಗೆ ಕಳುಹಿಸಿಕೊಟ್ಟಿದ್ದ.
ಅಲ್ಲದೆ, ಮನೆಯಲ್ಲಿ ಯಾರಿಗೂ ಈ ಬಗ್ಗೆ ಹೇಳಬೇಡ. ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ದಯಾನಂದ ಬೆದರಿಕೆ ಒಡ್ಡಿದ್ದ. ಆದರೆ ಬಾಲಕಿ ತನ್ನ ಮೇಲಾದ ಕಿರುಕುಳದ ಬಗ್ಗೆ ಮನೆಯಲ್ಲಿ ಹೇಳಿದ್ದು ಹೆತ್ತವರು ಕಾವೂರು ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಧಾಕೃಷ್ಣ ಆರೋಪಿಗೆ 20 ವರ್ಷಗಳ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, 50 ಸಾವಿರ ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ ನಾಲ್ಕು ತಿಂಗಳ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ಇದಲ್ಲದೆ, ಸಂತ್ರಸ್ತ ಯುವತಿಗೆ ಮೂರು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ಮಾಡಿದೆ. ಅದರಲ್ಲಿ ಒಂದು ಲಕ್ಷ ಕೂಡಲೇ ಆಕೆಯ ಶಿಕ್ಷಣಕ್ಕಾಗಿ ಬಿಡುಗಡೆ ಮಾಡಬೇಕು. ಉಳಿದ ಎರಡು ಲಕ್ಷ ರೂ.ವನ್ನು ಆಕೆಯ ಹೆಸರಲ್ಲಿ ರಾಷ್ಟ್ರೀಯ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಬೇಕು ಎಂದು ಆದೇಶ ಮಾಡಿದ್ದಾರೆ. ಇನ್ಸ್ ಪೆಕ್ಟರ್ ಎಸ್ ಎಚ್ ಭಜಂತ್ರಿ ತನಿಖೆ ನಡೆಸಿ ದೋಷಾರೋಪ ಸಲ್ಲಿಸಿದ್ದರು. ಸರಕಾರದ ಪರವಾಗಿ ವೆಂಕಟರಮಣ ಸ್ವಾಮಿ ವಾದಿಸಿದ್ದರು.
Additional sessions and FTSC-2 (POCSO) court of the city sentenced a man, accused of sexual harassment of minor to 20 years in prison.
08-06-23 12:43 pm
Bangalore Correspondent
ಸಕಲೇಶಪುರ ; ಕ್ಯಾಂಪ್ನಲ್ಲಿ ಮಧ್ಯಾಹ್ನದ ಊಟ ಸೇವಿಸಿ...
07-06-23 06:54 pm
ವಯಸ್ಸು, ಅನಾರೋಗ್ಯ, ವಿರೋಧಿ ಅಲೆ ; 25ರಲ್ಲಿ 13 ಬಿಜ...
07-06-23 03:17 pm
13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸ...
06-06-23 10:38 pm
ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಸುಳಿವ...
06-06-23 10:28 pm
07-06-23 10:58 pm
HK News Desk
ಟಿಪ್ಪು, ಔರಂಗಜೇಬ್ ವೈಭವೀಕರಿಸಿ ಪೋಸ್ಟ್ ; ಕೊಲ್ಲಾಪು...
07-06-23 10:32 pm
ಯುಪಿಯಲ್ಲಿ ಅತೀಕ್ ಅಹ್ಮದ್ ಬೆನ್ನಲ್ಲೇ ಮತ್ತೊಬ್ಬ ಗ...
07-06-23 08:51 pm
ಮೋದಿ ಮ್ಯಾಜಿಕ್, ಹಿಂದುತ್ವದಿಂದ ಚುನಾವಣೆ ಗೆಲ್ಲಕ್ಕಾ...
06-06-23 09:37 pm
ತ್ರಿವಳಿ ರೈಲು ದುರಂತ ; 40 ಜನರ ಸಾವಿಗೆ ವಿದ್ಯುತ್ ಶ...
06-06-23 08:18 pm
08-06-23 10:48 am
Mangalore Correspondent
ಮಂಗಳೂರು-ಅಹಮದಾಬಾದ್ ನಡುವೆ ವಿಶೇಷ ರೈಲು ; ಜೂನ್ 9ರ...
07-06-23 11:09 pm
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಭೀತಿ ; ಕರಾವಳಿಯಲ್ಲ...
07-06-23 09:34 pm
ಹೃದಯ ತಜ್ಞರು ಮನೆ ಬಾಗಿಲಿಗೆ ; ದೇಶದಲ್ಲೇ ಮೊದಲ ಬಾರಿ...
07-06-23 09:13 pm
ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹುಲಿ ಸಾವು ; ಎರಡು ಹು...
07-06-23 02:04 pm
06-06-23 10:43 am
Mangalore Correspondent
Illegal Cow Transport: ಕುತ್ತಾರಿನಲ್ಲಿ ಉಸಿರುಗಟ್...
05-06-23 01:02 pm
ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ; ಪ್ರಶ್ನಿಸಿದಕ್ಕೆ...
04-06-23 02:14 pm
ತರೀಕೆರೆ ಕಾಂಗ್ರೆಸ್ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲ...
04-06-23 12:47 pm
ಹಿಂದು ಹೆಸರಲ್ಲಿ ಪ್ರೇಮಿಸಿ ಯುವತಿಯರ ಬ್ಲಾಕ್ಮೇಲ್ ;...
03-06-23 08:51 pm