ಬ್ರೇಕಿಂಗ್ ನ್ಯೂಸ್
10-04-23 10:44 am Mangalore Correspondent ಕ್ರೈಂ
ಮಂಗಳೂರು, ಎ.10: ಹಣ ಡಬಲ್ ಆಗುತ್ತೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 8.78 ಲಕ್ಷ ರೂಪಾಯಿ ಪೀಕಿಸಿದ ಘಟನೆ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾರ್ಚ್ 13ರಂದು ವಾಟ್ಸಪ್ ನಂಬರ್ ನಲ್ಲಿ ಪಾರ್ ಟೈಮ್ ಜಾಬ್ ಇದೆಯೆಂದು ಹೇಳಿ ಮೆಸೇಜ್ ಬಂದಿತ್ತು. ಮೊದಲಿಗೆ ನೂರು ರೂಪಾಯಿ ರಿಜಿಸ್ಟ್ರೇಶನ್ ಶುಲ್ಕವೆಂದು ಫೋನ್ ಪೇ ಮೂಲಕ ಹಣ ಕೇಳಿದ್ದರು. ಅದನ್ನು ದೂರುದಾರ ವ್ಯಕ್ತಿ ಆಗಲೇ ಹಾಕಿದ್ದು, ಆನಂತರ ಟೆಲಿಗ್ರಾಮ್ ಲಿಂಕ್ ಕಳುಹಿಸಿ ಅದರಲ್ಲಿ ಸಂವಹನ ನಡೆಸುವುದಾಗಿ ಅಪರಿಚಿತರು ತಿಳಿಸಿದ್ದರು.
ಟೆಲಿಗ್ರಾಮ್ ಲಿಂಕ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಡಬಲ್ ಆಗುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸ್ಕೀಮಿಗೆ ವ್ಯಕ್ತಿಗಳನ್ನು ಸೇರಿಸಿದಲ್ಲಿ ಕಮಿಷನ್ ನೀಡುವುದಾಗಿಯೂ ಹೇಳಿದ್ದ. ಎಷ್ಟೇ ಮೊತ್ತ ಹಾಕಿದರೂ, ಅದು ಡಬಲ್ ಆಗುತ್ತೆ ಎಂದು ನಂಬಿಸಿದ್ದರಿಂದ ಅಪರಿಚಿತನ ಮಾತು ನಂಬಿ ಈ ವ್ಯಕ್ತಿಯೇ ಹಣ ಹೂಡಿಕೆ ಮಾಡಿದ್ದಾರೆ. 15-20 ಸಾವಿರ ಎಂದು ಮೊದಲು ಹೂಡಿಕೆ ಮಾಡಿದ್ದು, ಡಬಲ್ ಆಗಿರುವಂತೆ ಅವರದೇ ಖಾತೆಯಲ್ಲಿ ತೋರಿಸಲಾಗುತ್ತಿತ್ತು. ಮತ್ತಷ್ಟು ಹಣ ಹಾಕಿ, ಎಂಟು ಟಾಸ್ಕ್ ಪೂರೈಸಿದರೆ ಪೂರ್ತಿ ಹಣ ಡಬಲ್ ಆಗುವುದೆಂದು ಹೇಳಿದ್ದರಿಂದ ವ್ಯಕ್ತಿ ಸರದಿಯಂತೆ 4,25,068 ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ.
ಇದೇ ವೇಳೆ, ಬಜಾಜ್ ಫೈನಾನ್ಸ್ ಕಂಪನಿಯಿಂದ ಲೋನ್ ಕೊಡಿಸುವುದಾಗಿಯೂ ಆ ಕಡೆಯಿಂದ ನಂಬಿಸಿದ್ದ. ಆದರೆ ಪ್ರೊಸೆಸ್ಸಿಂಗ್ ಚಾರ್ಜ್, ಟಿಡಿಎಸ್, ಜಿಎಸ್ಟಿ ಎಂದು ಹೇಳಿದ್ದು, ಅದಕ್ಕಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ದೂರುದಾರ ವ್ಯಕ್ತಿ 4,53,638 ರೂ. ಹಣವನ್ನು ಹಾಕಿದ್ದಾರೆ. ಒಟ್ಟು 8,78,706 ರೂಪಾಯಿ ಹಣವನ್ನು ಅಪರಿಚಿತ ವ್ಯಕ್ತಿಗೆ ಹಾಕಿದ್ದು, ಇತ್ತ ಡಬಲ್ ಆದ ಹಣವೂ ಸಿಕ್ಕಿಲ್ಲ. ಲೋನ್ ಹಣವೂ ಸಿಕ್ಕಿಲ್ಲ. ಇದರಿಂದ ಇಂಗು ತಿಂದ ಮಂಗನಂತಾದ ವ್ಯಕ್ತಿ ತಾನು ಮೋಸ ಹೋದ ಅರಿವಾಗುತ್ತಲೇ ಉರ್ವಾದಲ್ಲಿ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾರ್ಚ್ 13ರಿಂದ ಎಪ್ರಿಲ್ 3ರ ನಡುವೆ ಮೊತ್ತವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
A person who has been cheated of Rs 8.78 lac in an online money doubling ponzi scheme has filed a complaint in this regard with the police. On March 13, an unidentified person from the number +447468726354 sent the complainant a WhatsApp message regarding a part-time job opening.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm