ಬ್ರೇಕಿಂಗ್ ನ್ಯೂಸ್
05-11-23 10:02 pm Mangalore Correspondent ಕ್ರೈಂ
ಮಂಗಳೂರು, ನ.5: ಮಟನ್ ಅಂಗಡಿಯ ಮುಂದೆ ಇಟ್ಟಿದ್ದ ಕಬ್ಬಿಣದ ರಾಡ್ ಒಂದನ್ನು ಕಳವು ಮಾಡಿದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರಾಮಸೇನೆ ಸಂಘಟನೆಯ ಕಾರ್ಯಕರ್ತನೊಬ್ಬ ಬೀಯರ್ ಬಾಟಲಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಕುಲಶೇಖರದಲ್ಲಿ ನಡೆದಿದೆ.
ಕುಲಶೇಖರದ ಮಟನ್ ಕಾರ್ನರ್ ಎಂಬ ಅಂಗಡಿಯಲ್ಲಿ ಕೆಲಸಕ್ಕಿರುವ ಮೆಹರೂಫ್ ಎಂಬಾತ ಹಲ್ಲೆಗೀಡಾದ ವ್ಯಕ್ತಿ. ನ.4ರಂದು ಮಧ್ಯಾಹ್ನ ವೇಳೆಗೆ ಕಬ್ಬಿಣದ ರಾಡ್ ಕಳವಾದ ಬಗ್ಗೆ ಮೆಹರೂಫ್ ಹತ್ತಿರದ ಚಿಕನ್ ಸ್ಟಾಲ್ ಅಂಗಡಿಯ ಗುರುರಾಜ್ ಬಳಿ ಕೇಳಿದ್ದರು. ರಾಡನ್ನು ಗುಜರಿ ಹೆಕ್ಕುವ ಬಾಬು ಒಯ್ದಿದ್ದಾಗಿ ಗುರುರಾಜ್ ಹೇಳಿದ್ದರು. ಅದೇ ವೇಳೆಗೆ, ಬಾಬು ಸ್ಥಳಕ್ಕೆ ಬಂದಿದ್ದು ಅವರ ಬಳಿಯೂ ಕಬ್ಬಿಣದ ರಾಡ್ ಒಯ್ದಿದ್ದೀಯಾ ಎಂದು ಮೆಹರೂಫ್ ಕೇಳಿದ್ದಾರೆ.
ಇದೇ ಸಂದರ್ಭದಲ್ಲಿ ಎ.ಎಸ್ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುವ ದೀಪಕ್ ಮೂಡುಶೆಡ್ಡೆ ಎಂಬಾತ ಪ್ರಶ್ನೆ ಮಾಡಿದ್ದು, ನೀನು ಅವನಲ್ಲಿ ಏನು ಕೇಳ್ತೀಯಾ.. ನೀನು ದೊಡ್ಡ ಜನವಾ ಎಂದು ಹೇಳಿ ಮುಂದೆ ಬಂದಿದ್ದು ಅಲ್ಲಿಯೇ ಇದ್ದ ಖಾಲಿ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ಮೆಹರೂಫ್ ತಲೆಗೆ ಗಾಯವಾಗಿದ್ದು ಕಂಕನಾಡಿ ಕೊಲಾಸೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಪಿ ದೀಪಕ್ ರಾಮಸೇನೆ ಸಂಘಟನೆ ಕಾರ್ಯಕರ್ತನಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಹಲವು ಠಾಣೆಗಳಲ್ಲಿ ಕೇಸು ದಾಖಲಾಗಿವೆ.
Mangalore Fight between mutton and chicken stall, Ram sene activist assaults man with beer bottle. The arrested has been identifed as Deepak Moodshede.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm